ಇಂದಿನಿಂದ ಶಿರೂರು ಟೋಲ್‌ ಆರಂಭ

ಸಾರ್ವಜನಿಕರ ಬೇಡಿಕೆಗೆ ಸಕಾರಾತ್ಮಕ ಸ್ಪಂದನೆ ಭರವಸೆ

Team Udayavani, Feb 8, 2020, 5:36 AM IST

jai-22

ಬೈಂದೂರು: ಕಳೆದ ಹಲವು ಸಮಯದಿಂದ ನಿರೀಕ್ಷೆ ಇರುವ ಶಿರೂರು ಟೋಲ್‌ ಫೆ. 8ರಿಂದ ಅಧಿಕೃತ ಆರಂಭವಾಗುವ ಸಾಧ್ಯತೆ ಇದೆ. ಕಳೆದ ಮೂರು ದಿನದಿಂದ ಪ್ರಾಯೋಗಿಕ ಪರೀಕ್ಷಾ ಸಂಚಾರ ಆರಂಭಿಸಿದ್ದು ಟೋಲ್‌ ಪ್ಲಾಜಾದಲ್ಲಿ ಸಿಬಂದಿ ಆಯ್ಕೆ ಹಾಗೂ ಎಲ್ಲ ಸಿದ್ಧತೆ ಪೂರ್ಣಗೊಂಡಿದೆ. ಶುಕ್ರವಾರ ರಾತ್ರಿಯಿಂದಲೇ ಅಧಿಕೃತ ಶುಲ್ಕ ವಸೂಲಾತಿ ನಡೆಯಲಿದೆ. ಗೋವಾ -ಕರ್ನಾಟಕ ಸಂಪರ್ಕದ ಮಾಜಾಳಿಯಿಂದ ಆರಂಭವಾಗಿ ಕುಂದಾಪುರ ತನಕ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು 75 ಶೇ. ಕಾಮಗಾರಿ ಪೂರ್ಣಗೊಂಡಿದ್ದು ಹೊಸ ಟೋಲ್‌ ಪ್ರಾರಂಭ ದಿಂದ ವಾಹನ ಸವಾರರು ಮುಂದೆ ಶುಲ್ಕ ಪಾವತಿಸಿ ಪ್ರಯಾಣಿಸಬೇಕಾಗಿದೆ.

ಕಾಮಗಾರಿ ವಿವರ
ಒಟ್ಟು 179.9 ಕಿ.ಮೀ. ಗಳಲ್ಲಿ 141 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದೆ. ಅಂಕೋಲಾ ಸಮೀಪದ ಹಟ್ಟಿಗೇರಿ, ಹೊನ್ನಾವರ ಹಾಗೂ ಶಿರೂರಿನಲ್ಲಿ ಟೋಲ್‌ ಪ್ಲಾಜಾ ನಿರ್ಮಾಣವಾಗಿದೆ. 2014ರಲ್ಲಿ ಐ.ಆರ್‌.ಬಿ. ಇನ್‌ಪ್ರಾಸ್ಟರ್ ಡೆವಲಪರ್ಸ್‌ಗೆ 2600 ಕೋ.ರೂ. ವೆಚ್ಚದಲ್ಲಿ ಹೆದ್ದಾರಿ ಅಭಿವೃದ್ಧಿ ಯೋಜನೆಯ 4ನೇ ಹಂತದಲ್ಲಿ ಹಣಕಾಸು, ವಿನ್ಯಾಸ ನಿರ್ಮಾಣ ನಿರ್ವಹಣೆಯನ್ನು 28 ವರ್ಷದ ಅವಧಿಗೆ ನೀಡಲಾಗಿದೆ. ಕುಮಟಾ ನಗರದಲ್ಲಿ 7.7 ಕಿ.ಮೀ ಬೈಪಾಸ್‌ ನಿರ್ಮಿಸಲು ಪ್ರತ್ಯೇಕ ಯೋಜನಾ ವರದಿ ಸಿದ್ಧಪಡಿಸಲಾಗಿದೆ. ಶರಾವತಿ ನದಿಗೆ ಮೂರು ಪಥದ ಹೊಸ ಸೇತುವೆ ನಿರ್ಮಿಸಲಾಗಿದೆ. 11 ಅಂಡರ್‌ಪಾಸ್‌, 3 ಟೋಲ್‌ ಪ್ಲಾಜಾ,3 ವಿಶ್ರಾಂತಿ ಪ್ರದೇಶ, ನಾಲ್ಕು ಟ್ರಕ್‌ ನಿಲ್ದಾಣ, 53 ಬಸ್‌ ನಿಲ್ದಾಣ, 70 ಕಿ.ಮೀ. ಸರ್ವಿಸ್‌ ರಸ್ತೆ ನಿರ್ಮಿಸಲಾಗಿದೆ.

ಪ್ರಯಾಣಿಕರಿಗೆ ಸಿಗುವ ಸವಲತ್ತುಗಳೇನು?
ಇಲ್ಲಿಯ ವರೆಗೆ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿರುವಂತೆ ಪ್ರಸ್ತುತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಐ.ಆರ್‌. ಬಿ. ಕಂಪೆನಿಯ ವ್ಯಾಪ್ತಿಗೆ ಒಳಪಡುತ್ತದೆ ಮತ್ತು ಸುರಕ್ಷತಾ ಸಿಬಂದಿಯಿರುತ್ತಾರೆ. ಶೌಚಾಲಯ, ವಿಶ್ರಾಂತಿ ಕೊಠಡಿ, ಆ್ಯಂಬುಲೆನ್ಸ್‌ನಲ್ಲಿ ವೈದ್ಯಕೀಯ ತಪಾಸಣೆ ಮತ್ತು ಸುಗಮ ಸಂಚಾರಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ಆಕಸ್ಮಿಕ ಹಾಗೂ ಅಪಘಾತ ನಡೆದಾಗ ಪ್ರಯಾಣಿಕರು 1033 ನಂಬರ್‌ಗೆ ಕರೆ ಮಾಡಿದರೆ ತತ್‌ಕ್ಷಣ ಸ್ಪಂದನೆ ದೊರೆಯಲಿದೆ. ಸಾರ್ವಜನಿಕರು ಕೂಡ ಏಕಮುಖ ಸಂಚಾರ ರಸ್ತೆ ನಿಯಮ ಗಳನ್ನು ಸಮರ್ಪಕವಾಗಿ ಪಾಲಿಸಬೇಕಾಗಿದೆ.

20 ಕಿ.ಮೀ.ಗೆ 265 ರೂ. ಪಾಸ್‌
ಈಗಾಗಲೇ ಸ್ಥಳೀಯರಿಗೆ ಉಚಿತ ಪಾಸ್‌ ನೀಡಬೇಕು, ಖಾಸಗಿ ವಾಹನಗಳಿಗೆ ಉಚಿತ ಪಾವತಿ ನೀಡಬೇಕು ಎಂದು ಹೆದ್ದಾರಿ ಹೋರಾಟ ಸಮಿತಿ ಆಗ್ರಹಿಸಿದೆ. ಆದರೆ ಕಂಪೆನಿಯಿಂದ ಇದುವರೆಗೆ ಸ್ಪಷ್ಟತೆ ದೊರೆತಿಲ್ಲ. ಇನ್ನುಳಿದಂತೆ 20 ಕಿ.ಮೀ. ವ್ಯಾಪ್ತಿಯವರಿಗೆ 265 ರೂಪಾಯಿ ಪಾಸ್‌ ವ್ಯವಸ್ಥೆ ಅನಿಯಮಿತ ಸಂಚಾರದ ಪಾಸ್‌ ನೀಡಲಾಗುವುದು.

ಹಿನ್ನೆಡೆಗೆ ಕಾರಣಗಳೇನು?
ಈಗಾಗಲೇ ಒಪ್ಪಂದದಂತೆ ಕಾಮಗಾರಿ 2017ರ ಅಂತ್ಯದಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ ಕಾಮಗಾರಿ ವಿಳಂಬದಿಂದ ಹಿನ್ನೆಡೆಯಾಗಿದೆ.ಶಿರೂರಿನಿಂದ ಕುಂದಾಪುರದವರೆಗೆ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ.ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮರು ಅಲೈನ್‌ಮೆಂಟ್‌ ಭೂ ಒತ್ತುವರಿ ಪ್ರಕ್ರಿಯೆ ಸಮಸ್ಯೆಯಿಂದ ಹೊನ್ನಾವರ, ಕುಮಟಾ, ಭಟ್ಕಳ, ಕರ್ಕಿ, ಹಳದಿಪುರ, ಶಿರಾಲಿಯ ಕೆಲವು ಕಡೆ ರಸ್ತೆ ಅಗಲವನ್ನು 45 ಮೀ.ನಿಂದ 30 ಮೀ.ಗೆ ಕಡಿಮೆ ಮಾಡಿರುವುದು ಸಹ ವಿಳಂಬಕ್ಕೆ ಕಾರಣವಾಗಿದೆ. ಒತ್ತಿನೆಣೆ ಹಾಗೂ ಅಂಕೋಲಾ ಭಾಗದ ಗುಡ್ಡ ಕುಸಿತ ಸ್ಥಳೀಯ ಸಮಸ್ಯೆಗಳು ಮಂದಗತಿಯ ಕಾಮಗಾರಿ ನಡೆಯುವಂತೆ ಮಾಡಿದೆ.

ರಿಯಾಯಿತಿ ನೀಡದಿದ್ದರೆ ಮತ್ತೆ ಪ್ರತಿಭಟನೆ
ಬೇಡಿಕೆ ಇರುವ ಸರ್ವಿಸ್‌ ರಸ್ತೆಗಳಿಗೆ ನಿರ್ವಹಣಾ ಹಂತದಲ್ಲಿ ಸ್ಪಷ್ಟಪಡಿಸಲಾಗುವುದು. ಉಡುಪಿ ಜಿಲ್ಲಾ ವ್ಯಾಪ್ತಿಗೆ ವಿಶೇಷ ಸ್ಥಳೀಯ ರಿಯಾಯಿತಿ ಅವಕಾಶ ಇದೆ. ಟೋಲ್‌ ರಿಯಾಯಿತಿ ನೀಡದಿದ್ದರೆ ಮತ್ತೂಮ್ಮೆ ಪ್ರತಿಭಟನೆ ನಡೆಸುವುದಾಗಿ ಹೋರಾಟ ಸಮಿತಿ ಸ್ಪಷ್ಟಪಡಿಸಿದೆ.

ವಿಶೇಷ ಪ್ರಯತ್ನ
ಯಾವುದೇ ಕಾರಣಕ್ಕೂ ಶಿರೂರು ವ್ಯಾಪ್ತಿಯ ಜನರಿಗೆ ಟೋಲ್‌ ತೆಗೆದುಕೊಳ್ಳಬಾರದು ಎಂದು ಟೋಲ್‌ ಅಧಿಕಾರಿಗಳಿಗೆ ಸ್ಪಷ್ಟವಾಗಿ ತಿಳಿಸಿದ್ದೇನೆ. ಒಂದೊಮ್ಮೆ ರಿಯಾಯಿತಿ ನೀಡದಿದ್ದರೆ ಸಾವಿರಾರು ಜನರೊಂದಿಗೆ ಟೋಲ್‌ಗೆ ಮುತ್ತಿಗೆ ಹಾಕುವುದಾಗಿ ಈ ಹಿಂದೆಯೇ ತಿಳಿಸಿದ್ದು, ಅಧಿಕಾರಿಗಳು ಸ್ಥಳೀಯರಿಗೆ ಯಾವುದೇ ತೊಂದರೆ ಆಗದ ಹಾಗೆ ನಿರ್ಧಾರ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ.
– ಬಿ.ಎಂ.ಸುಕುಮಾರ್‌ ಶೆಟ್ಟಿ, ಶಾಸಕರು ಬೈಂದೂರು ವಿಧಾನಸಭಾ ಕ್ಷೇತ್ರ.

ಮೇಲ್ದರ್ಜೆಗೇರಬೇಕು
ಕಳೆದ ಎರಡೂವರೆ ವರ್ಷದಿಂದ ನಿರಂತರ ಹೋರಾಟ ನಡೆಸಿದ ಪರಿಣಾಮ ಶಿರೂರು ವ್ಯಾಪ್ತಿಯ ಹಲವು ಬೇಡಿಕೆಗಳನ್ನು ಸರಿಪಡಿಸಿದ್ದಾರೆ. ಸಂಸದರು, ಶಾಸಕರು ಕೂಡ ಪ್ರತಿ ಹಂತದಲ್ಲೂ ನಮಗೆ ಸಹಕಾರ ನೀಡಿದ ಪರಿಣಾಮ ನಮ್ಮ ಹೋರಾಟ ಯಶಸ್ಸು ಕಂಡಿದೆ. ಪ್ರಸ್ತುತ ಶಿರೂರು ಜನತೆಗೆ ಉಚಿತ ಅವಕಾಶ ನೀಡಬೇಕು ಎಂದು ಶಾಸಕರ ಮೂಲಕ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಕಂಪೆನಿಯಿಂದ ಸ್ಪಷ್ಟತೆ ಇನ್ನಷ್ಟೇ ಬರಬೇಕಾಗಿದೆ.
– ಸತೀಶ ಶೆಟ್ಟಿ, ಹೆದ್ದಾರಿ ಸಂಚಾಲಕರು,ಹೋರಾಟ ಸಮಿತಿ ಶಿರೂರು.

ಮೇಲ್ದರ್ಜೆಗೇರಬೇಕು
ಸ್ಥಳೀಯ ಹೆದ್ದಾರಿ ಹೋರಾಟ ಸಮಿತಿ ಹಾಗೂ ಇಲ್ಲಿನ ಬೇಡಿಕೆಗಳ ಕುರಿತು ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಅಧಿಕೃತ ಅನುಮತಿ ಬಂದಿಲ್ಲ.ಶಾಸಕರು ಕೂಡ ಈ ಬಗ್ಗೆ ತಿಳಿಸಿದ್ದಾರೆ. ಹಂತ ಹಂತವಾಗಿ ಅಳವಡಿಸುವ ಜತೆಗೆ ವಿಶೇಷ ಪಾಸ್‌ ಮೂಲಕ ಇಪ್ಪತ್ತು ಕಿ.ಮೀ. ವ್ಯಾಪ್ತಿ ವಾಹನ ಸವಾರರಿಗೆ ಅನುಕೂಲವಾಗಲಿದೆ.
– ಪ್ರೊಜೆಕ್ಟ್ ಮೆನೇಜರ್‌.

-* ಅರುಣ್‌ ಕುಮಾರ್‌, ಶಿರೂರು

ಟಾಪ್ ನ್ಯೂಸ್

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.