ಉಡುಪಿ: ಸಂತೆಕಟ್ಟೆ-“ಟ್ರಕ್‌ ಬೇ’ ಅವ್ಯವಸ್ಥೆ ಕೇಳೋರಿಲ್ಲ


Team Udayavani, Jun 17, 2024, 3:10 PM IST

ಉಡುಪಿ: ಸಂತೆಕಟ್ಟೆ-“ಟ್ರಕ್‌ ಬೇ’ ಅವ್ಯವಸ್ಥೆ ಕೇಳೋರಿಲ್ಲ

ಉಡುಪಿ: ಸಂತೆಕಟ್ಟೆ ರಾ. ಹೆದ್ದಾರಿಯ ವೆಹಿಕ್ಯೂಲರ್‌ ಓವರ್‌ಪಾಸ್‌ ಕಾಮಗಾರಿ ಪ್ರಗತಿಯಲ್ಲಿದ್ದು, ಇಲ್ಲಿನ ಸಮೀಪವೇ
ಇರುವ “ಟ್ರಕ್‌ ಬೇ’ ಅವ್ಯವಸ್ಥೆಯ ಆಗರವಾಗಿದೆ. ಎನ್‌ಎಚ್‌66 ಕಾಮಗಾರಿ ಮತ್ತು ನಿರ್ವಹಣೆ ಸಂಬಂಧಿಸಿ ಪ್ರಾಧಿಕಾರವು ಕುಂದಾಪುರದರಿಂದ ಹೆಜಮಾಡಿವರೆಗೂ ಹಲವು ವರ್ಷದಿಂದ ನಿರ್ಲಕ್ಷ್ಯ ಮತ್ತು ವಿಳಂಬ ಧೋರಣೆ ತೋರುತ್ತಿದೆ ಎಂಬುದು ಸ್ಥಳೀಯರ ಅಭಿಪ್ರಾಯ.

ಈ ಹೆದ್ದಾರಿಯಲ್ಲಿ ನಿತ್ಯವು ಲಕ್ಷಾಂತರ ಘನ ಮತ್ತು ಲಘು ವಾಹನ ಓಡಾಡುತ್ತಿರುತ್ತವೆ. ಆದರೂ ಹೆದ್ದಾರಿ ಪ್ರಾಧಿಕಾರ ಯಾವ
ಸಮಸ್ಯೆಗಳಿಗೂ ಸರಿಯಾಗಿ ಸ್ಪಂದಿಸುವುದಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಉಡುಪಿ ಕಡೆಯಿಂದ ಬ್ರಹ್ಮಾವರ ಕಡೆಗೆ ಹೋಗುವಾಗ ಸಂತೆಕಟ್ಟೆ ವೆಹಿಕ್ಯೂಲರ್‌ ಓವರ್‌ಪಾಸ್‌ ಕಾಮಗಾರಿ ಸ್ವಲ್ಪ ಮುಂದಕ್ಕೆ ಟ್ರಕ್‌ ಬೇ ಸಿಗುತ್ತದೆ. ಈ ಟ್ರಕ್‌ ಬೇ ಪರಿಸರದಲ್ಲಿ ವಿದ್ಯುತ್‌ ವ್ಯವಸ್ಥೆ ಇಲ್ಲದೆ ಹಲವಾರು ತಿಂಗಳು ಕಳೆದಿದೆ. ಇಲ್ಲಿ ಸ್ಥಳೀಯರು ಓಡಾಡಲು ಭಯಪಡುವಂತ ಪರಿಸ್ಥಿತಿ ಇದೆ. ಇಲ್ಲಿ ನಿಲ್ಲಿಸುವ ಲಾರಿ, ಟೆಂಪೊ, ಟ್ರಕ್‌ಗಳು ಕತ್ತಲಿನಲ್ಲೇ ತಮ್ಮ ವಿಶ್ರಾಂತಿ ಕಳೆಯುವ ಪರಿಸ್ಥಿತಿ ಇದೆ.

ಶೌಚಾಲಯ ನಿರ್ವಹಣೆ ಇಲ್ಲ 
ಟ್ರಕ್‌ ಬೇ ಒದಗಿಸುವ ಮೂಲ ಸೌಕರ್ಯಗಳ ಕನಿಷ್ಠ ನಿರ್ವಹಣೆಗೂ ಹೆದ್ದಾರಿ ಪ್ರಾಧಿಕಾರ ಆಸಕ್ತಿ ತೋರಿಲ್ಲ. ಶೌಚಾಲಯ ವ್ಯವಸ್ಥಿತವಾಗಿ ರೂಪಿಸಿದ್ದರೂ, ಶೌಚಾಲಯದ ಬಾಗಿಲು ಮುರಿದು ಬೀಳುವ ಸ್ಥಿತಿಯಲ್ಲಿದೆ. ಇದರ ದುರ್ವಾಸನೆಯಿಂದಾಗಿ ಪರಿಸರದ ಸುತ್ತಮುತ್ತ ಓಡಾಡುವರೂ ಸಹ ಮೂಗು ಮುಚ್ಚಿಕೊಂಡು ಹೋಗುವಂತ ದುಸ್ಥಿತಿ ಇಲ್ಲಿದೆ ಎನ್ನುತ್ತಾರೆ ಸ್ಥಳೀಯರು.

ಹೆಚ್ಚುತ್ತಿದೆ ಅಕ್ರಮಗಳ ಕಾರುಬಾರು
ಕಳೆದ ಹಲವಾರು ತಿಂಗಳಿನಿಂದ ಇಲ್ಲಿ ವಿದ್ಯುತ್‌ ಬೇಳಕಿನ ವ್ಯವಸ್ಥೆ ಇಲ್ಲದ ಪರಿಣಾಮ ಅಕ್ರಮ ಚಟುವಟಿಕೆಗಳ ತಾಣವಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಪರಿಚಿತರು ಇಲ್ಲಿ ಮದ್ಯ ಸೇವಿಸುವುದು, ಗಲಾಟೆ ಮಾಡುವುದು, ಇನ್ನಿತರೆ ಅಕ್ರಮ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಸ್ಥಳೀಯರು ಆರೋಪಿಸಿದ್ದಾರೆ. ಪೊಲೀಸ್‌ ಇಲಾಖೆಯೂ ಈ ಬಗ್ಗೆ ಗಮನ ವಹಿಸುವಂತೆ ಆಗ್ರಹಿಸಿದ್ದಾರೆ.

ಬೀದಿದೀಪ ವ್ಯವಸ್ಥೆ ಸರಿಪಡಿಸಿ
ಸಂತೆಕಟ್ಟೆ ಟ್ರಕ್‌ ಬೇ ಪರಿಸರ ಸಮರ್ಪಕ ನಿರ್ವಹಣೆ ಇಲ್ಲದೆ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ.ಹಲವು ತಿಂಗಳಿನಿಂದ ಇಲ್ಲಿನ ಬೀದಿದೀಪ ವ್ಯವಸ್ಥೆ ಸ್ಥಗಿತಗೊಂಡಿದೆ. ಶೌಚಾಲಯ ಬಾಗಿಲು ಒಡೆದು ಹೋಗಿದ್ದು, ಅಕ್ರಮ ಚಟುವಟಿಕೆಗಳ ತಾಣವಾಗುತ್ತಿದೆ. ಕೂಡಲೆ ಹೆದ್ದಾರಿ ಪ್ರಾಧಿಕಾರ ಮೂಲ ಸೌಕರ್ಯ ವ್ಯವಸ್ಥೆ ಸರಿಪಡಿಸಬೇಕು. ಪೊಲೀಸ್‌
ಇಲಾಖೆಯೂ ಈ ಪರಿಸರದಲ್ಲಿ ನಿಗಾವಹಿಸಬೇಕು.
*ಜಯಾನಂದ್‌, ನಗರಸಭಾ ಮಾಜಿ ಸದಸ್ಯ

Ad

ಟಾಪ್ ನ್ಯೂಸ್

ಗೃಹ ಸಚಿವ ಪರಮೇಶ್ವರ್ ಮತ್ತು ಕುಟುಂಬ ಬೆಳ್ಮಣ್ಣು ದುರ್ಗಾ ಪರಮೇಶ್ವರಿ ದೇಗುಲಕ್ಕೆ ಭೇಟಿ

ಗೃಹ ಸಚಿವ ಪರಮೇಶ್ವರ್ ಮತ್ತು ಕುಟುಂಬ ಬೆಳ್ಮಣ್ಣು ದುರ್ಗಾ ಪರಮೇಶ್ವರಿ ದೇಗುಲಕ್ಕೆ ಭೇಟಿ

ಮೈದುಂಬಿದೆ ಬೆಳ್ಕಲ್‌ ತೀರ್ಥ: ಜಲಧಾರೆಯ ಸೊಬಗು; ಮೋಜು – ಮಸ್ತಿಯಲ್ಲಿ ಮೈಮರೆಯಬೇಡಿ

ಮೈದುಂಬಿದೆ ಬೆಳ್ಕಲ್‌ ತೀರ್ಥ: ಜಲಧಾರೆಯ ಸೊಬಗು; ಮೋಜು – ಮಸ್ತಿಯಲ್ಲಿ ಮೈಮರೆಯಬೇಡಿ

ಮದುವೆ ನೆಪದಲ್ಲಿ ಲೈಂಗಿ*ಕ ಕಿರುಕುಳ: ಆರ್‌ಸಿಬಿ ವೇಗಿ ಯಶ್‌ ದಯಾಳ್‌ ವಿರುದ್ಧ FIR ದಾಖಲು

ಮದುವೆ ನೆಪದಲ್ಲಿ ಲೈಂಗಿ*ಕ ಕಿರುಕುಳ: ಆರ್‌ಸಿಬಿ ವೇಗಿ ಯಶ್‌ ದಯಾಳ್‌ ವಿರುದ್ಧ FIR ದಾಖಲು

Tragedy: ಶಾಲಾ ಬಸ್ಸಿಗೆ ರೈಲು ಡಿಕ್ಕಿಯಾಗಿ ಇಬ್ಬರು ವಿದ್ಯಾರ್ಥಿಗಳು ಮೃ*ತ್ಯು, ಹಲವರಿಗೆ ಗಾಯ

Tragedy: ಶಾಲಾ ಬಸ್ಸಿಗೆ ರೈಲು ಢಿಕ್ಕಿ… ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃ*ತ್ಯು

1

ಒಂದಾ ಸಿನಿಮಾ ಮಾಡಿ, ಇಲ್ಲಾ ಟಿವಿಯಲ್ಲೇ ಹೋಗಿ ಕೂತ್ಕೊಳಿ: ನಿರ್ಮಾಪಕ ಶ್ರೀನಿವಾಸ್‌

ಈ ತರ ರಾಗಿ ಬನ್ ದೋಸೆ ಯಾವತ್ತಾದ್ರೂ ಮಾಡಿದ್ದೀರಾ! ರುಚಿಗೂ ಬೆಸ್ಟ್… ಆರೋಗ್ಯಕ್ಕೂ ಬೆಸ್ಟ್

ಈ ತರ ರಾಗಿ ಬನ್ ದೋಸೆ ಯಾವತ್ತಾದ್ರೂ ಮಾಡಿದ್ದೀರಾ! ರುಚಿಗೂ ಬೆಸ್ಟ್… ಆರೋಗ್ಯಕ್ಕೂ ಬೆಸ್ಟ್

Patna: ಉದ್ಯಮಿ ಗೋಪಾಲ್ ಖೇಮ್ಕಾ ಹ*ತ್ಯೆ ಆರೋಪಿ ಎನ್ಕೌಂಟರ್ ಗೆ ಬಲಿ

Patna: ಉದ್ಯಮಿ ಗೋಪಾಲ್ ಖೇಮ್ಕಾ ಹ*ತ್ಯೆ ಆರೋಪಿ ಎನ್ಕೌಂಟರ್ ಗೆ ಬಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗೃಹ ಸಚಿವ ಪರಮೇಶ್ವರ್ ಮತ್ತು ಕುಟುಂಬ ಬೆಳ್ಮಣ್ಣು ದುರ್ಗಾ ಪರಮೇಶ್ವರಿ ದೇಗುಲಕ್ಕೆ ಭೇಟಿ

ಗೃಹ ಸಚಿವ ಪರಮೇಶ್ವರ್ ಮತ್ತು ಕುಟುಂಬ ಬೆಳ್ಮಣ್ಣು ದುರ್ಗಾ ಪರಮೇಶ್ವರಿ ದೇಗುಲಕ್ಕೆ ಭೇಟಿ

ಮೈದುಂಬಿದೆ ಬೆಳ್ಕಲ್‌ ತೀರ್ಥ: ಜಲಧಾರೆಯ ಸೊಬಗು; ಮೋಜು – ಮಸ್ತಿಯಲ್ಲಿ ಮೈಮರೆಯಬೇಡಿ

ಮೈದುಂಬಿದೆ ಬೆಳ್ಕಲ್‌ ತೀರ್ಥ: ಜಲಧಾರೆಯ ಸೊಬಗು; ಮೋಜು – ಮಸ್ತಿಯಲ್ಲಿ ಮೈಮರೆಯಬೇಡಿ

EPF

EPFO; ಕಾರ್ಮಿಕರ ಭವಿಷ್ಯನಿಧಿ ಇಎಲ್‌ಐ ಯೋಜನೆ : 25 ಸಾವಿರ ಉದ್ಯೋಗ ನಿರೀಕ್ಷೆ

1-a-udu

Udupi: ರಾಜ್ಯದ ಪ್ರಥಮ ಒಡಿಎಫ್ ಪ್ಲಸ್‌ ಮಾದರಿ ಜಿಲ್ಲೆ: ಸ್ವಚ್ಛತೆಯಲ್ಲಿ ಮುಂಚೂಣಿ ಸ್ಥಾನ

1-a-kallatana

Udupi;ಮತ್ತೆ ಕಳ್ಳರ ಉಪಟಳ : ಕೊಡಂಕೂರಿನಲ್ಲಿ ಸರಣಿ ಕಳವು

MUST WATCH

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

udayavani youtube

ಸಾವಯವ ಅಕ್ಕಿ ಹಾಗೂ ಸಾವಯವ ಧಾನ್ಯಗಳ ಬಗ್ಗೆ ಮಾಹಿತಿ

ಹೊಸ ಸೇರ್ಪಡೆ

Arrested: ಕರೆ ಮಾಡಲು ಕೊಟ್ಟ ಮೊಬೈಲ್‌ ವಾಪಸ್‌ ಕೇಳಿದ್ದಕ್ಕೆ ಹಲ್ಲೆ: ಬಂಧನ

Arrested: ಕರೆ ಮಾಡಲು ಕೊಟ್ಟ ಮೊಬೈಲ್‌ ವಾಪಸ್‌ ಕೇಳಿದ್ದಕ್ಕೆ ಹಲ್ಲೆ: ಬಂಧನ

ರಸ್ತೆಯಲ್ಲಿ ಕಾರು ತಗುಲಿದ್ದನ್ನು ಪ್ರಶ್ನಿಸಿದ್ದಕ್ಕೆ ಮಾರಕಾಸ್ತ್ರ ತೋರಿಸಿ ಪ್ರಾಣ ಬೆದರಿಕೆ

ರಸ್ತೆಯಲ್ಲಿ ಕಾರು ತಗುಲಿದ್ದನ್ನು ಪ್ರಶ್ನಿಸಿದ್ದಕ್ಕೆ ಮಾರಕಾಸ್ತ್ರ ತೋರಿಸಿ ಪ್ರಾಣ ಬೆದರಿಕೆ

Bengaluru: ವರದಕ್ಷಿಣೆ‌: ಡಿವೈಎಸ್ಪಿ ವಿರುದ್ಧ ಕೇಸ್‌

Bengaluru: ವರದಕ್ಷಿಣೆ‌: ಡಿವೈಎಸ್ಪಿ ವಿರುದ್ಧ ಕೇಸ್‌

High Court: ಗಾರ್ಡನ್‌ ಅಲ್ಲ, ಫ್ಲೆಕ್ಸ್‌ ಸಿಟಿ: ಹೈಕೋರ್ಟ್‌ ಚಾಟಿ

High Court: ಗಾರ್ಡನ್‌ ಅಲ್ಲ, ಫ್ಲೆಕ್ಸ್‌ ಸಿಟಿ: ಹೈಕೋರ್ಟ್‌ ಚಾಟಿ

Arrested: ಜನರಿಗೆ ಧಮ್ಕಿ: ನಕಲಿ ಪೊಲೀಸ್‌ ಅಧಿಕಾರಿ ಸೆರೆ

Arrested: ಜನರಿಗೆ ಧಮ್ಕಿ: ನಕಲಿ ಪೊಲೀಸ್‌ ಅಧಿಕಾರಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.