ಸಾಲಿಗ್ರಾಮ ಪ.ಪಂ.: ವರ್ಷದಿಂದ ಗೋಡೌನ್‌ನಲ್ಲಿ ಕಸ ಬಾಕಿ


Team Udayavani, Jan 30, 2023, 6:25 AM IST

ಸಾಲಿಗ್ರಾಮ ಪ.ಪಂ.: ವರ್ಷದಿಂದ ಗೋಡೌನ್‌ನಲ್ಲಿ ಕಸ ಬಾಕಿ

ಕೋಟ: ಸಾಲಿಗ್ರಾಮ ಪ.ಪಂ. ಕಸದ ಸಮಸ್ಯೆ ಹೊಸ-ಹೊಸ ರೂಪದಲ್ಲಿ ಹೊರಹೊಮ್ಮುತ್ತಿದೆ. ವರ್ಷದ ಹಿಂದೆ ಕಸ ವಿಲೇವಾರಿಗೆ ಸ್ಥಳಾವಕಾಶವಿಲ್ಲದೆ ಸಮಸ್ಯೆ ಆಗಿತ್ತು. ಅನಂತರ ದಿನದಲ್ಲಿ ಪಾರಂಪಳ್ಳಿಯಲ್ಲಿ ಗೋಡೌನ್‌ ದೊರತ್ತಿದ್ದರಿಂದ ಸ್ವಲ್ಪ ಮಟ್ಟಿಗೆ ನಿರಾಳವಾಗಿತ್ತು. ಆದರೆ ಇದೀಗ ಗೋಡೌನ್‌ನಲ್ಲಿ ಶೇಖರಣೆಯಾದ ಕಸವನ್ನು ವಿಲೇವಾರಿ ಮಾಡಲು ಟೆಂಡರ್‌ ಪಡೆದ ಕಂಪೆನಿ ಕೈಕೊಟ್ಟಿದೆ. ಹೊಸ ಗುತ್ತಿಗೆದಾರರು ಕಸ ವಿಲೇವಾರಿಗೆ ಮುಂದೆ ಬರುತ್ತಿಲ್ಲ. ಹೀಗಾಗಿ ಸ್ಥಳೀಯಾಡಳಿತಕ್ಕೆ ಸಮಸ್ಯೆಯಾಗಿದೆ.

ಗೋಡೌನ್‌ನಲ್ಲಿ ಶೇಖರಣೆಯಾದ ಕಸವನ್ನು ಪೂರ್ತಿಯಾಗಿ ವಿಲೇವಾರಿ ಮಾಡಲು ಮಂಗಳೂರು ಮೂಲದ ಗ್ರೀನ್‌ ಇಂಪ್ಯಾಕ್ಟ್ ಫೌಂಡೇಶನ್‌ ಎನ್ನುವ ಕಂಪೆನಿಗೆ 2022 ಜು. 20ರಂದು 3.5 ಲಕ್ಷ ರೂಗೆ ಒಪ್ಪಂದ ಮಾಡಿಕೊಂಡು ಮುಂಗಡವಾಗಿ 1.75ಲಕ್ಷ ರೂ ನೀಡಲಾಗಿತ್ತು. ಆದರೆ ಕಂಪೆನಿ ಕೇವಲ 7 ಲೋಡ್‌ ಕಸ ಮಾತ್ರ ವಿಲೇವಾರಿ ಮಾಡಿ ಸುಮ್ಮನಾಗಿದೆ.

ಒಪ್ಪಂದದ ದೋಷ
ಸಾಮಾನ್ಯವಾಗಿ ಕಸ ವಿಲೇವರಿಗೆ ಒಪ್ಪಂದ ಮಾಡಿಕೊಳ್ಳುವಾಗ 3ರಿಂದ 6 ತಿಂಗಳಲ್ಲಿ ವಿಲೇ ಮಾಡಬೇಕು ಎನ್ನುವ ಶರತ್ತನ್ನು ಸ್ಥಳೀಯಾಡಳಿತ ವಿಧಿಸುತ್ತದೆ. ಆದರೆ ಈ ಒಪ್ಪಂದಲ್ಲಿ ಕಾಲಮಿತಿ ವಿಧಿಸಿಲ್ಲ. ಹೀಗಾಗಿ ತಾಂತ್ರಿಕ ಸಮಸ್ಯೆ ಎದುರಾಗಿದೆ. ಆದರೆ ಪ.ಪಂ. ಮುಖ್ಯಸ್ಥರು ಹೇಳುವ ಪ್ರಕಾರ ಒಪ್ಪಂದದಲ್ಲಿ ನಮೂದಾಗದಿದ್ದರೂ 6ತಿಂಗಳೊಳಗೆ ವಿಲೇ ಮಾಡಬೇಕು ಎನ್ನುತ್ತಾರೆ.

ಮೃದು ಧೋರಣೆ
ಒಂದು ಅಂದಾಜಿನ ಪ್ರಕಾರ ಗೋಡೌನ್‌ನಲ್ಲಿರುವ ಎಲ್ಲ ಕಸ ವಿಲೇವಾರಿ ಮಾಡಲು 6-7ಲಕ್ಷ ರೂ ಬೇಕಾಗುತ್ತದೆ. ಆದರೆ ಗುತ್ತಿಗೆ ವಹಿಸಿಕೊಂಡ ಕಂಪೆನಿ 3.5ಲಕ್ಷಕ್ಕೆ ಬಿಡ್‌ ಮಾಡುವ ಮೂಲಕ ಆರಂಭದಲ್ಲೇ ಎಡವಿದೆ ಎನ್ನಲಾಗಿದೆ. ಕಂಪೆನಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಕ್ಕೆ ಗುತ್ತಿಗೆ ಪಡೆದ ವ್ಯಕ್ತಿಗೆ ತೀವ್ರ ಅಪಘಾತವಾಗಿದ್ದು, ಓಡಾಡುವ ಪರಿಸ್ಥಿತಿ ಇಲ್ಲ. ಮೂರು ಬಾರಿ ಅವರಿಗೆ ನೋಟೀಸು ನೀಡಿದ್ದೇವೆ. 7 ಲೋಡ್‌ ಕಸ ವಿಲೇವಾರಿ ಮಾಡಲು 56 ಸಾವಿರ ರೂ. ಖರ್ಚಾಗಿದ್ದು ಮಿಕ್ಕುಳಿದ ಹಣ ವಾಪಾಸು ಮಾಡುತ್ತೇನೆ ಎಂದವರು ತಿಳಿಸಿದ್ದಾರೆ. ಆದ್ದರಿಂದ ಕಾದು ನೋಡುತ್ತಿದ್ದೇವೆ ಎಂದು ಮುಖ್ಯಾಧಿಕಾರಿಗಳು ಹೇಳುತ್ತಾರೆ.

ಕ್ರಮ ಕೈಗೊಳ್ಳುತ್ತೇವೆ
ಒಪ್ಪಂದದಂತೆ ಕಾಮಗಾರಿ ನಿರ್ವಹಿಸಲು ವಿಫಲವಾಗಿರುವುದರಿಂದ ನಾವು ನೀಡಿದ ಹಣವನ್ನು ಹಿಂದಿರುಗಿಸುವಂತೆ ಮೂರು ಬಾರಿ ನೋಟೀಸು ನೀಡಿದ್ದೇವೆ. ಆದರೆ ಅನಾರೋಗ್ಯದ ಕಾರಣ ಕಾಲಾವಕಾಶ ಕೇಳಿದ್ದಾರೆ. ಇನ್ನೊಮ್ಮೆ ವಿಚಾರಿಸಿ ಕ್ರಮಕೈಗೊಳ್ಳುತ್ತೇವೆ.
-ಶಿವ ನಾಯ್ಕ, ಮುಖ್ಯಾಧಿಕಾರಿಗಳು

ಸಾರ್ವಜನಿಕ ಹಿತಾಸಕ್ತಿ ದೂರು
ಸ್ಥಳೀಯಾಡಳಿತ ನಿಗದಿಪಡಿಸುವ ಮೊತ್ತವನ್ನು, ಸೀಮಿತ ದಿನದೊಳಗೆ ಗುತ್ತಿಗೆ ವಹಿಸಿಕೊಂಡವರು ವಾಪಾಸು ನೀಡಬೇಕಿತ್ತು. ಇಲ್ಲವಾದರೆ ಅವರ ವಿರುದ್ಧ ಪೊಲೀಸ್‌ ಪ್ರಕರಣ ದಾಖಲಿಸಬೇಕಿತ್ತು. ಸಾರ್ವಜನಿಕರ ತೆರಿಗೆ ಹಣ ಪೋಲಾಗಬಾರದು ಎನ್ನುವ ನಿಟ್ಟಿನಲ್ಲಿ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದೂರು ದಾಖಲಿಸಲಾಗು ವುದು.
-ಶ್ಯಾಮ್‌ಸುಂದರ್‌ ನಾೖರಿ, ಸದಸ್ಯರು, ಪ.ಪಂ.

– ರಾಜೇಶ್‌ ಗಾಣಿಗ ಅಚ್ಲಾಡಿ

ಟಾಪ್ ನ್ಯೂಸ್

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.