ಉಡುಪಿ: ಪಿಎಫ್ ಐ ಕಚೇರಿ ಮೇಲೆ ದಾಳಿ; ಪ್ರತಿಭಟನಾಕಾರರು ಪೊಲೀಸ್ ವಶಕ್ಕೆ
Team Udayavani, Sep 22, 2022, 6:10 PM IST
ಉಡುಪಿ: ಪಿ.ಎಫ್.ಐ.ಕಚೇರಿ ಮೇಲೆ ನಡೆದ ದಾಳಿ ಖಂಡಿಸಿ ಉಡುಪಿ ನಗರದಲ್ಲಿ ರಸ್ತೆ ತಡೆದು ಪಿ.ಎಫ್.ಐ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.
ಪ್ರತಿಭಟನಾ ವೇಳೆ ರಸ್ತೆ ತಡೆದ ಕಾರಣ ವಾಹನ ಸಂಚಾರಕ್ಕೆ ತೊಡಕು ಉಂಟಾಯಿತು. ಕೋರ್ಟ್ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಎನ್.ಐ.ಎ ಗೋ ಬ್ಯಾಕ್ ಘೋಷಣೆ ಕೂಗಿದರು.
ಮುಖಂಡನಿಗೆ ಹುಡುಕಾಟ
ಪಿ ಎಫ್ ಐ ಮುಖಂಡನಿಗೆ ಉಡುಪಿಯ ಹಿರಿಯಡ್ಕ ಠಾಣಾ ವ್ಯಾಪ್ತಿ ಮತ್ತು ಕಾಪು ಠಾಣಾ ವ್ಯಾಪ್ತಿಯಲ್ಲಿ ತಲೆಮರಿಸಿಕೊಂಡಿರುವ ಮಾಹಿತಿಯ ಆಧಾರದಲ್ಲಿ ಪೋಲಿಸರಿಂದ ಹುಡುಕಾಟ ನಡೆಸಿದ್ದಾರೆ. ಪಿ.ಎಫ್ ಐ ಮುಖಂಡನ ಮೊಬೈಲ್ ಲೋಕೆಶನ್ ಆಧಾರದಲ್ಲಿ ಹುಡುಕಾಟ ನಡೆಸಲಾಗಿತ್ತು ಎಂದು ಪೋಲಿಸ್ ಉನ್ನತ ಮೂಲಗಳು ತಿಳಿಸಿದ್ದು, ಪಿ.ಎಫ್.ಐ ಮುಖಂಡ ಹೊರ ಜಿಲ್ಲೆಯವನೇ ಅಥವಾ ಉಡುಪಿ ಜಿಲ್ಲೆಯವರಾ ಎಂಬುದರ ಬಗ್ಗೆ ಪೋಲಿಸರು ಗೌಪ್ಯತೆ ಕಾಪಾಡಿಕೊಂಡಿದ್ದಾರೆ.