ಕಡಲಚಿಪ್ಪು ಉತ್ಪಾದನೆಗೆ ಹೆಚ್ಚಿದ ಬೇಡಿಕೆ
Team Udayavani, Apr 2, 2023, 7:12 AM IST
ಉಡುಪಿ: ಸಮುದ್ರ ಮತ್ತು ನದಿಯ ಉಪ್ಪು ನೀರಿನಲ್ಲಿ ಸ್ವಾಭಾವಿಕವಾಗಿ ಬೆಳೆಯುವ ಕಡಲ ಚಿಪ್ಪನ್ನು ಈಗ ಮೀನುಗಾರಿಕೆಯ ಉಪಕೃಷಿಯಾಗಿ ವ್ಯಾಪಕವಾಗಿ ಬೆಳೆಸಲಾಗುತ್ತಿದೆ ಮತ್ತು ಬೆಳೆಯು ವವರ ಸಂಖ್ಯೆಯೂ ಹೆಚ್ಚಾಗುತ್ತಿದೆ.
ಸಮುದ್ರ, ನದಿಯ ಕಲ್ಲುಗಳಲ್ಲಿ ಇದು ಬೆಳೆಯುತ್ತದೆ. ಕಲ್ಲಿನಿಂದ ಬಿಡಿಸಿ ತರುವುದು ಸವಾಲು. ಇತ್ತೀಚಿನ ವರ್ಷಗಳಲ್ಲಿ ಸಮುದ್ರದಿಂದ ಕಡಲ ಚಿಪ್ಪು ತೆಗೆಯುವವರ ಸಂಖ್ಯೆ ಕಡಿಮೆ ಯಾಗಿದೆ, ನದಿಯಲ್ಲಿ ಇದರ ಕೃಷಿ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಉತ್ತಮ ಬೇಡಿಕೆ
ಕಡಲಚಿಪ್ಪಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ. ಸದ್ಯ ಇದರ ಲಭ್ಯತೆ ಕಡಿಮೆ ಇರುವುದರಿಂದ ದರ ಹೆಚ್ಚಿದೆ. 3-4 ಇಂಚು ಗಾತ್ರದ ಕಡಲಚಿಪ್ಪೊಂದಕ್ಕೆ 3ರಿಂದ 5 ರೂ. ದರ ಇರುತ್ತದೆ. ಬೆಳೆಯುವವರಿಂದಲೇ ನೇರವಾಗಿ ಖರೀದಿ ವ್ಯವಸ್ಥೆಯೂ ಈಗ ರೂಪುಗೊಂಡಿದೆ. ಕಪ್ಪು ಮತ್ತು ಹಳದಿ ಬಣ್ಣದಲ್ಲಿ ಲಭ್ಯವಿದೆ ಮತ್ತು ಹಳದಿ ಬಣ್ಣದ್ದಕ್ಕೆ ಬೇಡಿಕೆ ಹೆಚ್ಚಿದೆ.
ಕೃಷಿ ಮಾಡುವುದು ಹೇಗೆ?
ಸಮುದ್ರದಲ್ಲಿ ಲಭ್ಯವಿರುವ ಕಡಲ ಚಿಪ್ಪಿನ ಮರಿಗಳನ್ನು ಅದರ ಮೂಲದಿಂದಲೇ ಬಿಡಿಸಿ ತಂದು, ಪ್ರತ್ಯೇಕ ವ್ಯವಸ್ಥೆಯಲ್ಲಿ ನದಿಯ ನೀರಿ ನಲ್ಲಿ ಶೇಖರಿಸಿಡಬೇಕು. ಗೋಣಿ ಚೀಲ ಅಥವಾ ಅದು ಬೆಳೆಯಲು ಪೂರಕವಾದ ಹಗ್ಗ ಜೋಡಿಸಿಡಬೇಕು. ದ್ರಾಕ್ಷಿ ಗೊಂಚಲು ರೀತಿ ಯಲ್ಲೇ ಬೆಳೆಯುತ್ತದೆ. ವಾರ ದಲ್ಲಿ 2 ದಿನ ಪರಿಶೀಲಿಸುತ್ತಿರಬೇಕು ಎಂದು ಕಡಲಚಿಪ್ಪು ಕೃಷಿಕ ಬೈಂದೂರಿನ ರಮೇಶ್ ಮಾಹಿತಿ ನೀಡಿದರು.
ವರ್ಷಕ್ಕೆ ಒಂದು ಬೆಳೆ
ಕಡಲಚಿಪ್ಪು ಕೃಷಿಗೆ ಸಾಕಷ್ಟು ಜನ ಉತ್ಸಾಹ ತೋರುತ್ತಿದ್ದಾರೆ. ಸದ್ಯ ಕರ್ನಾಟಕದಲ್ಲಿ ಎಲ್ಲಿಯೂ ಇದರ ಮರಿಗಳನ್ನು ನೀಡುವ ವ್ಯವಸ್ಥೆ ಇಲ್ಲ. ಕೇರಳದ ಕೆಲವು ಭಾಗಗಳಲ್ಲಿ ನೀಡಲಾಗುತ್ತದೆ ಎಂಬ ಮಾಹಿತಿಯಿದೆ. ಇಲ್ಲಿನ ವಾತಾ ವರಣದಲ್ಲಿ ವರ್ಷಕ್ಕೆ ಒಂದು ಇಳುವರಿ ಪಡೆಯಬಹುದು. ಮರಿಗಳು ಬಲಿತು ದೊಡ್ಡದಾಗಲು 3-4 ತಿಂಗಳು ಬೇಕಾಗುತ್ತದೆ. ಸಮುದ್ರ ಅಥವಾ ನದಿಯ ಉಪ್ಪು ನೀರಿನಲ್ಲಿ ಮಾತ್ರ ಬೆಳೆಯುತ್ತದೆ. ಮಳೆಗಾಲದ ನದಿ ನೀರಿನಲ್ಲಿ ಬೆಳೆಯಲು ಸಾಧ್ಯವಿಲ್ಲ.
ಸರಕಾರದ ಪ್ರೋತ್ಸಾಹ
ಪ್ರಧಾನ ಮಂತ್ರಿ ಮತ್ಸéಸಂಪದ ಯೋಜನೆಯಡಿ ಕಡಲಚಿಪ್ಪು ಉತ್ಪಾದನೆಗೆ ಸರಕಾರದಿಂದ ಪ್ರೋತ್ಸಾಹ ನೀಡಲಾಗುತ್ತದೆ. 2021-22ನೇ ಸಾಲಿನಲ್ಲಿ ದ.ಕ. ಜಿಲ್ಲೆಯ 25, ಉಡುಪಿಯ 55 ಫಲಾನುಭವಿಗಳಿಗೆ ತಲಾ 20,000 ರೂ. ಘಟಕ ವೆಚ್ಚ ನೀಡಲಾಗಿದೆ. ಪ್ರಸಕ್ತ ಸಾಲಿನಲ್ಲೂ ಸರಕಾರದಿಂದ ಈ ಯೋಜನೆ ಮುಂದುವರಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಒಮ್ಮೆ ನೀರು ಕಲುಷಿತವಾದರೂ ಪೂರ್ಣ ನಾಶವಾಗು ತ್ತದೆ. ಸದಾ ಎಚ್ಚರಿಕೆ ಅಗತ್ಯ.
– ಶಿವಕುಮಾರ್, ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರು
– ರಾಜು ಖಾರ್ವಿ ಕೊಡೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
MUST WATCH
ಹೊಸ ಸೇರ್ಪಡೆ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ