ಬಜೆಟ್ ನಿರೀಕ್ಷೆಗಳು : ಉಡುಪಿ ಜಿಲ್ಲೆಗೆ ಬೇಕಿದೆ ಸರಕಾರಿ ವೈದ್ಯ ಕಾಲೇಜು
Team Udayavani, Jan 28, 2021, 7:45 AM IST
ರಾಜ್ಯ ಬಜೆಟ್ಗೆ ಸರ್ವ ತಯಾರಿ ನಡೆಯುತ್ತಿದ್ದು, ಉಡುಪಿ ಜಿಲ್ಲೆಯ ಬೇಡಿಕೆಯ ಪಟ್ಟಿಯೂ ಬೆಳೆಯುತ್ತಿದೆ. ಈ ಬಾರಿಯ ಬಜೆಟ್ನಲ್ಲಿ ಉಡುಪಿ ಜಿಲ್ಲೆಯ ನಿರೀಕ್ಷೆಗಳೂ ಬಹಳಷ್ಟಿವೆ.
- ರೈತರ ಆಶಾಕಿರಣವಾಗಿದ್ದ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಸ್ಥಗಿತದಿಂದ ಸಾವಿರಾರು ಮಂದಿ ಕೃಷಿಕರು ತೊಂದರೆಗೊಳಗಾಗಿದ್ದಾರೆ. ಈ ಬಾರಿಯ ಬಜೆಟ್ನಲ್ಲಾದರೂ ಕಾರ್ಖಾನೆ ಪುನರಾರಂಭದ ನಿರೀಕ್ಷೆ ಈಡೇರಲಿದೆಯೇ? ಎಂಬ ಕಾತರಜಿಲ್ಲೆಯ ಜನರದ್ದು.
ತಲಾ ಆದಾಯ : 2,65,955 ರೂಪಾಯಿ
- ಶೈಕ್ಷಣಿಕವಾಗಿ ಜಿಲ್ಲೆ ಮುಂದುವರಿದಿದ್ದರೂ ಜಿಲ್ಲೆಗೊಂದು ಸರಕಾರಿ ವೈದ್ಯಕೀಯ ಕಾಲೇಜು ಇಲ್ಲ ಎಂಬ ಕೊರಗು ಹಲವಾರು ವರ್ಷಗಳಿಂದಲೂ ಕಾಡುತ್ತಲೇ ಇದೆ. ಕಳೆದ ಬಜೆಟ್ನಲ್ಲಿಯೂ ಈ ಬಗ್ಗೆ ನಿರೀಕ್ಷೆ ಇತ್ತಾದರೂ ಈಡೇರಿರಲಿಲ್ಲ.
ಕಳೆದ ಬಜೆಟ್ನಲ್ಲಿ ಯೋಜನಾ ವೆಚ್ಚ : 1.33%
- ಮೀನುಗಾರರ ಶ್ರೇಯೋಭಿವೃದ್ಧಿಗಾಗಿ ಪ್ರತ್ಯೇಕ ಮೀನುಗಾರಿಕಾ ನೀತಿ ರಚಿಸಿ ಮೀನುಗಾರರ ಬವಣೆ ನೀಗಿಸುವಂತೆ ಈಗಾಗಲೇ ಹಲವೆಡೆಗಳಿಂದ ಬೇಡಿಕೆ ವ್ಯಕ್ತವಾಗುತ್ತಿದೆ.
ಸಚಿವರ ಸಂಖ್ಯೆ : 1
- ಬೈಂದೂರು ಹಾಗೂ ಕೊಲ್ಲೂರಿನ ಸಮಗ್ರ ಅಭಿವೃದ್ಧಿ ದೃಷ್ಟಿಕೋನದಿಂದ ಉಡಾನ್ ಯೋಜನೆಯಡಿ ಬೈಂದೂರಿನಲ್ಲೊಂದು ವಿಮಾನ ನಿಲ್ದಾಣ ನಿರ್ಮಿಸುವ ಬಗ್ಗೆ ಚಿಂತನೆಗಳೂ ನಡೆಯುತ್ತಿವೆ. ಈ ಬಗ್ಗೆ ಬಜೆಟ್ನಲ್ಲಿ ಅಧಿಕೃತವಾಗಿ ಪ್ರಕಟನೆಯಾದರೆ ಅಭಿವೃದ್ಧಿಯ ಆಶಾವಾದಕ್ಕೆ ಹೊಸ ಹುರುಪು ಬರಲಿದೆ.
ಮಾನವ ಅಭಿವೃದ್ಧಿ ಸೂಚ್ಯಂಕ ರ್ಯಾಂಕ್ : 12
- ಪಡುಕೆರೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬಹು ಕೋಟಿ ವೆಚ್ಚದ ಮರೀನಾ ಯೋಜನೆ ಘೋಷಣೆಯ ಬಗ್ಗೆಯೂ ಈ ಬಾರಿಯ ಬಜೆಟ್ನಲ್ಲಿ ನಿರೀಕ್ಷೆ ಹೊಂದಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ