Udupi ಮಹಿಳಾ ನಿಲಯದಲ್ಲಿ ‘ತಾಳಿ ಕಟ್ಟುವ ಶುಭವೇಳೆ’
ಯುವತಿಯರಿಬ್ಬರಿಗೆ ಕಂಕಣ ಭಾಗ್ಯ; ಮದುಮಕ್ಕಳಿಗೆ ಧಾರೆ ಎರೆದ ಡಿಸಿ
Team Udayavani, Dec 20, 2023, 6:05 PM IST
ಉಡುಪಿ: ಮಾದರಿ ವಿವಾಹ ಕಾರ್ಯಕ್ರಮಕ್ಕೆ ನಿಟ್ಟೂರಿನಲ್ಲಿರುವ ಮಹಿಳಾ ನಿಲಯ ಸಾಕ್ಷಿಯಾಯಿತು. ನಾನಾ ಕಾರಣದಿಂದ ಮನೆಯವರಿಂದ ದೂರವಾಗಿ ಮಹಿಳಾ ಮತ್ತು ಕಲ್ಯಾಣ ಇಲಾಖೆಯ ನಿಟ್ಟೂರು ಮಹಿಳಾ ನಿಲಯದಲ್ಲಿ ಹಲವು ವರ್ಷಗಳಿಂದ ಆಶ್ರಯ ಪಡೆದಿರುವ ಇಬ್ಬರು ಯುವತಿಯರಿಗೆ ಕಂಕಣ ಭಾಗ್ಯ ನೆರೆವೇರಿತು.
ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕುಟುಂಬ ಹಿರಿಯರ ಸ್ಥಾನದಲ್ಲಿ ನಿಲ್ಲುವ ಮೂಲಕ ಇಬ್ಬರು ಯುವತಿಯರ ಕೌಟುಂಬಿಕ ಬದುಕಿನ ಭವಿಷ್ಯಕ್ಕೆ ನೆರವಾದರು.
ಶೀಲಾ ಅವರ ವಿವಾಹ ಕುಂದಾಪುರ, ಮೊಳಹಳ್ಳಿಯ ಕೃಷಿಕ ವೃತ್ತಿಯಲ್ಲಿರುವ ಗಣೇಶ ಶಾಸ್ತ್ರಿ ಅವರೊಂದಿಗೆ, ಕುಮಾರಿ ಅವರ ವಿವಾಹ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ, ಪ್ರಸ್ತುತ ಹೆಬ್ರಿಯಲ್ಲಿ ಅರ್ಚಕರಾಗಿರುವ ಶ್ರೀಧರ್ ಭಟ್ ಅವರೊಂದಿಗೆ ನೆರವೇರಿತು.
ಮಹಿಳಾ ನಿಲಯದ ಸಭಾಂಗಣದಲ್ಲಿ ವಿವಾಹ ಸಮಾರಂಭ ಏರ್ಪಡಿಸಲಾಯಿತು.
ಜಿಲ್ಲಾಧಿಕಾರಿ ಡಾ ಕೆ. ವಿದ್ಯಾಕುಮಾರಿ ಅವರು ಎರಡು ಜೋಡಿಗಳಿಗೆ ಧಾರೆ ಎರೆಯುವ ಮೂಲಕ ಹೆತ್ತವರ ಸ್ಥಾನ ತುಂಬಿದರು. ವಿವಾಹ ಕಾರ್ಯಕ್ರಮಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು, ವಿವಿಧ ಗಣ್ಯರು, ಪತ್ರಕರ್ತರು ಸಾಕ್ಷಿಯಾಗಿ ಜೋಡಿಗಳಿಗೆ ಶುಭಹಾರೈಸಿದರು.
ವಿವಾಹ ಭೋಜನಕ್ಕೆ ಅನ್ನ, ಸಾರು, ಪಲಾವ್, ಕುರ್ಮ, ಪಲ್ಯ, ಪಾಯಸ, ಲಡ್ಡು, ಮಜ್ಜಿಗೆ, ಜ್ಯೂಸ್, ಐಸ್ಕ್ರೀಂ ವ್ಯವಸ್ಥೆ ಮಾಡಲಾಗಿತ್ತು. ಸಮಾರಂಭದ ಅನಂತರ ಮಹಿಳಾ ನಿಲಯದ ಅಧೀಕ್ಷಕಿ ಪುಷ್ಪಾರಾಣಿ ಅವರ ಉಪಸ್ಥಿತಿಯೊಡನೆ ಉಪ ನೋಂದಣಿ ಕಚೇರಿಯಲ್ಲಿ ವಿವಾಹ ನೋಂದಣಿ ಪ್ರಕ್ರಿಯೆ ನಡೆಯಿತು.
ಜನಪ್ರತಿನಿಧಿ, ಅಧಿಕಾರಿಗಳಿಂದ ಶುಭಹಾರೈಕೆ
ಶಾಸಕ ಯಶ್ಪಾಲ್ ಸುವರ್ಣ, ಅಪರ ಜಿಲ್ಲಾಧಿಕಾರಿ ಮಮತಾ ದೇವಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ ಅರುಣ್ ಕೆ. ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ, ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತರಾದ ರಶ್ಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಶ್ಯಾಮಲಾ, ನಗರಸಭೆ ಸದಸ್ಯೆೆ ಸುಮಿತ್ರಾ ನಾಯಕ್, ಮಹಿಳಾ ನಿಲಯ ಅಧೀಕ್ಷಕಿ ಪುಷ್ಪಾರಾಣಿ, ವಿವಿಧ ಇಲಾಖೆ ಅಧಿಕಾರಿ, ಸಿಬಂದಿ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭಹಾರೈಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ
Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!