ಕರಾವಳಿಯಲ್ಲಿ ಜಿಎಸ್‌ಟಿ ಇಳಿಕೆಯೇ ಹೆಚ್ಚು ಲಾಭ

ರಿಯಲ್‌ ಎಸ್ಟೇಟ್‌ ರಂಗಕ್ಕೆ ಕೇಂದ್ರದ 25 ಸಾವಿರ ಕೋಟಿ ರೂ. ನೆರವು

Team Udayavani, Nov 12, 2019, 5:15 AM IST

0911MLR40

ಉಡುಪಿ/ಮಂಗಳೂರು: ಅಪೂರ್ಣ ರಿಯಲ್‌ ಎಸ್ಟೇಟ್‌ ಪ್ರಾಜೆಕ್ಟ್ ಗಳನ್ನು ಪೂರ್ಣಗೊಳಿಸಲು ಕೇಂದ್ರ ಸರಕಾರ ಘೋಷಿಸಿರುವ 25 ಸಾವಿರ ಕೋಟಿ ರೂ. ನೆರವು ಉಭಯ ನಗರಗಳಲ್ಲಿನ ಉದ್ಯಮಕ್ಕೆ ಬಹಳ ದೊಡ್ಡ ಲಾಭ ತಂದುಕೊಡದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಬಾಕಿ ಪ್ರಾಜೆಕ್ಟ್ಗಳು ಕಡಿಮೆ ಸಂಖ್ಯೆಯ ಲ್ಲಿರುವುದು ಮತ್ತು ಸಣ್ಣ-ಮಧ್ಯಮ ವರ್ಗದ ವಸತಿ ಪ್ರಾಜೆಕ್ಟ್ ಕಡಿಮೆಯಿರುವ ಕಾರಣ ಈ ನೆರವಿನಿಂದ ಬಹಳ ಅನುಕೂಲವಾಗದು ಎನ್ನುತ್ತಾರೆ ರಿಯಲ್‌ ಎಸ್ಟೇಟ್‌ ಉದ್ಯಮಿಗಳು.

ಮಿಶ್ರ ಪ್ರತಿಕ್ರಿಯೆ
ಉಭಯ ನಗರಗಳಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮ ಬೆಳೆಯುತ್ತಿದೆ. ಆದರೆ 3 ವರ್ಷಗಳ ಹಿಂದೆ ಆಗಿದ್ದ ನೋಟು ರದ್ದತಿ, ಬಳಿಕ ಬಂದ ಜಿಎಸ್‌ಟಿ ದೇಶಾದ್ಯಂತ ಈ ಉದ್ಯಮಕ್ಕೆ ಭಾರೀ ಹೊಡೆತ ನೀಡಿತ್ತು. ಈಗ ಇಡೀ ಉದ್ಯಮದ ಪುನಶ್ಚೇತನಕ್ಕೆ ಕೇಂದ್ರ ಈ ನೆರವು ಘೋಷಿಸಿದೆ. ಆದರೆ ಈ ಬಗ್ಗೆ ರಿಯಲ್‌ ಎಸ್ಟೇಟ್‌ ವಲಯಕ್ಕೆ ಸ್ಪಷ್ಟ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಪ್ರಸ್ತುತ ಯಾವುದೇ ಪ್ರಾಜೆಕ್ಟ್ ಕೈಗೆತ್ತಿಕೊ ಳ್ಳುವುದಿದ್ದರೂ ರೇರಾ ಕಾಯಿದೆಯಡಿ ನೋಂದಣಿ ಕಡ್ಡಾಯ. ಅಂತಿಮ ಹಂತದಲ್ಲಿ ಕಾಮಗಾರಿ ಬಾಕಿಯಾದ ಕೈಗೆಟುಕುವ ಹಾಗೂ ಮಧ್ಯಮ ಆದಾಯ ವರ್ಗದ ವಸತಿ ಯೋಜನೆಗಳಿಗೆ ಕೇಂದ್ರದ ಈ ಸೌಲಭ್ಯ ಸಿಗುತ್ತದೆ. ಎಲ್ಲ ಪ್ರಾಜೆಕ್ಟ್ಗಳು ಶೇ. 100ರಷ್ಟು ನೋಂದಣಿಯಾಗಿದ್ದರೂ ಯೋಜನೆಯ ಸೌಲಭ್ಯದಿಂದ ದೂರ ಉಳಿಯಲಿದ್ದಾರೆ ಎನ್ನುತ್ತಾರೆ ಬಿಲ್ಡರ್‌ಗಳು.

37 ಅಪೂರ್ಣ ಪ್ರಾಜೆಕ್ಟ್
ಮಂಗಳೂರು ಮತ್ತು ನಗರಸಭೆ ವ್ಯಾಪ್ತಿಯಲ್ಲಿ 37 ಅಪೂರ್ಣ ಪ್ರಾಜೆಕ್ಟ್ ಗಳಿವೆ. ಜಿಎಸ್‌ಟಿ ಕಡಿತಗೊಳಿಸದಿದ್ದಲ್ಲಿ ಚೇತರಿಕೆ ಕಷ್ಟ. ಆದಾಗ್ಯೂ ಕರಾವಳಿಯಲ್ಲಿ ನಷ್ಟದಿಂದ ಪ್ರಾಜೆಕ್ಟ್ ನಿಂತುಹೋದ ಉದಾಹರಣೆಗಳು ಕಡಿಮೆ ಎನ್ನುತ್ತಾರೆ ಸಿಟಿ ರಿಯಲ್‌ ಎಸ್ಟೇಟ್‌ನ ರವೀಂದ್ರ ರಾವ್‌.

ಲ್ಯಾಂಡ್‌ ಟ್ರೇಡ್ಸ್‌ನ ಶ್ರೀನಾಥ್‌ ಹೆಬ್ಟಾರ್‌ ಪ್ರಕಾರ, ಜಿಎಸ್‌ಟಿ, ಟ್ಯಾಕ್ಸ್‌ ನಲ್ಲಿ ರಿಯಾಯಿತಿ ನೀಡಿದರೆ ಅನುಕೂಲ. ಬಡ್ಡಿದರ, ಜಿಎಸ್‌ಟಿಯಲ್ಲಿ ಇಳಿಸಿದರೆ ಗ್ರಾಹಕರಿಗೂ ಸಹಾಯವಾಗಬಹುದು.

ಸಿದ್ಧ ಮನೆಗೆ ಬೇಡಿಕೆ
ಜನರಿಗೆ ಸಿದ್ಧ ಮನೆ ಬೇಕು. ಆದರೆ ಪ್ರಾಜೆಕ್ಟ್ ಪೂರ್ಣಗೊಳಿಸಲು ಬಿಲ್ಡರ್‌ಗಳ ಬಳಿ ಹಣಕಾಸು ಇರದೆ ಕೆಲವು ಅರ್ಧಕ್ಕೆ ನಿಂತಿವೆ. ಸರಕಾರದ ನೆರವಿನಿಂದ ಕುಸಿದ ರಿಯಲ್‌ ಎಸ್ಟೇಟ್‌ ಉದ್ಯಮ ಚೇತರಿಕೆಯಾದೀತು. ಆದರೆ ಮಂಗಳೂರಿಗೆ ಇದರಿಂದ ಅನುಕೂಲ ಕಡಿಮೆ. ಬೆಂಗಳೂರು, ಮುಂಬಯಿ, ಕೋಲ್ಕತ್ತಾ ಗಳಂಥ ನಗರಗಳಿಗೆ ಪೂರಕ ಎನ್ನುತ್ತಾರೆ ಅಭೀಷ್‌ ಬಿಲ್ಡರ್ನ ಪುಷ್ಪರಾಜ್‌ ಜೈನ್‌.

ಮಂಗಳೂರಿಗೆ
ಸಹಕಾರಿಯಾಗದು
ರಿಯಲ್‌ ಎಸ್ಟೇಟ್‌ ಜನರಲ್‌ ಸೆಕ್ಟರ್‌ಗೆ ಕೇಂದ್ರದ ಈ ಯೋಜನೆ ಸಹಾಯ ಆಗದು. ಲೋ ಹೌಸ್‌ ಮತ್ತು ಮೀಡಿಯಂ ಹೌಸಿಂಗ್‌ ಪ್ರಾಜೆಕ್ಟ್ ಗಳಿಗೆ ಸ್ವಲ್ಪ ಸಹಾಯವಾಗಬಹುದು. ಮಂಗಳೂರಿನಲ್ಲಿ ಇಂತಹ ಪ್ರಾಜೆಕ್ಟ್ ಗಳು ಇಲ್ಲ.
– ನವೀನ್‌ ಕಾಡೋìಜ, ಅಧ್ಯಕ್ಷರು, ಕ್ರೆಡಾೖ

ಈ ನೆರವು ಹೇಗೆ ಸಿಗುತ್ತದೆ ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿ ತಿಳಿಸಿಲ್ಲ. ಉಡುಪಿಯಲ್ಲಿ ಕೆಲವೇ ಕೆಲವು ಪ್ರಾಜೆಕ್ಟ್ಗಳಿವೆ. ರೇರಾ ಕಾಯ್ದೆ ಅನುಷ್ಠಾನಗೊಳ್ಳುವ ಮುನ್ನ ನಡೆದ ಕೆಲವು ಪ್ರಾಜೆಕ್ಟ್ಗಳು ಬಾಕಿಯಿವೆ. ಇವುಗಳಿಗೂ ನೆರವು ಅಗತ್ಯವಿದೆ. ಇದಕ್ಕೆ ಏನು ಕ್ರಮ ಕೈಗೊಂಡಿದ್ದಾರೆ ಎಂದು ಸ್ಪಷ್ಟವಾಗಿ ತಿಳಿಸಿಲ್ಲ.
– ಜೆರ್ರಿ ವಿನ್ಸೆಂಟ್‌ ಡಯಾಸ್‌
ಅಧ್ಯಕ್ಷರು, ಉಡುಪಿ ಬಿಲ್ಡರ್ ಅಸೋಸಿಯೇಶನ್‌

ಟಾಪ್ ನ್ಯೂಸ್

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.