ಕೋಟದಲ್ಲಿ ಆರಂಭಗೊಳ್ಳಲಿದೆ ಕರಾವಳಿಯ ಪ್ರಥಮ ಮತ್ಸ್ಯದರ್ಶನಿ ಕೇಂದ್ರ

ಮೀನುಗಾರಿಕೆ ಇಲಾಖೆ, ಕೆಎಫ್‌.ಡಿ.ಸಿ. ನೇತೃತ್ವದ ಸಂಸ್ಥೆ

Team Udayavani, Mar 13, 2020, 5:30 AM IST

ಕೋಟದಲ್ಲಿ ಆರಂಭಗೊಳ್ಳಲಿದೆ ಕರಾವಳಿಯ ಪ್ರಥಮ ಮತ್ಸ್ಯದರ್ಶನಿ ಕೇಂದ್ರ

ಕೋಟ: ಮೀನುಗಾರಿಕೆ ಇಲಾಖೆ, ಕೆಎಫ್‌.ಡಿ.ಸಿ. ಸಂಸ್ಥೆ ಆಶ್ರಯದಲ್ಲಿ ಕಡಿಮೆ ಬೆಲೆಗೆ ಮೀನು ಊಟವನ್ನು ವಿತರಿಸುವ ಮತ್ಸ್ಯದರ್ಶನಿ ಕೇಂದ್ರಗಳು ಈಗಾಗಲೇ ಹಲವು ಕಡೆಗಳಲ್ಲಿವೆ. ಪಸ್ತುತ ರಾಜ್ಯದ 11 ಜಿಲ್ಲೆಗಳಿಗೆ ಈ ಕೇಂದ್ರವನ್ನು ವಿಸ್ತರಿಸಲು ಇಲಾಖೆ ನಿರ್ಧರಿಸಿದ್ದು ಅದರ ಭಾಗವಾಗಿ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಪ್ರಥಮ ಮತ್ಸ್ಯದರ್ಶನಿ ಕೇಂದ್ರ ಕೋಟದಲ್ಲಿ ತಲೆ ಎತ್ತಲು ಎಲ್ಲ ತಯಾರಿಗಳು ನಡೆದಿದೆ.

ಟೆಂಡರ್‌ ಹಂತಕ್ಕೆ
ಹೊಸದಾಗಿ ಆರಂಭಗೊಳ್ಳಲಿರುವ ಮತ್ಸ್ಯದರ್ಶನಿ ಕೇಂದ್ರಗಳಿಗೆ ಸೂಕ್ತ ಸ್ಥಳವನ್ನು ಕಾಯ್ದಿರಿಸುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಕೆ.ಎಫ್‌.ಡಿ.ಸಿ. ಸಂಸ್ಥೆ ಮನವಿಯನ್ನು ಮಾಡಿತ್ತು. ಅದರಂತೆ ಕೋಟದಲ್ಲಿ ನಿರುಪಯುಕ್ತವಾಗಿರುವ ಕೋಟ ಮೀನು ಮಾರುಕಟ್ಟೆಯಲ್ಲಿ ಈ ಕೇಂದ್ರ ಸ್ಥಾಪಿಸಲು ಸ್ಥಳೀಯಾಡಳಿತ ಶಿಫಾರಸು ಮಾಡಿದ್ದು ಈ ಕುರಿತು ಪ್ರಸ್ತಾವನೆ ಸಲ್ಲಿಕೆಯಾಗಿ ಟೆಂಡರ್‌ ಹಂತಕ್ಕೆ ತಲುಪಿದೆ.

ನಿರುಪಯುಕ್ತ ಮಾರುಕಟ್ಟೆ ಕಟ್ಟಡಕ್ಕೆ ಜೀವ
ಎನ್‌ಎಫ್‌ಡಿಬಿ ಸಂಸ್ಥೆಯ ಶೇ.90ಅನುದಾನ ಹಾಗೂ ರಾಜ್ಯ ಸರಕಾರದ ಶೇ.10 ಅನುದಾನದಲ್ಲಿ, ಒಟ್ಟು 75ಲಕ್ಷ ವೆಚ್ಚದಲ್ಲಿ 2015ಜುಲೈನಲ್ಲಿ ಕೋಟದ ಮೀನುಮಾರುಕಟ್ಟೆ ನಿರ್ಮಿಸಲಾಗಿತ್ತು. ಆದರೆ ಮೀನುಗಾರ ಮಹಿಳೆಯರು ಒಂದು ತಿಂಗಳು ಕೂಡ ಇಲ್ಲಿ ವ್ಯಾಪಾರ ನಡೆಸದ ಕಾರಣ ಮಾರುಕಟ್ಟೆ ಐದು ವರ್ಷದಿಂದ ನಿರುಪಯುಕ್ತವಾಗಿದೆ. ಹೀಗಾಗಿ ಮತ್ಸ್ಯದರ್ಶನಿ ಕೇಂದ್ರ ಸ್ಥಾಪನೆಯಾದಲ್ಲಿ ಪಾಳು ಬಿದ್ದ ಮೀನು ಮಾರುಕಟ್ಟೆ ಕಟ್ಟಡ ಮತ್ತೆ ಬಳಕೆಯಾದಂತಾಗಲಿದೆ.

ಮತ್ಸ್ಯದರ್ಶನಿಯಲ್ಲಿ ಏನೇನಿವೆ?
ಖಾಸಗಿ ಹೋಟೆಲ್‌ಗ‌ಳಿಗಿಂತ ಅರ್ಧದಷ್ಟು ಕಡಿಮೆ ಬೆಲೆಗೆ ಮೀನು ಊಟ ಸಿಗುತ್ತದೆ ಹಾಗೂ ಎಲ್ಲಾ ತರಹದ ಮೀನಿನ ಫ್ರೈ, ಗಂಜಿ ಊಟ ಮುಂತಾದ ಸೌಲಭ್ಯಗಳು ಸಿಗಲಿವೆ. ಈ ಕೇಂದ್ರಗಳಲ್ಲಿ ಆಹಾರ ತಯಾರಿಸಲು ಮಲ್ಪೆ, ಮಂಗಳೂರಿನಿಂದ ಶುಚಿ-ರುಚಿಯಾದ ಮೀನು ರವಾನೆಯಗಲಿವೆ.

ಕರಾವಳಿಯ ಪ್ರಥಮ ಮತ್ಸ್ಯದರ್ಶನಿ
ಬೆಂಗಳೂರು, ತುಮಕೂರು, ಶಿವಮೊಗ್ಗ, ಕೋಲಾರ, ಬಳ್ಳಾರಿಯಲ್ಲಿ ಈ ಕೇಂದ್ರಗಳು ಈಗಾಗಲೇ ಕಾರ್ಯನಿರ್ವಹಿಸುತಿವೆ. ಬೆಳಗಾವಿ, ಬಿಜಾಪುರ, ಗುಲ್ಬರ್ಗ, ರಾಯಚೂರು, ಶಿವಮೊಗ್ಗ, ಹುಬ್ಬಳ್ಳಿ, ಬೆಂಗಳೂರು, ತುಮಕೂರು, ಮೈಸೂರು, ಮಂಗಳೂರು, ಉಡುಪಿ ಸೇರಿದಂತೆ 11 ಜಿಲ್ಲೆಗಳಿಗೆ ವಿಸ್ತರಿಸಲು ಇಲಾಖೆ ಸಕಲ ಸಿದ್ಧತೆ ನಡೆಸಿದೆ. ಅದರಂತೆ ದ.ಕ., ಉಡುಪಿ ಜಿಲ್ಲಾಡಳಿತಕ್ಕೆ ಸ್ಥಳ ಗುರುತಿಸುವಂತೆ ಮನವಿ ಮಾಡಲಾಗಿತ್ತು. ದ.ಕ.ದಲ್ಲಿ ಸ್ಥಳ ಮೀಸಲಿರಿಸುವ ಪ್ರಕ್ರಿಯೆ ಚಾಲನೆಯಲ್ಲಿದ್ದು, ಉಡುಪಿಯಲ್ಲಿ ಜಾಗ ಗುರುತಿಸಿರುವುದರಿಂದ ಕೇಂದ್ರ ಕೋಟದಲ್ಲಿ ಶುರುವಾಗಲಿದೆ.

ಟೆಂಡರ್‌ ಕರೆಯಲಾಗುವುದು
ಕೋಟ ಮೀನುಮಾರುಕಟ್ಟೆ ಕಟ್ಟಡದಲ್ಲಿ ಮತ್ಸ$ದರ್ಶನಿ ಕೇಂದ್ರ ತೆರೆಯುವಂತೆ ಸ್ಥಳೀಯಾಡಳಿತ ಮನವಿ ಮಾಡಿದ್ದು ಎಲ್ಲಾ ತಯಾರಿ ನಡೆದಿದೆ. ಕೇವಲ ಟೆಂಡರ್‌ ಪ್ರಕ್ರಿಯೆ ಬಾಕಿ ಇದ್ದು ಶೀಘ್ರದಲ್ಲಿ ಕೇಂದ್ರ ಆರಂಭಗೊಳ್ಳಲಿದೆ ಹಾಗೂ ಇದು ಕರಾವಳಿಯ ಪ್ರಥಮ ಕೇಂದ್ರವೆಂಬ ಹೆಗ್ಗಳಿಕೆ ಪಾತ್ರವಾಗಲಿದೆ.
-ಎಂ.ಎಲ್‌. ದೊಡ್ಮನೆ, ಮುಖ್ಯ ವ್ಯವಸ್ಥಾಪಕ ನಿರ್ದೇಶಕರು ಕೆ.ಎಫ್‌.ಡಿ.ಸಿ.

ಅಗತ್ಯ ಸಹಕಾರ
ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಸಲಹೆಯಂತೆ ನಿರುಪಯುಕ್ತವಾಗಿರುವ ಮೀನುಮಾರುಕಟ್ಟೆ ಕಟ್ಟಡವನ್ನು ಮತ್ಸ್ಯದರ್ಶನಿ ಕೇಂದ್ರಕ್ಕೆ ಬಳಸಿಕೊಳ್ಳುವಂತೆ ಮನವಿ ಮಾಡಿದ್ದೇವೆ. ಕರಾವಳಿಯಲ್ಲೇ ಪ್ರಥಮವಾಗಿ ನಮ್ಮ ಪಂಚಾಯತ್‌ ವ್ಯಾಪ್ತಿಯಲ್ಲಿ ಈ ಕೇಂದ್ರ ಆರಂಭಗೊಳ್ಳುವುದು ಸಂತಸ ತಂದಿದೆ. ಸೂಕ್ತ ಸಹಕಾರ ನೀಡಲಾಗುವುದು.
-ವನಿತಾ ಶ್ರೀಧರ್‌ ಆಚಾರ್ಯ, ಅಧ್ಯಕ್ಷರು ಕೋಟ ಗ್ರಾ.ಪಂ.

-ರಾಜೇಶ್‌ ಗಾಣಿಗ ಅಚ್ಲಾಡಿ

ಟಾಪ್ ನ್ಯೂಸ್

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Shobha, Bharathi Shetty  ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Shobha, Bharathi Shetty ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

banMysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ ಅಡಿಗೆ ಸಿಲುಕಿದ ಬೈಕ್; ಯಕ್ಷಗಾನ ಕಲಾವಿದ ಸ್ಥಳದಲ್ಲೇ ಮೃತ್ಯು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Shobha, Bharathi Shetty  ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Shobha, Bharathi Shetty ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.