ಮಣಿಪಾಲ ಹಾಗೂ ಸುತ್ತಮುತ್ತ ಪಕ್ಷಿಗಳ ಸಂತತಿ ಕ್ಷೀಣ;ಬರ್ಡ್ಸ್‌ ಕ್ಲಬ್‌ ಸರ್ವೆ

ಕೇಳಿಸುತ್ತಿಲ್ಲ ಹಕ್ಕಿಗಳ ಕಲರವ

Team Udayavani, Feb 3, 2020, 5:17 AM IST

0202UDBB1B

ಕೆ.ಎಂ.ಸಿ ಫ‌ುಡ್‌ ಕೋರ್ಟ್‌ ಎರಡನೇ ಮಹಡಿಯಲ್ಲಿ ಪಕ್ಷಿಗಳ ಕುರಿತು ಪ್ರಾತ್ಯಕ್ಷಿಕೆ, ಚಿತ್ರ ರಚನೆ ನಡೆಯಿತು.

ಉಡುಪಿ: ಮಣಿಪಾಲ ಹಾಗೂ ಆಸುಪಾಸು ಪ್ರದೇಶಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪಕ್ಷಿಗಳ ಸಂತತಿ ಕ್ಷೀಣಿಸಿದೆ. ಹೊಸ ಪ್ರಭೇದ ಕಂಡುಬಂದಿಲ್ಲ. ಕಳೆದ 11 ವರ್ಷಗಳಿಂದ ಪಕ್ಷಿಗಳ ಉಳಿವಿಗೆ ಶ್ರಮಿಸುತ್ತಿರುವ ಮಣಿಪಾಲ ಬರ್ಡ್ಸ್‌ ಕ್ಲಬ್‌ ನಡೆಸಿದ ಪಕ್ಷಿ ವೀಕ್ಷಣೆ ವೇಳೆ ಈ ಅಂಶ ಬೆಳಕಿಗೆ ಬಂದಿದೆ.

ಅಭಿವದ್ಧಿ ಕಾರಣಕ್ಕೆ ವಿವಿಧೆಡೆ ಮರಗಳನ್ನು ಕಡಿಯಲಾಗಿದೆ. ಹಣ್ಣಿನ ಮರಗಳ ಕೊರತೆ ಇದೆ. ವಿವಿಧ ಮಾಲಿನ್ಯಗಳಿಂದ ಪಕ್ಷಿಗಳ ಸಂತತಿ ನಾಶಕ್ಕೆ ಮೂಲಕ ಕಾರಣಗಳಾಗಿವೆ.
ಕ್ಲಬ್‌ ವತಿಯಿಂದ ರವಿವಾರ ಪಕ್ಷಿ ವೀಕ್ಷಣೆಯನ್ನು ಸರಳೇಬೆಟ್ಟು, ಎಂಡ್‌ ಪಾಯಿಂಟ್‌, ಇಂದ್ರಾಳಿ, ಶೆಟ್ಟಿಬೆಟ್ಟು, ಕರ್ವಾಲು ಡಂಪಿಂಗ್‌ ಯಾರ್ಡ್‌, ದಶರಥ ನಗರ, ಶಾಂತಿನಗರ, ಹೆರ್ಗ ಮುಂತಾದ ಸ್ಥಳಗಳು ಸೇರಿದಂತೆ 15 ಕಡೆಗಳಲ್ಲಿ ನಡೆಸಲಾಯಿತು. ಮಣಿಪಾಲದಲ್ಲಿ 2019ರಲ್ಲಿ 137 ಪ್ರಬೇಧದ ಪಕ್ಷಿಗಳನ್ನು ಗುರುತಿಸಲಾಗಿದ್ದು, ಈ ವರ್ಷ 125 ಪ್ರಬೇಧದ ಪಕ್ಷಿಗಳನ್ನು ಗುರುತಿಸಲಾಗಿದೆ.

ಪ್ರತಿ ವರ್ಷ ಫೆಬ್ರವರಿ ಮೊದಲ ರವಿವಾರ ಬರ್ಡ್ಸ್‌ ಕ್ಲಬ್‌ ವತಿಯಿಂದ ಮಣಿಪಾಲದಲ್ಲಿ ಪಕ್ಷಿಗಳ ದಿನಾಚರಣೆ ನಡೆಯುತ್ತಿದೆ. ಆಸಕ್ತಿ ಉಳ್ಳವರು ಇದಕ್ಕೆ ಬರಬಹುದು. ಯಾವುದೇ ಸದಸ್ಯ ಶುಲ್ಕ ಇರುವುದಿಲ್ಲ. 5ರಿಂದ 70ರ ವಯಸ್ಸಿನವರು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕ್ಲಬ್‌ನಲ್ಲಿ 500 ಮಂದಿ ಇದ್ದು ಈ ಬಾರಿ 150 ಮಂದಿ ಪಾಲ್ಗೊಂಡಿದ್ದರು. ಪಕ್ಷಿ ಪ್ರೇಮಿಗಳು, ಹವ್ಯಾಸಿ ಛಾಯಾಚಿತ್ರಗ್ರಾಹಕರು ತಂಡದಲ್ಲಿದ್ದರು.

ವಿದೇಶಿ ಹಕ್ಕಿಗಳು ಬರುತ್ತಿವೆ
ಪ್ರತಿವರ್ಷ ಟಿಬೆಟ್‌, ಸರ್ಬಿಯ, ಇಂಗ್ಲೆಂಡ್‌, ಮಂಗೋಲಿಯ ಮೊದಲಾದ ಹೊರ ದೇಶಗಳಿಂದ ಗೋಲ್ಡನ್‌, ಓರಿಯಲ್‌, ಪ್ಯಾರಡೈಸ್‌, ಪ್ಲೋಕ್ಯಾಚರ್‌, ವಾಬುÉಡ್ಸ್‌ ಹಾಗೂ ಸಮುದ್ರ ತೀರದಲ್ಲಿ ನ ವೇಡರ್ ಹೀಗೆ ವಿವಿಧ ಜಾತಿಯ ಪಕ್ಷಿಗಳು ಈ ಭಾಗದಲ್ಲಿ ಕಂಡುಬರುತ್ತವೆ. ಅವುಗಳು ಹೆಚ್ಚಾಗಿ ಅಕ್ಟೋಬರ್‌-ಫೆಬ್ರವರಿ ನಡುವಿನ ಅವಧಿಯಲ್ಲಿ ಕಾಣ ಸಿಗುತ್ತವೆ.

ಕಾಗೆಗಳು ಕಾಣಿಸುತ್ತಿಲ್ಲ
ಪಕ್ಷಿಗಳಿಗೆ ವಾಸ ಮಾಡಲು ಮರಗಳು ಬೇಕು. ಇತ್ತೀಚಿನ ವರ್ಷಗಳಲ್ಲಿ ಕಾಗೆಗಳ ಸಂತತಿ ಕಡಿಮೆಯಾಗಿದೆ. ಮೈನಾ ಹಕ್ಕಿ ಜಾಸ್ತಿ ಆಗಿದೆ ಎನ್ನುವ ಅಂಶ ಕೂಡ ವೀಕ್ಷಣೆ ಸಂದರ್ಭ ಅರಿವಿಗೆ ಬಂದಿದೆ.

ಬೇಸಗೆಯಲ್ಲಿ ಬರ್ಡ್ಸ್‌ಬಾತ್‌ ಬೇಕು
ಪಕ್ಷಿಗಳ ಉಳಿವಿನಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು. ಹಕ್ಕಿಗಳಿಗೆ ನೀರು ಬಹುಮುಖ್ಯವಾಗಿ ಆವಶ್ಯಕ. ಬೇಸಗೆಯಲ್ಲಿ ನೀರಿಲ್ಲದೆ ಅವುಗಳು ಕೊರಗುತ್ತವೆ. ಹೀಗಾಗಿ ಪ್ರತಿ ಮನೆಗಳಲ್ಲಿ ಬರ್ಡ್ಸ್‌ ಬಾತ್‌ ನಿರ್ಮಿಸಿದಲ್ಲಿ ಸೂಕ್ತ. ಕನಿಷ್ಠ ತೆಂಗಿನ ಗಿರಟೆಯಂತಹ ಸಾಮಾನ್ಯ ವಸ್ತುಗಳಿಂದ ಅವುಗಳಿಗೆ ನೀರು ಒದಗಿಸುವತ್ತ ಗಮನಹರಿಸಬೇಕು.
-ನಾಗೇಂದ್ರ ನಾಯಕ್‌, ಅಮ್ಮುಂಜೆ, ಪಕ್ಷಿ ಪ್ರಿಯರು

ಪ್ರಾತ್ಯಕ್ಷಿಕೆ, ಕಾರ್ಯಾಗಾರ
ಮಣಿಪಾಲ ಕೆ.ಎಂ.ಸಿ ಫ‌ುಡ್‌ ಕೋರ್ಟ್‌ನ ಎರಡನೇ ಮಹಡಿಯಲ್ಲಿ ಪಕ್ಷಿಗಳ ಕುರಿತು ಕಾರ್ಯಾಗಾರ ನಡೆಯಿತು. ಅಧ್ಯಯನಶೀಲ ವ್ಯಕ್ತಿಗಳು ವಿಚಾರ ಮಂಡಿಸಿದರು. ಬೆಂಗಳೂರಿನ ಐಟಿ ಉದ್ಯೋಗಿ ಹವ್ಯಾಸಿ ಫೋಟೋಗ್ರಾಫ‌ರ್‌ ಆದಿತ್ಯ ಭಟ್‌ ವಿವಿಧ ಬಣ್ಣಗಳ 18 ಜಾತಿಯ ಪಕ್ಷಿಗಳ ಚಿತ್ರಗಳನ್ನು ಬಿಡಿಸಿದರು. ಪಕ್ಷಿಗಳ ಜೀವನಪದ್ಧತಿ, ಆಹಾರಪದ್ಧತಿ, ಚಲನವಲನ ಕುರಿತು ದೃಶ್ಯಾವಳಿಗಳನ್ನು ಪರದೆ ಮೂಲಕ ತೋರಿಸಲಾಯಿತು. ಕ್ಲಬ್‌ನ ನಾಗೇಂದ್ರ ನಾಯಕ್‌, ತೇಜಸ್ವಿ ಎಸ್‌. ಆಚಾರ್ಯ. ಪ್ರಭಾಕರ ಶಾಸ್ತ್ರಿ , ಮೋಹಿತ್‌ ಶೆಣೈ, ವೃಂದಾ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.