ಕ್ಷೀರಕ್ರಾಂತಿಯ ಕನಸು; ಸಹಕಾರಿ ರಂಗದ ಸೆಳೆತದಿಂದ ಹುಟ್ಟಿದ ಸಂಘ

ತೆಂಕ ಎರ್ಮಾಳು ಹಾಲು ಉತ್ಪಾದಕರ ಸಂಘ

Team Udayavani, Feb 15, 2020, 6:59 AM IST

ksheera-kranti

ಊರಿನಲ್ಲೊಂದು ಹಾಲು ಉತ್ಪಾದಕರ ಸಂಘ ಸ್ಥಾಪಿಸಿ ಎಲ್ಲರಿಗೂ ನೆರವಾಗಬೇಕು ಎಂದು ಮುಸ್ಲಿಂ ಬಾಂಧವರು ಕಂಡುಕೊಂಡ ಕನಸು ಸಾಕಾರಗೊಂಡು ಇದೀಗ ಹೆಮ್ಮರವಾಗಿದೆ. ಗುಣಮಟ್ಟದ ಹಾಲು ಒದಗಿಸುವ ಮೂಲಕ ಸಂಘ ಜಿಲ್ಲೆಗೇ ಮಾದರಿ ಸಂಘವೂ ಆಗಿದೆ.

ಪಡುಬಿದ್ರಿ: ತೆಂಕ ಎರ್ಮಾಳು ಹಾಲು ಉತ್ಪಾದಕರ ಸಂಘ ಹುಟ್ಟಿಕೊಂಡ ಹಿಂದಿನ ಕಥೆ ನಿಜಕ್ಕೂ ವಿಶಿಷ್ಟ. ತೆಂಕ ಗ್ರಾಮದ ಶಬ್ಬೀರ್‌ಖಾನ್‌ ಹಾಗೂ ನಿಸಾರ್‌ ಅಹ್ಮದ್‌ ಮನೆ ಮನೆಗೆ ತೆರಳಿ ಹಾಲು ಸಂಗ್ರಹಿಸುತ್ತಾ ಮಾರಾಟಕ್ಕೆ ತೊಡಗಿದ್ದ ಕಾಲವದು. ಇವರ ಮೇಲೆ ಕೆಮುಲ್‌ ಹಾಗೂ ಕೆನರಾ ಹಾಲು ಒಕ್ಕೂಟ ಪ್ರಭಾವ ಬೀರಿತ್ತು.

ಕ್ಷೀರಕ್ರಾಂತಿಯ ಧ್ಯೇಯ
ಮುಸ್ಲಿಂ ಅಲ್ಪಸಂಖ್ಯಾತರಾಗಿದ್ದರೂ ಸಹಕಾರಿ ರಂಗ ಇವರನ್ನು ಬಹುವಾಗಿ ಸೆಳೆದಿದ್ದು, ಸಂಘದ ಸ್ಥಾಪನೆಗೆ ನಾಂದಿಯಾಯಿತು. ಸಹಕಾರಿ ತತ್ವದ ಮೇಲೆ ನಂಬಿಕೆಯಿರಿಸಿ, ಶುಭ್ರ ಶ್ವೇತ ಕ್ರಾಂತಿಯ ಧ್ಯೇಯದೊಂದಿಗೆ 66 ಹೈನುಗಾರ ಸದಸ್ಯರನ್ನು ಕಲೆ ಹಾಕಿದರು. ಸಂಘದ ಬೈಲಾ ತಯಾರಾಗಿತ್ತು. ಅದರಂತೆ ಎರ್ಮಾಳು ಬೀಡು ಅಶೋಕರಾಜರ ನೇತೃತ್ವದಲ್ಲಿ ತೆಂಕ ಎರ್ಮಾಳು ಹಾಲು ಉತ್ಪಾದಕರ ಸಹಕಾರ ಸಂಘವು 1987 ಅ.12ರಂದು ಸ್ಥಾಪನೆಯಾಯಿತು. ಆಗ ಸಂಘದ ಕಾರ್ಯದರ್ಶಿಯಾದವರು ಶಬ್ಬೀರ್‌ಖಾನ್‌ ಅವರೇ.

ಅತಿ ಹೆಚ್ಚು ಡಿವಿಡೆಂಡ್‌
ಸ್ಥಾಪಕ ಅಧ್ಯಕ್ಷರಾಗಿ ಎರ್ಮಾಳು ಬೀಡು ಅಶೋಕರಾಜ ಅವರು ಸಂಘದ ಬೆಳವಣಿಗೆಯನ್ನು ಅಂದಿನಿಂದಲೂ ಪ್ರೋತ್ಸಾಹಿಸುತ್ತಲೇ ಬಂದಿದ್ದಾರೆ. ಸಂಘದ ಸದಸ್ಯರಿಗೆ ವಾರ್ಷಿಕ 25ಶೇಕಡಾ ಡಿವಿಡೆಂಡನ್ನು ಕಳೆದ ಐದು ವರ್ಷಗಳಿಂದಲೂ ನೀಡುತ್ತಲೇ ಬಂದಿದೆ. ರೈತರಿಗೆ ಉತ್ತಮ ಬೋನಸ್‌ ವಿತರಿಸಲಾಗುತ್ತಿದೆ. ಸದಸ್ಯರ ನಡುವೆ ಮೂರು ಸ್ವಸಹಾಯ ಸಂಘಗಳನ್ನು ನಿರ್ವಹಿಸಲಾಗುತ್ತಿದೆ. ಸದಸ್ಯರನ್ನು ಪ್ರತಿ ವರ್ಷವೂ ಹೈನುರಾಸು ನಿರ್ವಹಣಾ ತರಬೇತಿಗಾಗಿ ಅಷ್ಟೇ ಅಲ್ಲದೆ ಹಾಸನ, ಕೋಟ, ಕಬ್ಬಿನಾಲೆ ಮುಂತಾದೆಡೆಗಳಿಗೆ ಅಧ್ಯಯನ ಪ್ರವಾಸಕ್ಕೂ ಕರೆದೊಯ್ಯಲಾಗಿದೆ.

ಅನುದಾನ, ವಿಮೆ
ಒಕ್ಕೂಟದ ಮೂಲಕ ಸಿಗುವ ಅನುದಾನದ ಹೊರತಾಗಿ ಹಾಲು ಕರೆಯುವ ಯಂತ್ರಗಳಿಗೆ, ರಬ್ಬರ್‌ ಮ್ಯಾಟ್‌ಗೆ ಹಾಗೂ ಅಜೋಲಾ ತೊಟ್ಟಿಗಳಿಗೆ ಸಂಘವೂ ಕಿಂಚಿತ್‌ ಅನುದಾನ ಸದಸ್ಯರಿಗೆ ನೀಡುತ್ತಿದೆ. ರೈತರ ಕಲ್ಯಾಣ ಟ್ರಸ್ಟ್‌, ರಾಷ್ಟ್ರೀಯ ಜಾನುವಾರು ವಿಮೆ ಯೋಜನೆಯಡಿ ರಾಸುಗಳಿಗೆ ವಿಮೆ, ಸದಸ್ಯರಿಗೂ ವಿಮೆ ಒದಗಿಸಲಾಗುತ್ತಿದೆ. ಹಾಲು ದಿನ, ಸಹಕಾರಿ ಸಪ್ತಾಹಗಳನ್ನು ಒಕ್ಕೂಟದ ಪ್ರಾಯೋಜನೆಯಲ್ಲಿ ಸಂಘವು ನಡೆಸುತ್ತಿದೆ.

ಸಂಘದ ಸದಸ್ಯರಿಗೆ ನೇತ್ರ ತಪಾಸಣೆ, ಬ್ಲಿಡ್‌ಕಾÂಂಪ್‌, ರಕ್ತದೊತ್ತಡ, ಮಧುಮೇಹ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ. ತೆಂಕ ಎರ್ಮಾಳು ಗ್ರಾಮ ಶಾಲೆಗಳಲ್ಲಿ ನಡೆಯುವ ಶಾಲಾ ಮಕ್ಕಳ ಪ್ರತಿಭಾ ಕಾರಂಜಿ, ವಿವಿಧ ಪಂದ್ಯಾಕೂಟಗಳಿಗೆ ಸಂಘವು ಉಚಿತವಾಗಿ ಹಾಲನ್ನು ಸರಬರಾಜು ಮಾಡಿದೆ.

ಪ್ರಶಸ್ತಿಗಳು
2004 – 05 ಉತ್ತಮ ಗುಣಮಟ್ಟದ ಹಾಲು ಸಂಗ್ರಹಕ್ಕಾಗಿ ಬಹುಮಾನ , 4 ಬಾರಿ ತಾಲೂಕು ಮಟ್ಟದಲ್ಲಿ ಪ್ರಥಮ, 3 ಬಾರಿ ತಾಲೂಕು ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿರುವ ಈ ಸಂಘವು 2018 – 19ರಲ್ಲಿ ಜಿಲ್ಲೆಯ ಸಂಘಗಳಲ್ಲೇ ಪ್ರಥಮ ಸ್ಥಾನಿಯಾಗಿತ್ತು. ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಕೂಡ 2011-12 ಮತ್ತು 2016-17ನೇ ಸಾಲಿನಲ್ಲಿ ಸಾಧನಾ ಪ್ರಶಸ್ತಿ ನೀಡಿದೆ.

ಈ ಸಂಘವನ್ನು ಮುಸ್ಲಿಂ ಬಾಂಧವರು ಆರಂಭಿಸಿದ್ದು, ಹಾಲಿನ ಗುಣಮಟ್ಟವನ್ನು ಅತ್ಯುತ್ತಮವಾಗಿ ಕಾಪಿಟ್ಟುಕೊಂಡಿದ್ದರಿಂದಲೇ ಇಂದು ಹೆಮ್ಮರವಾಗಿ ಬೆಳೆದಿದೆ. ಪ್ರತಿ ವರ್ಷ ಸದಸ್ಯ ಬಲವನ್ನು ಹೆಚ್ಚಿಸಿಕೊಳ್ಳುತ್ತಿದ್ದು, ಸದಸ್ಯರ ಪ್ರೋತ್ಸಾಹವೇ ಸಂಘದ ಬೆಳವಣಿಗೆ ಮತ್ತು ಜಿಲ್ಲೆಯಲ್ಲೇ ಪ್ರಥಮ ಸ್ಥಾನಿಯಾಗಲು ಕಾರಣ.
– ಅಶೋಕರಾಜ ಎರ್ಮಾಳು, ಅಧ್ಯಕ್ಷರು

ಟಾಪ್ ನ್ಯೂಸ್

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

5-congress

Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್‌ರಾಜ್‌ ಮೌರ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.