ಸ್ವಚ್ಛತೆ ಬಳಿಕ ಹೊರಜಗತ್ತಿಗೆ ತೆರೆದ ಬಸ್ರೂರು ಸದಾನಂದ ದೇಗುಲ
ಅಪರೂಪದ ದೇಗುಲ ಸಂರಕ್ಷಣೆಗೆ ಪುರಾತತ್ವ ಇಲಾಖೆ ಮುತುವರ್ಜಿ ಅಗತ್ಯ
Team Udayavani, Feb 26, 2020, 5:16 AM IST
ಬಸ್ರೂರು: ಬಸ್ರೂರು ಒಂದು ಐತಿಹಾಸಿಕ ನಗರ. ಇಲ್ಲಿನ ರಾಜರು, ಪೋರ್ಚುಗೀಸರು, ಆಂಗ್ಲರ ಬಗ್ಗೆ ಬಹಳಷ್ಟು ದಾಖಲೆಗಳಿದ್ದರೂ ಎಲ್ಲವನ್ನೂ ಉಳಿಸಿಕೊಳ್ಳಲಾಗಿಲ್ಲ. ಬಸ್ರೂರುಒಂದು ಬಂದರು ಪ್ರದೇಶವಾಗಿಯೂ ಗುರುತಿಸಿಕೊಂಡಿದೆ. ಈಗಾಗಲೇ ಕೆಲವೊಂದು ಶಿಲಾಶಾಸನಗಳನ್ನು ಬಸ್ರೂರಿನ ಶ್ರೀ ಶಾರದಾ ಕಾಲೇಜಿನಲ್ಲಿ ಉಳಿಸಿ ಸಂರಕ್ಷಿಸಿಡಲಾಗಿದೆ ಬಿಟ್ಟರೆ ಉಳಿದ ಶಿಲಾಶಾಸನಗಳು ಹೇಳ ಹೆಸರಿಲ್ಲದಂತಾಗಿದೆ. ಇದು ಹೊರತಾಗಿ ಅಪರೂಪದ ದೇಗುಲವೊಂದು ಇತ್ತೀಚಿಗೆ ಪತ್ತೆಯಾಗಿದ್ದು ಅದರ ವಠಾರ ಶುಚಿಗೊಳಿಸುತ್ತಿದ್ದಂತೆಯೇ ಜನರನ್ನು ಆಕರ್ಷಿಸುತ್ತಿದೆ.
ವಿಶಿಷ್ಟ ದೇಗುಲ
ಬಸ್ರೂರು ನೀರು ಟ್ಯಾಂಕ್ ಹತ್ತಿರ ಗುಂಡಿಗೋಳಿಗೆ ಹೋಗುವ ಮಾರ್ಗದಲ್ಲಿ ನೂರು ಮೀ.ನಷ್ಟು ಮೇಲೆ ಸಾಗಿದರೆ ಎಡಕ್ಕೆ ಕಾಣುವ ತಿರುವಿನಲ್ಲಿ ಮಾಡಿದ ನೂತನ ಮಾರ್ಗ 12ನೇ ಶತಮಾನದಷ್ಟು ಪ್ರಾಚೀನ ಇತಿಹಾಸವುಳ್ಳ ಶಿಥಿಲಾವಸ್ಥೆಯಲ್ಲಿರುವ ಶ್ರೀ ಸದಾನಂದ ದೇವಸ್ಥಾನವನ್ನು ತೋರಿಸುತ್ತದೆ. ದೇಗುಲದ ಬಲಭಾಗದಲ್ಲಿ ಬಸ್ರೂರಿನ ಅಂದಿನ ಕೋಟೆಯಿತ್ತೆಂದು ಹೇಳಲಾದರೂ ಅದರ ಅವಶೇಷಗಳು ಕಾಣುತ್ತಿಲ್ಲ. ಅದನ್ನು ಉಳಿಸಿಕೊಳ್ಳಲೂ ಸಾಧ್ಯವಾಗಿಲ್ಲ. ಸದ್ಯ ದೇಗುಲ ಇರುವ ಪ್ರದೇಶ ರಾಜ್ಯ ಪುರಾತತ್ವ ಇಲಾಖೆಗೆ ಸೇರಿದ ಜಾಗದಲ್ಲಿದೆ.
ಪ್ರದೇಶ ಸ್ವಚ್ಛ
ಈ ದೇವಸ್ಥಾನಕ್ಕೆ ಹೋಗಲಾಗದಷ್ಟು, ಇಲ್ಲಿನ ದಾರಿ ಕಲ್ಲು-ಮುಳ್ಳುಗಳ ನಡುವೆ ಹುದುಗಿ ಹೋಗಿತ್ತು. ಆದರೆ ಕಳೆದ ಹತ್ತು ವಾರಗಳಿಂದ ಉತ್ಸಾಹಿ ಸಂಘಟನೆಗಳು ಗ್ರಾ.ಪಂ.ನ ಪರವಾನಿಗೆ ಪಡೆದು ಸದಾನಂದ ಮಠದ ಸುತ್ತಲ ಪರಿಸರವನ್ನು, ದೇಗುಲದ ಜಾಗವನ್ನು ಸ್ವತ್ಛಗೊಳಿಸಿದ ಪರಿಣಾಮ ಈಗ ಹನ್ನೆರಡನೇ ಶತಮಾನದಲ್ಲಿ ವಿಜಯನಗರ ಅರಸರು ಕಟ್ಟಿಸಿದ್ದಾರೆಂದು ತಿಳಿದು ಬರುವ ಶ್ರೀ ಸದಾನಂದ ದೇವಸ್ಥಾನಕ್ಕೆ ಸುಲಭವಾಗಿ ಹೋಗಿ ವೀಕ್ಷಿಸಬಹುದಾಗಿದೆ.
ರಾಜ್ಯ ಪುರಾತತ್ವ ಇಲಾಖೆ ಇಲ್ಲವೆ ಸ್ಥಳೀಯಾಡಳಿತ ಶ್ರೀ ಸದಾನಂದ ದೇವಸ್ಥಾನ ವನ್ನು ದೂರದಿಂದ ಬರುವವರಿಗೆ ತೋರಿ ಸುವ ದೃಷ್ಟಿಯಿಂದ ಸೂಕ್ತ ವ್ಯವಸ್ಥೆ ಮಾಡ ಬೇಕಾಗಿದೆ. ಇತಿಹಾಸದ ಅಂಶಗಳು ಪೂರ್ತಿಯಾಗಿ ನಶಿಸಿ ಹೋಗದಂತೆ ನೋಡಿ ಕೊಳ್ಳುವ ಹೊಣೆಗಾರಿಕೆ ಸಂಬಂಧಿಸಿದ ಇಲಾಖೆಯದ್ದಾಗಿದೆ.
ಶೋಧನೆ ಅಗತ್ಯ
ಸದಾನಂದ ದೇಗುಲದಲ್ಲಿ ಒಂದು ಸುರಂಗವಿದ್ದು ಈ ಸುರಂಗಕ್ಕೂ ಬಸ್ರೂರಿನ ಕೋಟೆಗೂ ಹತ್ತಿರದ ಸಂಬಂಧವಿದೆ. ಈ ಸುರಂಗದ ಒಳಗೆ ಹೋದರೆ ಕೋಟೆಯ ಒಳಗೆ ಹೋಗುತ್ತದೆ ಎನ್ನುವ ಮಾತುಗಳೂ. ಇವೆ. ಇದರ ಬಗ್ಗೆ ಇನ್ನಷ್ಟು ಅಧ್ಯಯನ, ಶೋಧನೆ ಅಗತ್ಯವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ