Udupi: ಚುನಾವಣೆ-ಕ್ಷೇತ್ರ ಪುನರ್ವಿಂಗಡಣೆ- 28-ಜಿ.ಪಂ , ತಾಲೂಕು ಪಂಚಾಯತ್‌ -95 ಕ್ಷೇತ್ರ


Team Udayavani, Aug 9, 2023, 11:15 AM IST

Udupi: ಚುನಾವಣೆ:ಕ್ಷೇತ್ರ ಪುನರ್ವಿಂಗಡಣೆ- ಉಡುಪಿ ಜಿ.ಪಂ.- 28, ತಾ. ಪಂಚಾಯತ್‌ -95 ಕ್ಷೇತ್ರ

ಜಿಲ್ಲಾ ಪಂಚಾಯತ್‌ ಮತ್ತು ತಾಲೂಕು ಪಂಚಾಯತ್‌ ಚುನಾವಣೆ ನಡೆಸಲು ಕ್ಷೇತ್ರಗಳನ್ನು ಪುನರ್ವಿಂಗಡಿಸಿ ಜಿಲ್ಲಾಡಳಿತ ವತಿಯಿಂದ ಅಂತಿಮ ಕರಡು ಪ್ರತಿಯನ್ನು ರಾಜ್ಯ ಚುನಾವಣ ಆಯೋಗಕ್ಕೆ ಕಳುಹಿಸಲಾಗಿದೆ. ಇದರಂತೆ ಉಡುಪಿ ಜಿಲ್ಲೆಯಲ್ಲಿ ಎರಡು ಜಿ.ಪಂ. ಕ್ಷೇತ್ರಗಳು ಹೆಚ್ಚಳವಾಗಿವೆ. ತಾ.ಪಂ. ಕ್ಷೇತ್ರ ಗಳ ಸಂಖ್ಯೆ ಹಿಂದಿನಂತೆ ಜಿಲ್ಲೆಯಲ್ಲಿ ಒಟ್ಟು 95 ಕ್ಷೇತ್ರಗಳು ಯಥಾಸ್ಥಿತಿಯಲ್ಲಿವೆ.

ಜಿಲ್ಲೆಯಲ್ಲಿ ಈ ಹಿಂದೆ 26 ಜಿ.ಪಂ. ಕ್ಷೇತ್ರಗಳಿದ್ದರೆ ಈ ಬಾರಿ ಈ ಸಂಖ್ಯೆ 28ಕ್ಕೇರಿದೆ. ಉಡುಪಿ, ಕಾರ್ಕಳ ತಾಲೂಕಿನಲ್ಲಿ ತಲಾ ನಾಲ್ಕು, ಕಾಪುವಿನಲ್ಲಿ ಮೂರು, ಬ್ರಹ್ಮಾವರದಲ್ಲಿ ಐದು, ಬೈಂದೂರು ಮೂರು, ಕುಂದಾಪುರದಲ್ಲಿ ಏಳು, ಹೆಬ್ರಿಯಲ್ಲಿ ಎರಡು ಕ್ಷೇತ್ರಗಳಿವೆ.

ಬ್ರಹ್ಮಾವರ ತಾಲೂಕಿನಲ್ಲಿ ಉಪ್ಪೂರು ಹೊಸ ಜಿ.ಪಂ. ಕ್ಷೇತ್ರವಾದರೆ, ಹೆಬ್ರಿ ತಾಲೂಕಿನಲ್ಲಿ ಚಾರ ಇನ್ನೊಂದು ಹೊಸ ಕ್ಷೇತ್ರವಾಗಿದೆ. ಕಳೆದ ಬಾರಿ ಹಿರಿಯಡಕ ಜಿ.ಪಂ. ಕ್ಷೇತ್ರವಿದ್ದರೆ ಈ ಬಾರಿ 80 ಬಡಗಬೆಟ್ಟು ಕ್ಷೇತ್ರವಾಗಿದೆ. ಹಿರಿಯಡಕ ಕ್ಷೇತ್ರದ ಕೆಲವಂಶ 80 ಬಡಗಬೆಟ್ಟು ಕ್ಷೇತ್ರಕ್ಕೆ ಸೇರಿದರೆ ಕೆಲವಂಶ ಪೆರ್ಡೂರು ಕ್ಷೇತ್ರಕ್ಕೆ ಹಂಚಿಕೆಯಾಗಿದೆ.

ಪೆರ್ಡೂರಿನಲ್ಲಿದ್ದ ಕೆಲವು ಭಾಗವನ್ನು ಹೊಸ ಕ್ಷೇತ್ರವಾದ ಉಪ್ಪೂರು ಕ್ಷೇತ್ರಕ್ಕೆ ಹಂಚಿ ಹಾಕಲಾಗಿದೆ. ಹಿಂದಿನ ಕಟಪಾಡಿ ಜಿ.ಪಂ. ಕ್ಷೇತ್ರ ಈಗ ಕುರ್ಕಾಲು ಕ್ಷೇತ್ರವಾಗಿದೆ. ಎಲ್ಲೂರು ಕ್ಷೇತ್ರವೀಗ ಶಿರ್ವ ಕ್ಷೇತ್ರವಾಗಿದೆ. ಮಂದಾರ್ತಿ ಮತ್ತು ಕೋಟದ ಕೆಲವು ಗ್ರಾಮಗಳನ್ನು ಹೊಸದಾಗಿ ಸೃಜಿಸಿದ ಶಿರಿಯಾರ ಜಿ.ಪಂ. ಕ್ಷೇತ್ರಕ್ಕೆ ಸೇರಿಸಲಾಗಿದೆ. ಈ ಹಿಂದೆ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಹಂಚಿ ಹೋಗಿದ್ದ ಜಿ.ಪಂ. ಕ್ಷೇತ್ರಗಳು ಈಗ ಒಂದೇ ವಿಧಾನಸಭಾ ಕ್ಷೇತ್ರದೊಳಗೆ ಬಂದಿದೆ.

ಬೈಂದೂರಿನ ಮೂರು ಗ್ರಾ.ಪಂ.ಗಳು ಲುಪ್ತಗೊಂಡು ಪಟ್ಟಣ ಪಂಚಾಯತ್‌ ಆದ ಕಾರಣ ಅಲ್ಲಿ ಬದಲಾವಣೆಗಳು ಕಂಡಿವೆ. ಕ್ಷೇತ್ರಗಳ ವ್ಯಾಪ್ತಿ ಬದಲಾವಣೆಯಾಗಿದೆ. ಬೈಂದೂರು ಕ್ಷೇತ್ರ ಲುಪ್ತಗೊಂಡು ಕೊಲ್ಲೂರು ಹೊಸ ಕ್ಷೇತ್ರವಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರಗಳನ್ನು ರಚಿಸಲಾಗಿದೆ.

ತಾ.ಪಂ. ಕ್ಷೇತ್ರಗಳು ಪೂರ್ಣವಾಗಿ ಜಿ.ಪಂ. ಕ್ಷೇತ್ರದೊಳಗೆ ಇರಬೇಕೆಂಬ ಮತ್ತು ಗ್ರಾ.ಪಂ.ಗಳನ್ನು ವಿಭಜಿಸದೆ ತಾ.ಪಂ. ಕ್ಷೇತ್ರ ರಚಿಸಬೇಕೆಂಬ ಮಾನದಂಡ ಅನುಸರಿಸಲಾಗಿದೆ. ಚುನಾವಣ ಆಯೋಗವು ಇರಿಸಿಕೊಂಡ ಮಾನದಂಡವೆಂದರೆ ಆ ಕ್ಷೇತ್ರ ವ್ಯಾಪ್ತಿ ಅತೀ ದೊಡ್ಡ ಗ್ರಾ.ಪಂ./ಗ್ರಾಮಗಳ ಹೆಸರನ್ನೇ ಕ್ಷೇತ್ರಕ್ಕೆ ಹೆಸರಿಸುವುದು. ಜಿ.ಪಂ. ಕ್ಷೇತ್ರ  30ರಿಂದ 35,000 ಜನಸಂಖ್ಯೆಗೆ ಮತ್ತು ತಾ.ಪಂ. ಕ್ಷೇತ್ರ ದಲ್ಲಿ 10ರಿಂದ 12,000 ಜನ ಸಂಖ್ಯೆಗೆ ಅನುಗುಣವಾಗಿ ಕ್ಷೇತ್ರ ವಿಂಗಡಿಸಲಾಗಿದೆ. ಕೆಲವು ಕಡೆಗಳಲ್ಲಿ ಕ್ಷೇತ್ರಗಳ ಹೆಸರು ಬದಲಾಗಿವೆ. ತಾ.ಪಂ.ನಲ್ಲಿ ಕ್ಷೇತ್ರಗಳ ಹೆಸರು ಬದಲಾಗಿದೆಯಾದರೂ ಜಿ.ಪಂ.ಗೆ ಹೋಲಿಸಿದರೆ ಕಡಿಮೆ.

ಕುಂದಾಪುರ ತಾ| ಅತೀ ಹೆಚ್ಚು, ಹೆಬ್ರಿ ತಾ| ಅತೀ ಕಡಿಮೆ ಕ್ಷೇತ್ರಗಳು

ಅತೀ ಹೆಚ್ಚು ಕ್ಷೇತ್ರಗಳನ್ನು ಕುಂದಾಪುರ, ಅತೀ ಕಡಿಮೆ ಕ್ಷೇತ್ರಗಳನ್ನು ಹೆಬ್ರಿ ತಾಲೂಕು ಹೊಂದಿದೆ. ಕುಂದಾಪುರದಲ್ಲಿ ಏಳು ಜಿ.ಪಂ. ಕ್ಷೇತ್ರಗಳಿದ್ದರೆ, ಹೆಬ್ರಿ ತಾಲೂಕಿನಲ್ಲಿ ಎರಡು ಕ್ಷೇತ್ರಗಳಿವೆ. ಜಿ.ಪಂ.ನಂತೆ ತಾ.ಪಂ.ನಲ್ಲಿಯೂ ಕುಂದಾಪುರ ತಾಲೂಕು ಅತೀ ಹೆಚ್ಚು ತಾ.ಪಂ. ಕ್ಷೇತ್ರಗಳನ್ನೂ (20), ಹೆಬ್ರಿ ತಾಲೂಕು ಅತೀ ಕಡಿಮೆ ತಾ.ಪಂ. ಕ್ಷೇತ್ರಗಳನ್ನೂ (7) ಹೊಂದಿದೆ. ಈ ಹಿಂದೆ ಜಿಲ್ಲೆಯಲ್ಲಿ ಉಡುಪಿ, ಕುಂದಾಪುರ, ಕಾರ್ಕಳ ಒಟ್ಟು ಮೂರು ತಾಲೂಕುಗಳಲ್ಲಿ 95 ಕ್ಷೇತ್ರಗಳಿದ್ದವು. ಬಳಿಕ ಏಳು ತಾಲೂಕುಗಳಿಗೆ ಇವುಗಳನ್ನು ಹಂಚಿ ಹಾಕಲಾಯಿತು.

ಟಾಪ್ ನ್ಯೂಸ್

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ

siddaramaiah

Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

Hubli; ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡ ಶಕ್ತಿ: ದಿಂಗಾಲೇಶ್ವರ ಸ್ವಾಮೀಜಿ

ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

18-

UV Fusion: ತೇರು ಬೀದಿಗೆ ಬಂದಿದೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Moksha Kushal

Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.