ಮಲ್ಪೆ: ಕಡಲ ತೀರಕ್ಕೆ ತೇಲಿ ಬಂತು ಬೂತಾಯಿ ಮೀನಿನ ರಾಶಿ!
Team Udayavani, Sep 20, 2022, 6:52 AM IST
ಮಲ್ಪೆ/ಸುರತ್ಕಲ್: ಬಡಾ ನಿಡಿಯೂರು ಕದಿಕೆ ಸಮುದ್ರ ತೀರ ಮತ್ತು ಮುಕ್ಕ ಜೋರ ಬಳಿಯಿಂದ ಮಿತ್ರಪಟ್ಣ ತನಕ ಸೋಮವಾರ ಮಧ್ಯಾಹ್ನ ರಾಶಿ ರಾಶಿ ಬೂತಾಯಿ ಮೀನು ದಡ ಸೇರಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಹೆಕ್ಕಲು ಮುಗಿಬಿದ್ದಿದ್ದಾರೆ.
ಕೆಲವರು ಮನೆಗೆ ಕೊಂಡೊಯ್ದರೆ ಇನ್ನು ಕೆಲವರು ಮಾರಾಟ ಮಾಡಿದ್ದಾರೆ ಎನ್ನಲಾಗಿದೆ. ಸುಮಾರು 800 ಕೆ.ಜಿ. ಮೀನು ತೇಲಿಬಂದಿದೆ ಎಂದು ಸ್ಥಳೀಯ ಪ್ರವೀಣ್ ಕಾಂಚನ್ ತಿಳಿಸಿದ್ದಾರೆ.
ಈ ಭಾಗದ ಸಮುದ್ರದಲ್ಲಿ ಬೆಳಗ್ಗಿ ನಿಂದ ಹಲವಾರು ದೋಣಿಗಳು ಮೀನುಗಾರಿಕೆ ಮಾಡುತ್ತಿದ್ದು ದೋಣಿ ಎಂಜಿನಿನ ಸದ್ದಿಗೆ ಮೀನುಗಳು ತೀರಕ್ಕೆ ಆಗಮಿಸಿವೆ. ಕದಿಕೆ ಪರಿಸರದಲ್ಲಿ ಈ ರೀತಿ ಮೀನು ಮೊದಲ ಬಾರಿ ಕಂಡು ಬಂದಿದ್ದು, ಈ ಹಿಂದೆ ಕಾಪು, ಎರ್ಮಾಳು ಕಡೆಗಳಲ್ಲಿ ಸಮುದ್ರತೀರಕ್ಕೆ ಬಂದಿತ್ತು ಎಂದು ಮೀನುಗಾರರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು