ರಸ್ತೆ ವಿಸ್ತರಣೆಗೆ ಅಡ್ಡಿಯಾದ ಭೂಸ್ವಾಧೀನ ಗುಮ್ಮ!
ಉಡುಪಿ-ಪರ್ಕಳ: ವೇಗ ಪಡೆಯದ ಹೆದ್ದಾರಿ ಕಾಮಗಾರಿ
Team Udayavani, Jan 22, 2020, 4:51 AM IST
ಉಡುಪಿ: ಉಡುಪಿ-ಪರ್ಕಳ ನಡುವೆ ರಸ್ತೆ ವಿಸ್ತರಣೆ ಕಾಮಗಾರಿ ನಿರೀಕ್ಷಿತ ವೇಗ ಪಡೆಯದೆ ಕುಂಟುತ್ತಿದೆ. ಭೂಸ್ವಾಧೀನ ಪ್ರಕ್ರಿಯೆಲ್ಲಾಗುತ್ತಿರುವ ವಿಳಂಬವೇ ಇದಕ್ಕೆ ಸಮಸ್ಯೆಯಾಗಿ ಪರಿಣಮಿಸಿದೆ.
ಭೂಸ್ವಾಧೀನ ಬಾಕಿ
ಉಡುಪಿ-ಪರ್ಕಳ ರಾ,ಹೆ. 169ಎ ಚತುಷ್ಪಥ ರಸ್ತೆಯಲ್ಲಿ ಸಂಚಾರ ಈಗ ದುಸ್ತರ. ಎರಡನೇ ಹಂತದ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದ್ದರೂ ವೇಗದಲ್ಲಿ ಅದು ಸಾಗುತ್ತಿಲ್ಲ. ಪರ್ಕಳ ಪೇಟೆ ಮತ್ತು ಇಳಿಜಾರು ಪ್ರದೇಶಗಳಲ್ಲಿ ಭೂಸ್ವಾಧೀನ ಪ್ರಕ್ತಿಯೆಗಳು ಇನ್ನು ಆಗಿಲ್ಲ. ಪರ್ಕಳದಲ್ಲಿ ಬಹುತೇಕ ಕಡೆ ಖಾಸಗಿ ಜಾಗದ ಮೂಲಕ ರಸ್ತೆ ಹಾದು ಹೋಗುವುದರಿಂದ ಈ ಪ್ರದೇಶದಲ್ಲಿ ಮನೆ, ಮತ್ತು ಕೃಷಿ ಭೂಮಿಯಿರುವುದು ಸಮಸ್ಯೆಯಾಗಿದೆ.
ಮುಂದಿನ ಮಳೆಗಾಲಕ್ಕೂ ಅನುಮಾನ?
ರಸ್ತೆ ವಿಸ್ತರಣೆಗೆ ಅವಕಾಶವಿರುವ ಕಡೆಗಳಲ್ಲಿ ಮಾತ್ರ ಕಾಮಗಾರಿ ನಡೆಯುತ್ತಿದೆ. ಪರ್ಕಳ ನೀರಿನ ತೊಟ್ಟಿ ಇರುವಲ್ಲಿ ತನಕ ದ್ವಿಪಥ ರಸ್ತೆ ಕೆಲಸ ಆಗಿದೆ. ಪರ್ಕಳ ಪೇಟೆ ದಾಟಿ ದೇವಿನಗರದವರೆಗೆ ಈಗ ಕಾಮಗಾರಿ ನಡೆಯುತ್ತಿದೆ. ಹಳೆ ರಸ್ತೆಗೆ ಮಣ್ಣು ತುಂಬಿ ಎತ್ತರಿಸಲು ಬಾಕಿ ಇದೆ. ನಿರೀಕ್ಷಿತ ಅವಧಿಯೊಳಗೆ ಕಾಮಗಾರಿ ಪೂರ್ಣವಾಗುವ ಸಾಧ್ಯತೆ ತೀರಾ ಕಡಿಮೆ. ಈಗಿನ ವೇಗ ಗಮನಿಸಿದರೆ ಮುಂದಿನ ಮಳೆಗಾಲಕ್ಕೂ ರಸ್ತೆ ಬಳಕೆಗೆ ಸಿಗುವುದು ಅನುಮಾನ. ಹೊಸದೂ ಇಲ್ಲ, ಹಳೇದೂ ಇಲ್ಲ ಚತುಷ್ಪಥ ಹೊಸ ರಸ್ತೆ
ಪೂರ್ಣವಾಗಿಲ್ಲ. ಇತ್ತ ಹಳೆ ರಸ್ತೆ ಸಂಪೂರ್ಣ ಕೆಟ್ಟು ಸಂಚಾರ ಯೋಗ್ಯವಾಗಿಲ್ಲ.
ತಾತ್ಕಾಲಿಕ ದುರಸ್ತಿಯನ್ನೂ ನಡೆಸಿಲ್ಲ. ಸವಾರರು ಸಂಚಾರದ ವೇಳೆ ಇಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆಯುದ್ದಕ್ಕೂ ಅಲ್ಲಲ್ಲಿ ಬೃಹತ್ ಗಾತ್ರದ ಹೊಂಡಗಳು ನಿರ್ಮಾಣ ಗೊಂಡಿವೆ. ಇದರಲ್ಲಿ ವಾಹನಗಳು ಎದ್ದು ಬಿದ್ದು ಸಾಗುತ್ತಿದ್ದು ಅಪಘಾತಗಳು ಸಂಭವಿಸಲು ಕಾರಣವಾಗುತ್ತಿದೆ. ಹಿಂದಿನ ವರ್ಷ ಇದೇ ರಸ್ತೆಯ ಆಸುಪಾಸಿನ ಸ್ಥಳಗಳಲ್ಲಿ ಸರಣಿ ಅಪಘಾತಗಳು ನಡೆದಿದ್ದವು. ಪ್ರಾಣ ಹಾನಿಯೂ ಸಂಭವಿಸಿತ್ತು. ಹಾಲುಗಲ್ಲದ ಹಸುಳೆಯೊಂದು ಅಪಘಾತದಲ್ಲಿ ಅಸುನೀಗಿತ್ತು.
ವಾಹನ ಚಾಲನೆ ಸವಾಲು
ಕಾಮಗಾರಿಗೆ ರಸ್ತೆಯ ಅಲ್ಲಲ್ಲಿ ಅಗೆಯಲಾಗಿದೆ. ಇದರಿಂದ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಒಂದೇ ಲೇನ್ನಲ್ಲಿ ವಾಹನಗಳು ಹೋಗಬೇಕಾಗಿದ್ದು ಇಕ್ಕಟ್ಟಾಗಿರುವುದರಿಂದ ಸಂಚಾರ ಕಷ್ಟವಾಗಿದೆ. ಉಡುಪಿಯಿಂದ
ಪರ್ಕಳ- ಮಣಿಪಾಲಕ್ಕೆ ಹೋಗಿ ಬರುವುದು ಈಗ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ರಸ್ತೆ ಕಾಮಗಾರಿ ಸ್ಥಳದಲ್ಲಿ ಅತ್ಯಾಧುನಿಕ ಯಂತ್ರಗಳು, ಹೆದ್ದಾರಿ ಬದಿ ಬೀಡು ಬಿಟ್ಟಿವೆ. ರಸ್ತೆ ನಿರ್ಮಾಣದ ಜಲ್ಲಿ ,
ಸಿಮೆಂಟ್ ಇತ್ಯಾದಿ ಸಾಮಗ್ರಿಗಳನ್ನು ರಸ್ತೆ ಬದಿ ರಾಶಿಹಾಕಿ ಸಂಗ್ರಹಿಸಿಡಲಾಗಿದೆ. ಆದರೆ ಭೂಸ್ವಾಧೀನ ಗುಮ್ಮದಿಂದ ಕಾಮಗಾರಿ ಶುರುವಾಗುವ ಲಕ್ಷಣವೇ ಕಾಣುತ್ತಿಲ್ಲ .
ಅಲರ್ಜಿ ಭೀತಿ
ಪರಿಸರ ಧೂಳಿನ ವಾತಾವರಣದಿಂದ ಆವೃತಗೊಂಡಿದೆ. ದ್ವಿಚಕ್ರ ವಾಹನ ಸವಾರರು, ಬಸ್ಸಿನ ಪ್ರಯಾಣಿಕರಿಗೆ ಹೆಚ್ಚು ಸಮಸ್ಯೆಯಾಗುತ್ತದೆ. ಸವಾರರು ಧೂಳು ಹೋಗದ ಹಾಗೆ ಬಟ್ಟೆ, ಸ್ಕಾರ್ಪ್ ಧರಿಸಿ ತೆರಳುತ್ತಿದ್ದಾರೆ. ಅತಿಯಾದ ಧೂಳು ಸೇವನೆ ಪರಿಣಾಮ ಉಷ್ಣ ಶೀತ, ಇತರೆ ಅಲರ್ಜಿ, ಚರ್ಮ ರೋಗ ತಗಲುವ ಭೀತಿ ಕಾಡಿದೆ.
ಸಮಸ್ಯೆ ಇರುವುದು ನಿಜ
ರಸ್ತೆ ವಿಸ್ತರಣೆಗೆ ಸಂಬಂಧಿಸಿ ಭೂಸ್ವಾಧೀನ ಬಾಕಿ ಇರುವುದು ನಿಜ. ಕೆಲ ಕಾನೂನು ತೊಡಕುಗಳಿಂದ ಸಮಸ್ಯೆಯಾಗಿದೆ. ನಿವಾರಿಸುವ ಪ್ರಯತ್ನ ನಡೆಯುತ್ತಿದೆ. ಶೀಘ್ರ ಕಾಮಗಾರಿಗೆ ವೇಗ ನೀಡಲಾಗುವುದು.
-ಮಂಜುನಾಥ್ ನಾಯಕ್, ರಾ.ಹೆ ಎಂಜಿನಿಯರ್
ಪೂರ್ಣವಾಗುವುದು ಅನುಮಾನ
ತ್ವರಿತಗತಿಯಲ್ಲಿ ಕಾಮಾಗಾರಿ ನಡೆಯುತ್ತಿಲ್ಲ. ನಿಗದಿತ ಅವಧಿಯೊಳಗೆ ಪೂರ್ಣವಾಗುವ ಸಾಧ್ಯತೆ ಕಡಿಮೆ. ಕೆಲವೆಡೆ ಭೂಸ್ವಾಧೀನ ಪ್ರಕ್ರಿಯೆ ಕೂಡ ನಡೆದಿಲ್ಲ. ಇದರಿಂದ ಬಳಕೆಗೆ ಸಿಗಲು ಇನ್ನೂ ಹಲವು ಸಮಯ ಬೇಕಾಗಬಹುದು.
-ಸುರೇಶ್ ನಾಯಕ್ ಕುಯಿಲಾಡಿ, ಅಧ್ಯರು, ಸಿಟಿ ಬಸ್ ಮಾಲಕರ ಸಂಘ
ನಿತ್ಯ ಯಾತನೆ
ತ್ವ ನಿತ್ಯ ಈ ರಸ್ತೆಯಲ್ಲಿ ಸಂಚಾರ ನಡೆಸುತ್ತಿರುತ್ತೇನೆ. ಧೂಳಿನಿಂದ ಆರೋಗ್ಯ ಸಮಸ್ಯೆ ಎದುರಿಸಿದ್ದೇನೆ. ಬೇಗ ಕಾಮಗಾರಿ ಮುಗಿದರೆ ಅನುಮೂಲ.
-ನಿರಂಜಿನಿ, ಪರ್ಕಳ, ಖಾಸಗಿ ಉದ್ಯೋಗಿ.
– ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ
MUST WATCH
ಹೊಸ ಸೇರ್ಪಡೆ
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ
Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್ರಾಜ್ ಮೌರ್ಯ
Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ