ಪಡುಬಿದ್ರಿ : ಕೆಎಸ್ಸಾರ್ಟಿಸಿ ಬಸ್ ಸಿಬಂದಿ ಮೇಲೆ ಹಲ್ಲೆ, ಆರೋಪಿಗಳ ಬಂಧನ
Team Udayavani, Oct 15, 2022, 10:02 AM IST
ಪಡುಬಿದ್ರಿ : ಕೆಎಸ್ಆರ್ಟಿಸಿ ಬಸ್ ಚಾಲಕ ಲಕ್ಕಪ್ಪ ಶರಣಪ್ಪ ಕಂಬಳಿ (32) ಹಾಗೂ ಬಸ್ ನಿರ್ವಾಹಕ ಹಾಲಸಿದ್ದಪ್ಪ ಅವರ ಮೇಲೆ ಅ. 13ರಂದು ಪಡುಬಿದ್ರಿಯ ಕಾರ್ಕಳ ಜಂಕ್ಷನ್ ಬಳಿ ಕಾರನ್ನು ಅಡ್ಡ ಇಟ್ಟು ಇಳಿದು ಹಲ್ಲೆ ನಡೆಸಿದ್ದ ಆರೋಪಿಗಳಾದ ಕಿರಣ್ ಆಳ್ವ ಹಾಗೂ ಪ್ರವೀಣ್ ಕುಂದರ್ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳಿಬ್ಬರನ್ನೂ ಬಂಧಿಸ ಲಾಗಿದ್ದು, ಉಡುಪಿಯ ನ್ಯಾಯಾ ಲಯಕ್ಕೆ ಹಾಜರುಪಡಿಸಲಾಗಿದೆ.
ಬಸ್ಸಿನಿಂದ ಇಬ್ಬರು ಪ್ರಯಾಣಿಕರನ್ನು ಇಳಿಸಿ ಹೊರಡುವ ವೇಳೆ ಈ ಘಟನೆ ಸಂಭವಿಸಿದೆ. ಆರೋಪಿಗಳು ಚಾಲಕ ಲಕ್ಕಪ್ಪ ಕಂಬಳಿ ಅವರನ್ನು ಬೈದು ಹೊರಗೆಳೆದು, ಕೈಯಿಂದ ಹೊಡೆದಿದ್ದಾರೆ. ಕಾಲಿನಿಂದ ತುಳಿದಿದ್ದಾರೆ. ಹಲ್ಲೆಯಿಂದ ಲಕ್ಕಪ್ಪ ಕಂಬಳಿ ಅವರ ಮುಖ, ಎದೆಗೆ ಗುದ್ದಿದ ನೋವು ಹಾಗೂ ನಿರ್ವಾಹಕ ಹಾಲಸಿದ್ದಪ್ಪ ಅವರ ಬಲಗೈ ಬಲಕಾಲಿಗೆ ಗುದ್ದಿದ ನೋವು ಮತ್ತು ಬಲಕೈಗೆ ಗಾಯವಾಗಿದೆ.
ಇದನ್ನೂ ಓದಿ : ಪಾಕಿಸ್ತಾನದಲ್ಲಿ ಭಯೋತ್ಪಾದಕ ದಾಳಿ : ಮಾಜಿ ಮುಖ್ಯ ನ್ಯಾಯಮೂರ್ತಿಯ ಗುಂಡಿಕ್ಕಿ ಹತ್ಯೆ