ಮದ್ಯಪಾನ ಮಾಡಿ ಶಾಲೆಯ ಜಗುಲಿಯಲ್ಲಿ ಮಲಗಿದ ಶಿಕ್ಷಕನ ಅಮಾನತು!
Team Udayavani, Dec 28, 2022, 11:00 PM IST
ಹೆಬ್ರಿ: ಕಂಠಪೂತಿ೯ ಕುಡಿದು ಶಾಲೆಯ ಜಗುಲಿಯಲ್ಲಿ ಮಲಗಿದ್ದ ಪೆರ್ಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಲಂಗಾರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಕೃಷ್ಣಮೂರ್ತಿಯ ನಡತೆಯು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಡಿ.27ರಂದು ಬೆಳಗ್ಗೆ ವಿದ್ಯಾರ್ಥಿಗಳು ಶಾಲೆಗೆ ಆಗಮಿಸುವಾಗ ಶಿಕ್ಷಕ ಕಂಠಪೂರ್ತಿ ಕುಡಿದು ಶಾಲೆಯ ಜಗುಲಿಯಲ್ಲಿ ಮಲಗಿದ್ದರು. ಈ ಬಗ್ಗೆ ವಿದ್ಯಾರ್ಥಿಗಳ ಹೆತ್ತವರು ಸ್ಥಳೀಯ ಪಂಚಾಯತ್ ಗೆ ದೂರು ನೀಡಿದ್ದರು ಎನ್ನಲಾಗಿದೆ.ಶಿಕ್ಷಕ ಕೃಷ್ಣಮೂತಿ೯ ಅವರು ಹಿಂದಿನಿಂದಲೂ ಕುಡಿದು ಶಾಲೆಗೆ ಬರುತ್ತಿದ್ದು ಈ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಯಿಂದ ಎಚ್ಚರಿಕೆ ನೀಡಿದ್ದರೂ ಯಾವುದೇ ಪರಿಣಾಮವಾಗದೆ ಚಾಳಿಯನ್ನು ಮುಂದುವರಿಸಿದ್ದರು ಎನ್ನಲಾಗುತ್ತಿದೆ. ಮಲಗಿರುವ ವಿಡಿಯೋ ವೈರಲ್ ಆಗಿದೆ.
ಮಕ್ಕಳಿಗೆ ಬುದ್ಧಿ ಹೇಳುವ ಶಿಕ್ಷಕರೇ ಹೀಗೆ ಮಾಡಿದರೆ ಮಕ್ಕಳ ಗತಿ ಏನು ಎನ್ನುವುದು ಪೋಷಕರ ಆತಂಕವಾಗಿದೆ. ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತ್ ಹಾಗೂ ಸಾವ೯ಜನಿಕರು ಈ ಶಿಕ್ಷಕರ ಅಮಾನತಿಗೆ ಸಂಬಂಧ ಪಟ್ಟವರಿಗೆ ಮನವಿ ಸಲ್ಲಿಸಿದ್ದು ಶಿಕ್ಷಕ ಕೃಷ್ಣಮೂರ್ತಿಯವರನ್ನು ಅಮಾನತು ಮಾಡಲಾಗಿದೆ ಎನ್ನಲಾಗುತ್ತಿದ್ದು ತನಿಖೆ ಮುಂದುವರಿದಿದೆ.