ಜನ್ಮಾಷ್ಟಮಿಗೆ ಮುಂಡೇವು ಎಲೆಯ ಮೂಡೆ ಘಮಘಮ


Team Udayavani, Sep 2, 2018, 6:00 AM IST

0109mle1a.jpg

ಮಲ್ಪೆ: ನಾಡಿನಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ ಕಳೆಗಟ್ಟಲು ಆರಂಭಿಸಿದೆ. ಇದರೊಂದಿಗೆ ಸಾಂಪ್ರದಾಯಿಕ ಮುಂಡೇವು ಎಲೆಯ ಮೂಡೆ ಘಮಘಮ ಮನೆಗಳಲ್ಲಿ ವ್ಯಾಪಿಸಲಿದೆ. 

ತುಳುನಾಡಿನ ಜನ ಹಬ್ಬಗಳ ಸಮಯದಲ್ಲಿ ವಿಶೇಷವಾದ ತಿಂಡಿ ತಿನಿಸುಗಳನ್ನು  ಸಿದ್ಧಪಡಿಸುತ್ತಾರೆ. ಅಂತಹ ತಿನಿಸುಗಳ ಪೈಕಿ ಮೂಡೆಯೂ ಒಂದು.  ಅಷ್ಟಮಿಗೂ ಮೂಡೆಗೂ ಅವಿನಾಭಾವ ಸಂಬಂಧ. ಇತ್ತೀಚಿನ ದಿನಗಳಲ್ಲಿ ಮೂಡೆ ವರ್ಷದ ಎಲ್ಲ ದಿನಗಳಲ್ಲೂ ಲಭ್ಯವಾಗಿದ್ದರೂ ಅಷ್ಟಮಿಯ ಮೂಡೆಗೆ ವಿಶೇಷವಿದೆ. ಪ್ರಕೃತಿದತ್ತ ಪರಿಕರದ ಸಹಾಯದಿಂದ ತಯಾರಿಸಲಾಗುವ ಮೂಡೆ ರುಚಿಕರ ಹಾಗೂ ಆರೋಗ್ಯಕ್ಕೂ ಹಿತಕರ. ಆಧುನಿಕ ಭರಾಟೆಯಿಂದಾಗಿ ಇಂತಹ ಹಲವಾರು  ತಿನಿಸುಗಳು ಮರೆತು ಹೋದರೂ ಮೂಡೆ ಮಾತ್ರ ಹಲವಾರು ಮನೆಗಳಲ್ಲಿ ಇನ್ನೂ ಉಳಿದುಕೊಂಡಿದೆ.

ಮೂಡೆ ಎಲೆ ದುಬಾರಿ
ಸಾಂಪ್ರದಾಯಿಕ ಮೂಡೆ ಎಲೆ ಕೂಡ  ದುಬಾರಿಯಾಗಿದೆ.  ಉಡುಪಿಯಲ್ಲಿ  ಶುಕ್ರವಾರ 100 ರೂಪಾಯಿಗೆ  8 ಸಿಗುತ್ತಿದ್ದು ಮುಂಡೇವು ಎಲೆ ಶನಿವಾರದಂದು 100 ರೂ.ಗೆ 6 ಮಾತ್ರ ಸಿಗುತ್ತಿದೆ. ಇನ್ನು ಹಲಸಿನ ಎಲೆ ಕೊಟ್ಟೆಗಳು 20 ರೂ.ಗೆ 6ರಂತೆ ಮಾರಾಟವಾಗುತ್ತಿದೆ.

ಪ್ರಕೃತಿದತ್ತವಾಗಿ ಸಿಗುವ ಮುಂಡೇವು ಎಲೆ ಮೂಡೆ ತಯಾರಿಕೆ ಮೂಲ ವಸ್ತು.  ಹಿಂದೆ ಪ್ರತಿ ಮನೆಯಲ್ಲಿ  ತಮಗೆ ಬೇಕಾದ ಎಲೆಯಲ್ಲಿ ತಾವೇ  ತಯಾರಿಸುತ್ತಿದ್ದರು. ಈಗ ಬೇಕಿದ್ದರೆ ಮಾರುಕಟ್ಟೆಗೆ ಹೋಗಬೇಕು. ಅದೂ ಕೂಡ ಎಲ್ಲ ಕಡೆ ಲಭ್ಯ ವಿರುವುದಿಲ್ಲ.  ಇದನ್ನು ತಯಾರಿಸುತಿದ್ದವರ ಸಂಖ್ಯೆ ಇಂದು ಬೆರಳೆಣಿಕೆಯಷ್ಟು ಮಾತ್ರ ಕಾಣಸಿಗುತ್ತದೆ. ಆಧುನಿಕರಣದ ಧಾವಂತದಲ್ಲಿ ಇಂದು ಮೂಡೆ ಕಟ್ಟುವ  ಕಲೆಗಾರಿಕೆಯಲ್ಲಿ ಯಾರಿಗೂ ಆಸಕ್ತಿ ಇಲ್ಲ.

ಹಬ್ಬ ಹರಿದಿನಗಳಲ್ಲಿ ಗ್ರಾಮೀಣ ಪ್ರದೇಶದ ಜನರು ಒಂದಷ್ಟು  ಮೂಡೆ ಒಲಿಯನ್ನು ತಯಾರಿಸಿ ಮಾರಾಟ ಮಾಡುತ್ತಾರೆ. ಬ್ರಹ್ಮಾವರದ ಹೇರೂರು ಸಮೀಪದಲ್ಲಿ  ಎರಡು ಕುಟುಂಬಗಳು ಈಗಲೂ ಈ ಮೂಡೆ ಒಳಿಯನ್ನು ತಯಾರಿಸುತ್ತಿದೆ.

ಅಷ್ಟಮಿಗೆ ಒಂದೆರಡು ದಿನ ಉಡುಪಿ ರಥಬೀದಿಯ ಕಾಣ ಸಿಗುತ್ತದೆ. ಕೆಲವಡೆ ಅಂಗಡಿಗಳ ಮುಂದೆ ಕೇದಗೆಯ ಗರಿ ಮಾಡಿಕೊಂಡು ಮೂಡೆ ಒಲಿಯಲ್ಲಿ ಕಟ್ಟಿ ಮಾರುವವರು ಕಂಡುಬರುತ್ತಾರೆ.

ಟಾಪ್ ನ್ಯೂಸ್

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ನೇಣು ಬಿಗಿದು ಆತ್ಮಹತ್ಯೆ

Udupi: ನೇಣು ಬಿಗಿದು ಆತ್ಮಹತ್ಯೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Pernankila Temple:  ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Pernankila Temple: ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ

Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

29

Hassan Lok sabha Constituency: ಪ್ರಜ್ವಲ್‌ ರೇವಣ್ಣ ನಾಮಪತ್ರ ಸಲ್ಲಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.