ಉಡುಪಿ: ಸಾಮಾಜಿಕ ಜಾಲತಾಣಕ್ಕೆ ಉತ್ತರ ಭಾರತದ ವಂಚಕರ ಕಣ್ಣು


Team Udayavani, Aug 9, 2021, 8:00 AM IST

ಉಡುಪಿ: ಸಾಮಾಜಿಕ ಜಾಲತಾಣಕ್ಕೆ ಉತ್ತರ ಭಾರತದ ವಂಚಕರ ಕಣ್ಣು

ಉಡುಪಿ: ಉಡುಪಿ ಜಿಲ್ಲೆಯಲ್ಲಿ ದರೋಡೆ, ಕಳ್ಳತನ ಪ್ರಕರಣಕ್ಕಿಂತಲೂ ಆನ್‌ಲೈನ್‌ ಮೂಲಕ ವಂಚನೆ ಮಾಡುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಸೆನ್‌ ಠಾಣೆ ಯಲ್ಲಿ ಚಿತ್ರ-ವಿಚಿತ್ರ ಪ್ರಕರಣಗಳು ದಾಖಲಾಗುತ್ತಿರುವುದು ಪೊಲೀಸರಿಗೂ ಸವಾಲಾಗುತ್ತಿದೆ.

ಮುಖ್ಯವಾಗಿ ಫೇಸ್‌ಬುಕ್‌ ಮೆಸೆಂಜರ್‌ನಲ್ಲಿ ನಮ್ಮ ಗೆಳೆಯರೆನಿಸಿಕೊಂಡವರ ಭಾವಚಿತ್ರ ಹಾಕಿ ಅದೇ ಹೆಸರಿನಲ್ಲಿ ಸಂದೇಶ  ಕಳುಹಿಸಿ ಹಣಕ್ಕೆ ಬೇಡಿಕೆ ಇರಿಸುವ ಘಟನೆ ದಿನಂಪ್ರತಿ ನಡೆಯುತ್ತಿವೆ. ಜಿಲ್ಲೆಯ ಜಿಲ್ಲಾಧಿಕಾರಿಗಳ ಹೆಸರಿ ನಲ್ಲಿಯೂ 4ರಿಂದ 5 ಬಾರಿ ಹಲವು ಮಂದಿಗೆ ಇಂತಹ ಸಂದೇಶಗಳು ರವಾನೆ ಯಾಗಿವೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಅಶ್ಲೀಲ ವೀಡಿಯೋ:

ಪೇಸ್‌ಬುಕ್‌ ಮೆಸೆಂಜರ್‌ಗೆ ಪರಿಚಿತ ರಂತೆ ಸಂದೇಶ ಕಳುಹಿಸಿ ಮೊಬೈಲ್‌ ಸಂಖ್ಯೆ ಪಡೆದುಕೊಂಡು ಕೆಲವೇ ಕ್ಷಣ ಗಳಲ್ಲಿ ವೀಡಿಯೋ ಕರೆ ಮಾಡುತ್ತಾರೆ. ಆ  ಕಡೆಯಿಂದ ಯಾವುದೇ ಚಿತ್ರ ಕಂಡು ಬರುವುದಿಲ್ಲ. ಈ ವೇಳೆ ನಮ್ಮ ಮುಖಚಿತ್ರ ವುಳ್ಳ ವೀಡಿಯೋ ತೆಗೆದು ಅದಕ್ಕೆ ಅಶ್ಲೀಲ ವಿಡಿಯೋಗಳನ್ನು ಎಡಿಟ್‌ ಮಾಡಿ ನಮ್ಮನ್ನು  ಬೆದರಿಸುತ್ತಾರೆ. ಇಂತಿಷ್ಟು ಹಣ ನೀಡ ಬೇಕು; ಇಲ್ಲದಿದ್ದರೆ ನಿಮ್ಮ ಫೇಸ್‌ಬುಕ್‌ನಲ್ಲಿರುವ ಎಲ್ಲರಿಗೂ ಈ ವೀಡಿಯೋವನ್ನು ಕಳುಹಿಸುವ ಬೆದರಿಕೆ ಒಡ್ಡಲಾಗುತ್ತದೆ. ಹೆಚ್ಚಿನವರು ಇಂತಹ ಸಂದೇಶಗಳಿಗೆ ಹೆದರಿ ಅವರು ಕೇಳಿದಷ್ಟು ಹಣ ನೀಡುವ ಘಟನೆಗಳೂ ನಡೆಯುತ್ತಿವೆ.

ವಿದ್ಯಾರ್ಥಿಗಳು, ಗಣ್ಯ ವ್ಯಕ್ತಿಗಳೇ ಟಾರ್ಗೆಟ್‌:

ಇಂತಹ ಸಂದೇಶಗಳನ್ನು ವಿದ್ಯಾರ್ಥಿ ಗಳು ಹಾಗೂ ಗಣ್ಯವ್ಯಕ್ತಿಗಳನ್ನು ಕೇಂದ್ರೀ ಕರಿಸಿಕೊಂಡು ಮಾಡಲಾಗುತ್ತದೆ. ವಿದ್ಯಾರ್ಥಿಗಳು ಬೇಗನೆ ಹೆದರಿ ಹಣ ನೀಡುತ್ತಾರೆ ಎಂಬುದು ಒಂದು ಕಾರಣ ವಾದರೆ; ತಮ್ಮ ಘನತೆ ಹರಾಜಾಗಬಾರದು ಎಂದು ಗಣ್ಯ ವ್ಯಕ್ತಿಗಳು ಹಣ ನೀಡ ಬಹುದು ಎಂಬ ಉದ್ದೇಶ ಕೃತ್ಯ ಮಾಡುವವರದ್ದಾಗಿರುತ್ತದೆ. ತಪ್ಪಿ ಒಂದು ವೇಳೆ ಹಣ ನೀಡಿದ್ದೇ ಆದಲ್ಲಿ ಮತ್ತೆ, ಮತ್ತೆ ಹಣಕ್ಕೆ ಬೇಡಿಕೆ ಇಡುತ್ತಲೇ ಬರುತ್ತಾರೆ.

ಉತ್ತರಭಾರತ ಮೂಲದವರ ಕೃತ್ಯ:

ಇಂತಹ ಕೃತ್ಯಗಳು ಉಡುಪಿ ಮಾತ್ರ ವಲ್ಲದೆ ದೇಶಾದ್ಯಂತವೂ ನಡೆಯುತ್ತಿದೆ. ಇದರ ಬೆನ್ನುಹತ್ತಿ ಹೋದರೆ ಸಿಗುವುದು ಯುಪಿ, ಹರಿಯಾಣ, ಪಶ್ಚಿಮ ಬಂಗಾಳ,  ಹೊಸದಿಲ್ಲಿಯ ಮಂದಿ. ನಮ್ಮ ಸಾಮಾಜಿಕ  ಜಾಲತಾಣದಲ್ಲಿರುವ ಎಲ್ಲ ಚಿತ್ರ, ಮಾಹಿತಿ ತೆಗೆದುಕೊಂಡು ಅದರಂತೆ ನಕಲಿ ಖಾತೆ ಸೃಷ್ಟಿಸಿ ಇಂತಹ ಚಟುವಟಿಕೆಗಳನ್ನು ಅವರು ನಡೆಸುತ್ತಿದ್ದಾರೆ. ಕೃತ್ಯ ನಡೆಸಿದವರ ದೂರವಾಣಿ ಸಂಖ್ಯೆ ಟ್ರೇಸ್‌ ಆದರೂ ವ್ಯಕ್ತಿ ಯಾರೆಂಬುವುದು ತಿಳಿಯುವುದಿಲ್ಲ.

ಮಾಹಿತಿ ವಿಳಂಬ:

ಇಂತಹ ಘಟನೆಗಳ ಬಗ್ಗೆ ದೂರು ಸ್ವೀಕರಿಸಿದ ಬಳಿಕ ಪೊಲೀಸರು ಸಾಮಾ ಜಿಕ  ಜಾಲತಾಣಗಳಾದ ಫೇಸ್‌ಬುಕ್‌, ಗೂಗಲ್‌,  ಇನ್ಸ್‌ಟಾಗ್ರಾಮ್‌, ಟ್ವಿಟರ್‌ಗಳಿಗೆ ಹೆಚ್ಚಿಸಿ  ವಿವರ ನೀಡುವಂತೆ ಸಂದೇಶ ರವಾನಿಸುತ್ತಾರೆ. ಆದರೆ ಇಲ್ಲಿಂದ ಬರುವ ಸಂದೇಶಗಳು ವಿಳಂಬ ವಾಗುತ್ತಿರುವುದರಿಂದ ಕೂಡ  ಆರೋಪಿಗಳ ಪತ್ತೆಕಾರ್ಯ ಕಷ್ಟಕರವಾಗುತ್ತಿದೆ. ಅದ ರಲ್ಲೂ ಟ್ವಿಟರ್‌ ಸಂಸ್ಥೆಯವರು ಯಾವ ನೋಟಿಸ್‌ಗೂ ಕ್ಯಾರೇ ಮಾಡುತ್ತಿಲ್ಲ. ಅಮೆರಿಕಾ, ಯುಕೆ ಕಚೇರಿಯಲ್ಲಿ ಕೇಳಿ ಎಂಬ ಉತ್ತರ ಲಭಿಸುತ್ತದೆ.

ಬದಲಾಗಬೇಕಿದೆ ಪೊಲೀಸರ ಕಾರ್ಯವೈಖರಿ :

ಹಲ್ಲೆ, ದರೋಡೆ, ಕಳ್ಳತನ ಪ್ರಕರಣಗಳನ್ನು ತ್ವರಿತಗತಿಯಲ್ಲಿ ಪತ್ತೆಹಚ್ಚುವ ಪೊಲೀಸರಿಗೆ ಸೈಬರ್‌ ಅಪರಾಧ ಪ್ರಕರಣಗಳು ಸವಾಲಾಗುತ್ತಿದೆ. ಅದಾಗಷ್ಟೇ ವಿದ್ಯಾಭ್ಯಾಸ ಮಾಡಿ ಕೆಲಸ ಸಿಗದೆ ಕಂಗಾಲಾಗುವ ವಿದ್ಯಾರ್ಥಿಗಳು ಹಾಗೂ ತಾಂತ್ರಿಕ ವಿಭಾಗಗಳಲ್ಲಿ ಪರಿಣತರಿದ್ದು, ಕೆಲಸವಿಲ್ಲದವರೂ ಇಂತಹ ಕೃತ್ಯಗಳಲ್ಲಿ ತೊಡಗುತ್ತಿದ್ದಾರೆ. ಸೈಬರ್‌ ಅಪರಾಧ ಪೊಲೀಸ್‌ ಠಾಣೆಗಳಿಗೆ ನೇಮಕಾತಿ ಮಾಡುವ ಸಂದರ್ಭ ತಾಂತ್ರಿಕವಾಗಿ ನೈಪುಣ್ಯತೆ ಹೊಂದಿದವರಿಗೆ ಪ್ರಾಶಸ್ತ್ಯ ನೀಡಿದರೆ ಹಾಗೂ ಅತ್ಯುನ್ನತ ತಂತ್ರಜ್ಞಾನಗಳನ್ನು ಇಲಾಖೆಯಲ್ಲಿ ಬಳಸಿದರೆ ಇಂತಹವರ ಜಾಡನ್ನು ಸುಲಭದಲ್ಲಿ ಪತ್ತೆಹಚ್ಚಿ ಆರೋಪಿಗಳನ್ನು ಹಿಡಿಯಲು ಸಾಧ್ಯವಿದೆ.

ನಕಲಿ ಖಾತೆ  ಸೃಷ್ಟಿಸಿ ಜನರನ್ನು ವಂಚಿಸುವ ಬಗ್ಗೆ ಹಲವು ದೂರುಗಳು ಬಂದಿವೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ದೂರಿಗೆ ಸಂಬಂಧಿಸಿ ಈಗಾಗಲೇ ಸಾಮಾಜಿಕ ಜಾಲತಾಣ ಸಂಸ್ಥೆಗಳ ಬಳಿ ಹಲವು  ವಿವರ ಕೇಳಲಾಗಿದೆ.-ಎನ್‌. ವಿಷ್ಣುವರ್ಧನ್‌ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಉಡುಪಿ

ಸಾಮಾಜಿಕ ಜಾಲತಾಣಗಳಲ್ಲಿ ವಂಚನೆಯಾಗುತ್ತಿರುವ ಬಗ್ಗೆ ನಾಗರಿಕರು ಎಚ್ಚರದಿಂದ ಇರಬೇಕು. ಹಣಕ್ಕೆ ಬೇಡಿಕೆ ಇಟ್ಟರೆ ಯಾವುದೇ ಕಾರಣಕ್ಕೆ ನೀಡಬಾರದು. ಆರೋಪಿಗಳ ಪತ್ತೆಗಾಗಿ ಪೊಲೀಸರ ತಂಡ ಜಾಗೃತವಾಗಿದ್ದು, ಈಗಾಗಲೇ ಉತ್ತರ ಭಾರತದ ಹಲವೆಡೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಾಗಿದೆ. -ಮಂಜುನಾಥ, ನಿರೀಕ್ಷಕರು, ಸೆನ್‌ ಠಾಣೆ, ಉಡುಪಿ

– ಪುನೀತ್‌ ಸಾಲ್ಯಾನ್‌

ಟಾಪ್ ನ್ಯೂಸ್

3-huliyaru

Huliyar: ಮರದ ಕೊಂಬೆ ಬಿದ್ದು ಕಾರು ಜಖಂ

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

17

Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3-huliyaru

Huliyar: ಮರದ ಕೊಂಬೆ ಬಿದ್ದು ಕಾರು ಜಖಂ

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.