ಪಡುಬಿದ್ರಿ ಬೀಚ್‌ ನಿರ್ವಹಣೆ: ಪ್ರವಾಸೋದ್ಯಮ ಇಲಾಖೆ ನಿರುತ್ತರ!

ಟೆಂಡರ್‌ ಕರೆಯಲು ಇನ್ನೂ ಕೂಡಿ ಬರದ ಕಾಲ

Team Udayavani, Feb 13, 2020, 5:29 AM IST

1102RA1E–2

ಪಡುಬಿದ್ರಿ: ಇಲ್ಲಿನ ಬೀಚ್‌ ಬ್ಲೂéಫ್ಲ್ಯಾಗ್‌ ಪಟ್ಟಿಗೆ ಸೇರ್ಪಡೆಯಾಗಿದ್ದರೂ ಇಲ್ಲಿ ಹಲವು ಸುಧಾರಣೆ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದ್ದು ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಆದರೆ ಇಲ್ಲಿನ ವ್ಯವಸ್ಥೆಗಳ ನಿರ್ವಹಣೆ ಕುರಿತು ಪ್ರವಾಸೋದ್ಯಮ ಇಲಾಖೆ ಈಗ ನಿರುತ್ತರವಾಗಿದೆ. ಇದಕ್ಕೆ ಕಾರಣ ನಿರ್ವಹಣೆ ಹೊಣೆ ಹೊತ್ತಿದ್ದವರು ಜವಾಬ್ದಾರಿಯಿಂದ ಬಿಡುಗಡೆಗೊಳಿಸುವಂತೆ ಕೇಳಿಕೊಂಡಿರುವುದು. ಆದ್ದರಿಂದ ಹೊಸ ಟೆಂಡರುದಾರರನ್ನು ಪಡುಬಿದ್ರಿ ಬೀಚ್‌ ಎದುರು ನೋಡುತ್ತಿದೆ.

ಇಲ್ಲಿನ ಬೀಚ್‌ ಸರ್ವ ವ್ಯವಸ್ಥೆ ಹೊಂದಿದ್ದು ನಿರ್ವಹಣೆಯನ್ನು ಸಾಯಿರಾಧಾ ಸಮೂಹ ಮಾಡುತ್ತಿದೆ. ಹತ್ತು ಮಂದಿ ನಿರ್ವಹಣೆಯಲ್ಲಿ ತೊಡಗಿದ್ದು, ಸ್ವತ್ಛತೆ, ವಿದ್ಯುದೀಕರಣ, ಜೀವ ರಕ್ಷಕರಿಗೆ ಆದ್ಯತೆ ನೀಡಲಾಗಿದೆ. ಸೌಕರ್ಯಗಳನ್ನು ಉತ್ತಮವಾಗಿ ನಿರ್ವಹಣೆ ಮಾಡಲಾಗುತ್ತಿದೆ. ಆದರೆ 2019ರಲ್ಲಿ ಬೀಚ್‌ ನಿರ್ವಹಣೆಯಿಂದ ಮುಕ್ತಗೊಳಿಸಲು ಈಗಿನ ನಿರ್ವಹಣೆದಾರರು ಕೇಳಿದ್ದರು. ಆದರೆ ಈವರೆಗೂ ಪರ್ಯಾಯ ನಿರ್ವಹಣೆದಾರರನ್ನು ನೇಮಿಸಿಲ್ಲ.

ಪೂರ್ಣವಾಗದ ಟೆಂಡರ್‌
ಮನೋಹರ ಶೆಟ್ಟಿ ಅವರ ಪತ್ರದ ಬಗ್ಗೆ ಜಿ.ಪಂ. ಹಿಂದಿನ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಹೊಸ ಟೆಂಡರು ಕರೆದು ನಿರ್ವಹಣೆ ದಾರರನ್ನು ನೇಮಿಸಲು ಇಲಾಖೆ ಉತ್ಸುಕವಾಗಿದೆ. ದರ ಪಟ್ಟಿ ಇತ್ಯಾದಿಗಳನ್ನೂ ಅಂತಿಮಗೊಳಿಸುತ್ತಿದ್ದರೂ ಟೆಂಡರು ಕರೆಯಲು ಇನ್ನೂ ಕಾಲ ಕೂಡಿಬಂದಿಲ್ಲ.

ಈ ಮೊದಲು ವಿನಯಕುಮಾರ್‌ ಸೊರಕೆಯವರು ಪ್ರವಾಸೋದ್ಯಮ ಸಚಿವರಾಗಿದ್ದಾಗ ಜಿಲ್ಲಾಡಳಿತದಿಂದ 2 ಲಕ್ಷ ರೂ. ವಾರ್ಷಿಕವಾಗಿ ಭರಿಸಿಕೊಂಡು ನಿರ್ವಹಣೆ ನಡೆಸಲು ಸಾಯಿರಾಧಾ ಸಮೂಹಕ್ಕೆ ಹೊಣೆ ಒಪ್ಪಿಸಿದ್ದರು. ಇಲ್ಲಿ ಒಂದು ತಿಂಗಳಿಗೆ ಲಕ್ಷ ರೂ. ಗೆ ಮಿಕ್ಕಿ ಸಂಬಳ, ವಿದ್ಯುತ್‌ ಬಿಲ್‌, ನಿರ್ವಹಣೆಗೆ ಹಣ ಬೇಕು. ಆದರೆ ಪ್ರವಾಸಿಗರಿಂದ ಶುಲ್ಕ ಪಡೆಯುವ ಕೆಲಸ ಇನ್ನೂ ಆಗಿಲ್ಲ. ಆದ್ದರಿಂದ ಟೆಂಡರುದಾರರಿಗೆ ಸದ್ಯ ಹೊರೆಯಾಗಿದೆ. ಈ ಕುರಿತಾಗಿ ಷರತ್ತುಗಳನ್ನು ಟೆಂಡರ್‌ನಲ್ಲಿ ನಮೂದಿಸಬೇಕೆಂಬ ಮಾತುಗಳೂ ಇವೆ.

ವಾರದೊಳಗೆ ಟೆಂಡರ್‌
ಪಡುಬಿದ್ರಿ ಬೀಚ್‌ ನಿರ್ವಹಣೆ ಕುರಿತಾದ ಟೆಂಡರನ್ನು ಇನ್ನೊಂದು ವಾರದೊಳಗಾಗಿ ಕರೆಯಲಾಗುತ್ತದೆ. ಮನೋಹರ ಶೆಟ್ಟಿ ಅವರ ಮೂರು ವರ್ಷಗಳ ಅವಧಿ ಮುಗಿದಿದ್ದು ಇನ್ನೆರಡು ವರ್ಷಗಳಿಗೆ ಅವರು ಮುಂದುವರಿಸಲು ಒಪ್ಪದಿರುವುದರಿಂದ ಅನಿವಾರ್ಯವಾಗಿ ಟೆಂಡರ್‌ ಕರೆಯಬೇಕಿದೆ.
-ಚಂದ್ರಶೇಖರ್‌ ನಾಯ್ಕ, ಸ.ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ

ಸ್ಥಳೀಯರಿಗೆ ನೀಡಿ
ನಾನು ಬೀಚ್‌ ನಿರ್ವಹಣೆಯನ್ನು ಕಳೆದ ನವೆಂಬರ್‌ನಲ್ಲಿ ಇಲಾಖೆಗೆ ಪತ್ರ ಬರೆದು ತೊರೆದಿದ್ದರೂ ಮಗದೊಂದು ವ್ಯವಸ್ಥೆ ಆಗುವಲ್ಲಿಯವರೆಗೆ ಇಂದಿಗೂ ಉಸ್ತುವಾರಿಯನ್ನು ಮುಂದುವರಿಸಿದ್ದೇನೆ. ನಿರ್ವಹಣೆಯನ್ನು ಸ್ಥಳೀಯರು ನಿರ್ವಹಿಸಿದಲ್ಲಿ ಉತ್ತಮ ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಿದ್ದೇನೆ.
-ಮನೋಹರ ಶೆಟ್ಟಿ ಎಸ್‌.,ಸಾಯಿರಾಧ ಸಮೂಹ

ಟಾಪ್ ನ್ಯೂಸ್

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

12

Theft; ಕೊಲ್ಲೂರು: ಮಹಿಳೆಯ ಚಿನ್ನ, ನಗದು ಕಳವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

New Movie: ಪತ್ರಕರ್ತ ಚಿತ್ರಕ್ಕೆ ಮುಹೂರ್ತ

New Movie: ಪತ್ರಕರ್ತ ಚಿತ್ರಕ್ಕೆ ಮುಹೂರ್ತ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.