ಎಂಐಸಿ ರಜತ ಮಹೋತ್ಸವ: ಬ್ರ್ಯಾಂಡ್‌ಗೆ ಧರ್ಮ, ರಾಜಕೀಯ ಬೆರೆಸದಿರಿ: ಹರೀಶ್‌ ಬಿಜೂರ್‌


Team Udayavani, Jan 29, 2023, 12:52 AM IST

ಎಂಐಸಿ ರಜತ ಮಹೋತ್ಸವ: ಬ್ರ್ಯಾಂಡ್‌ಗೆ ಧರ್ಮ, ರಾಜಕೀಯ ಬೆರೆಸದಿರಿ: ಹರೀಶ್‌ ಬಿಜೂರ್‌

ಮಣಿಪಾಲ: ಹೊಸ ಬ್ರ್ಯಾಂಡ್‌ ಸೃಷ್ಟಿಸುವ ಸಂದರ್ಭದಲ್ಲಿ ಧರ್ಮ ಮತ್ತು ರಾಜಕೀಯವನ್ನು ದೂರ ವಿಡದಿದ್ದರೆ ಬ್ರ್ಯಾಂಡ್‌ನ‌ಲ್ಲಿ ತಂದಾಗ ವಿಭಜನೆಯ ಹಲವು ಆಯಾಮಗಳು ಹುಟ್ಟಿಕೊಳ್ಳುತ್ತವೆ ಎಂದು ಬ್ರ್ಯಾಂಡ್‌ ಗುರು ಸಂಸ್ಥಾಪಕ ಹರೀಶ್‌ ಬಿಜೂರ್‌ ಹೇಳಿದರು.

ಮಣಿಪಾಲ್‌ ಇನ್‌ಸ್ಟಿಟ್ಯೂಟ್‌ ಆಫ್ ಕಮ್ಯುನಿಕೇಶನ್‌(ಎಂಐಸಿ)ಯ ರಜತ ಮಹೋತ್ಸವ ಮತ್ತು ಹಳೆ ವಿದ್ಯಾರ್ಥಿಗಳ ಸಹಮಿಲನ ಕಾರ್ಯ ಕ್ರಮವನ್ನು ಶನಿವಾರ ಹೊಟೇಲ್‌ ಫಾರ್ಚೂನ್‌ ವ್ಯಾಲಿವ್ಯೂನಲ್ಲಿ ಉದ್ಘಾ ಟಿಸಿ, “ಮೈಂಡ್‌ ದಿ ಗ್ಯಾಪ್‌- ದಿ ಕಮ್ಯೂ ನಿಕೇಶನ್‌ ಗ್ಯಾಪ್‌’ ಎಂಬ ವಿಷಯದ ಕುರಿತು ಅವರು ಮಾತನಾಡಿದರು.

ಸಂವಹನ ವ್ಯವಸ್ಥೆಯೂ ಪ್ರಸ್ತುತ ತಂತ್ರಜ್ಞಾನಕ್ಕೆ ಪೂರಕವಾಗಿ ಬದಲಾಗುತ್ತಿದೆ. ಅದಕ್ಕೆ ಸರಿಯಾಗಿ ಎಂಐಸಿ ಕೂಡ ಒಗ್ಗಿಕೊಳ್ಳುತ್ತಿದೆ. ಸಾಮಾಜಿಕ ಜಾಲತಾಣದ ಜತೆಗೆ ಚಾಟ್‌ ಜಿಟಿಪಿ ಸಂವಹನ ಕ್ಷೇತ್ರದಲ್ಲಿ ಹಲವು ಬದಲಾವಣೆ ತರಲಿದೆ. ಸಂವಹನ ಒಂದು ಭಾಷೆಗೆ ಸೀಮಿತವಲ್ಲ. ಯಾವ ಭಾಷೆಯನ್ನು ಆಯ್ಕೆ ಮಾಡಿಕೊಂಡು ಎಷ್ಟು ಪರಿಣಾಮಕಾರಿಯಾಗಿ ಜನರಿಗೆ ವಿಷಯ ತಲುಪಿಸುತ್ತೇವೆ ಎಂಬುದೇ ಮುಖ್ಯ. ನಾವೇನು ಮಾಡಬೇಕು ಎಂಬುದನ್ನು ಜನರು ಹೇಳುವ ಕಾಲ ಬರುತ್ತಿದೆ. ಹೀಗಾಗಿ ಸಂವಹನದ ಸವಾಲಿಗೂ ಸಜ್ಜಾಗಬೇಕು ಎಂದರು.

ಮಣಿಪಾಲದಲ್ಲಿ ಯುವ ಸಂಪತ್ತು
ಮಣಿಪಾಲ ದೇಶದ ಯುವನಗರ. ಇಲ್ಲಿ ಸದಾ ಸರಾಸರಿ 23 ವರ್ಷದವರೇ ಹೆಚ್ಚು. ದೇಶದ ಯಾವ ನಗರದಲ್ಲೂ ಈ ರೀತಿಯಿಲ್ಲ. ಮಣಿಪಾಲ ಸಣ್ಣ ನಗರವಾದರೂ ಯುವ ಸಂಪತ್ತು ಹೆಚ್ಚಿದೆ ಎಂದು ಬಣ್ಣಿಸಿದರು.

ಮಾಹೆ ವಿ.ವಿ. ಸಹ ಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಮಾತ ನಾಡಿ, ಯುವ ಸಂಪತ್ತು ದೇಶದ ನಿಜವಾದ ಭವಿಷ್ಯ. ಈ ವಿಷಯದಲ್ಲಿ ಮಣಿಪಾಲ ಹೆಮ್ಮೆ ಪಡುವಂತಿದೆ. ಇಲ್ಲಿ ಯುವ ಜನರೇ ಹೆಚ್ಚಿದ್ದಾರೆ. ಎಂ.ವಿ. ಕಾಮತ್‌ ಅವರು ಬೆಳೆಸಿದ ಕೂಸು ಎಂಐಸಿ. ಅವರ ದೂರದೃಷ್ಟಿಯ ಜತೆಗೆ ಹಿಂದಿನ, ಈಗಿನ ನಿರ್ದೇಶಕರು, ಸಿಬಂದಿ ವಿದ್ಯಾರ್ಥಿ ಸಮೂಹದ ಕಾರ್ಯ ಸಾಧನೆ ಈ ಬೆಳವಣಿಗೆಯ ಮೆಟ್ಟಿಲಾಗಿದೆ ಎಂದರು.

ಮಾಹೆ ವಿ.ವಿ. ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್‌ ಮಾತನಾಡಿ, ಎಂಐಸಿ ಸ್ಥಾಪನೆ ಹಾಗೂ ಪ್ರಸ್ತುತ ಬೆಳೆದು ಬಂದಿರುವ ಹಾದಿಯ ಜತೆಗೆ ಡಾ| ಟಿಎಂಎ ಪೈ, ಡಾ| ರಾಮದಾಸ ಪೈ, ಎಂ.ವಿ.ಕಾಮತ್‌ ಅವರ ಕಾರ್ಯ ವನ್ನು ಸ್ಮರಿಸಿದರು.

ಸಮ್ಮಾನ
ಎಂಐಸಿ ನಿರ್ದೇಶಕಿ ಡಾ| ಪದ್ಮ ರಾಣಿ, ಮಾಜಿ ನಿರ್ದೇಶಕರಾದ ಡಾ| ಬೊರೊಶಿವದಾಸ್‌ ಗುಪ್ತ, ಡಾ| ವರದೇಶ ಹಿರೇಗಂಗೆ ಹಾಗೂ ಎಂಐಸಿ ಮೊದಲ ಬ್ಯಾಚ್‌ನ ವಿದ್ಯಾರ್ಥಿಗಳಾದ ಶರತ್‌ ಕುಮಾರ್‌, ವನಿತಾ ಪೈ, ಅಲೋಕ್‌ ಸಿಂಗ್‌ ಅವರನ್ನು ಸಮ್ಮಾನಿ ಸಲಾಯಿತು. ಹಲವು ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಸಿಬಂದಿಯನ್ನು ಅಭಿನಂದಿಸಲಾಯಿತು.

ವಿ.ವಿ. ಸಹ ಕುಲಪತಿ ಡಾ| ನಾರಾಯಣ ಸಭಾಹಿತ್‌, ಎಂಐಟಿ ನಿರ್ದೇಶಕ ಕ| ಡಾ| ಅನಿಲ್‌ ರಾಣ, ಡಾ| ಎಚ್‌.ಎಸ್‌. ಬಲ್ಲಾಳ್‌ ಅವರ ಪತ್ನಿ ಇಂದಿರಾ ಬಲ್ಲಾಳ್‌ ಸೇರಿದಂತೆ ವಿ.ವಿ.ಯ ಅಧಿಕಾರಿಗಳು ಉಪಸ್ಥಿತರಿದ್ದರು. ಎಂಐಸಿ ನಿರ್ದೇಶಕಿ ಡಾ| ಪದ್ಮ ರಾಣಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಪ್ರಾಧ್ಯಾಪಿಕೆ ಡಾ| ಶುಭಾ ಎಚ್‌.ಎಸ್‌. ವಂದಿಸಿದರು. ವಿದ್ಯಾರ್ಥಿಗಳು ಕಾರ್ಯಕ್ರಮ ನಿರೂಪಿಸಿದರು.

ಟಾಪ್ ನ್ಯೂಸ್

1-fsadsdsd

ಉಪನಾಮ ವಿವಾದ:ರಾಹುಲ್ ಗಾಂಧಿ ವಿರುದ್ಧ ಆಕ್ರೋಶ ಹೊರ ಹಾಕಿದ ಲಲಿತ್ ಮೋದಿ

tdy-19

ಉಳ್ಳಾಲ: ಹೆಜ್ಜೇನು ದಾಳಿಗೆ ಬಾವಿಯಲ್ಲಿ ಅಡಗಿ ಕುಳಿತ 79 ರ ವೃದ್ಧ

TDY-18

ಬುಡಕಟ್ಟು ಕುಟುಂಬಕ್ಕೆ ಥಿಯೇಟರ್ ಪ್ರವೇಶ ನಿರಾಕರಣೆ: ಥಿಯೇಟರ್‌ ವಿರುದ್ದ ನೆಟ್ಟಿಗರು ಗರಂ

Arjun Tendulkar To Debut For Mumbai Indians In IPL 2023?

ಈ ಬಾರಿಯಾದರೂ ಅರ್ಜುನ್ ತೆಂಡೂಲ್ಕರ್ ಗೆ ಸಿಗುತ್ತಾ ಚಾನ್ಸ್?: ಉತ್ತರ ನೀಡಿದ ರೋಹಿತ್

1-asd-adas-d

ರಾಜಕೀಯ ವಿವಾದ; ಮೊಸರು ಪ್ಯಾಕೆಟ್‌ಗಳ ಮೇಲೆ ಪ್ರಾದೇಶಿಕ ಹೆಸರು!

r madhav jos

ಜೋಸ್‌ ಆಲುಕ್ಕಾಸ್‌ನ ಪ್ಯಾನ್‌ ಇಂಡಿಯಾ ಬ್ರಾಂಡ್‌ ಅಂಬಾಸಿಡರ್‌ ಆಗಿ ಆರ್‌. ಮಾಧವನ್‌ ಆಯ್ಕೆ

ರಾಮನವಮಿ 2023: ಬಾವಿ ಮೇಲಿನ ಸಿಮೆಂಟ್ ಹಾಸು ಕುಸಿತ; ಬಾವಿಯೊಳಗೆ ಬಿದ್ದ 25 ಭಕ್ತರು…

ರಾಮನವಮಿ 2023: ಬಾವಿ ಮೇಲಿನ ಸಿಮೆಂಟ್ ಹಾಸು ಕುಸಿತ; ಬಾವಿಯೊಳಗೆ ಬಿದ್ದ 25 ಭಕ್ತರು…



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚುನಾವಣೆ ಅಕ್ರಮ ತಡೆಗೆ ಹದ್ದಿನ ಕಣ್ಣು: ತಪಾಸಣೆ ಬಿಗಿ 

ಚುನಾವಣೆ ಅಕ್ರಮ ತಡೆಗೆ ಹದ್ದಿನ ಕಣ್ಣು: ತಪಾಸಣೆ ಬಿಗಿ 

ಮದ್ಯಪಾನ ಮಾಡಿ ಮಲಗಿದ್ದ ವ್ಯಕ್ತಿಯನ್ನು ಎಬ್ಬಿಸಿ ಉಪಚರಿಸಿ ಮಾನವೀಯತೆ ಮೆರೆದ ಡಿಸಿ, ಎಸ್‌ಪಿ

ಮದ್ಯಪಾನ ಮಾಡಿ ಮಲಗಿದ್ದ ವ್ಯಕ್ತಿಯನ್ನು ಎಬ್ಬಿಸಿ ಉಪಚರಿಸಿ ಮಾನವೀಯತೆ ಮೆರೆದ ಡಿಸಿ, ಎಸ್‌ಪಿ

ಜಿಲ್ಲಾದ್ಯಂತ ಚುನಾವಣೆಗೆ ಸಕಲ ಸಿದ್ಧತೆ: ಉಡುಪಿ ಡಿ.ಸಿ.

ಜಿಲ್ಲಾದ್ಯಂತ ಚುನಾವಣೆಗೆ ಸಕಲ ಸಿದ್ಧತೆ: ಉಡುಪಿ ಡಿ.ಸಿ.

ಕುಡಿಯುವ ನೀರು ಪೂರೈಕೆಗೆ ಕ್ರಮ: ಉಡುಪಿ ಡಿ.ಸಿ

ಕುಡಿಯುವ ನೀರು ಪೂರೈಕೆಗೆ ಕ್ರಮ: ಉಡುಪಿ ಡಿ.ಸಿ

ಸಾಲದ ಬಾಕಿ ಅರ್ಜಿ ತ್ವರಿತ ವಿಲೇವಾರಿಗೆ ಸೂಚನೆ

ಸಾಲದ ಬಾಕಿ ಅರ್ಜಿ ತ್ವರಿತ ವಿಲೇವಾರಿಗೆ ಸೂಚನೆ

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

ಬೆಳ್ತಂಗಡಿ: ಸವಣಾಲು ಬಳಿ ಎರಡು ಬೈಕ್‌ಗಳ ಮಧ್ಯೆ ಅಪಘಾತ; ಓರ್ವ ಸಾವು

ಬೆಳ್ತಂಗಡಿ: ಸವಣಾಲು ಬಳಿ ಎರಡು ಬೈಕ್‌ಗಳ ಮಧ್ಯೆ ಅಪಘಾತ; ಓರ್ವ ಸಾವು

1-fsadsdsd

ಉಪನಾಮ ವಿವಾದ:ರಾಹುಲ್ ಗಾಂಧಿ ವಿರುದ್ಧ ಆಕ್ರೋಶ ಹೊರ ಹಾಕಿದ ಲಲಿತ್ ಮೋದಿ

sushmita bhat is in kannada movie chow chow bath

‘ಚೌಚೌ ಬಾತ್‌’ ನಲ್ಲಿ ರೊಮ್ಯಾಂಟಿಕ್ ಡ್ರಾಮಾ

tdy-19

ಉಳ್ಳಾಲ: ಹೆಜ್ಜೇನು ದಾಳಿಗೆ ಬಾವಿಯಲ್ಲಿ ಅಡಗಿ ಕುಳಿತ 79 ರ ವೃದ್ಧ

TDY-18

ಬುಡಕಟ್ಟು ಕುಟುಂಬಕ್ಕೆ ಥಿಯೇಟರ್ ಪ್ರವೇಶ ನಿರಾಕರಣೆ: ಥಿಯೇಟರ್‌ ವಿರುದ್ದ ನೆಟ್ಟಿಗರು ಗರಂ