ಪ್ಲಾಸ್ಟಿಕ್‌ ಟ್ಯಾಂಕ್‌ನಿಂದಲೇ ಗೊಬ್ಬರ ಅನಿಲ ಘಟಕ ಆವಿಷ್ಕರಿಸಿದ ವಾಸು ಮೊಗವೀರ

ಆಟೋ ಚಾಲಕನಿಂದ ನ್ಯಾನೋ ಗೊಬ್ಬರ ಅನಿಲ ಉತ್ಪಾದನೆ

Team Udayavani, Feb 6, 2020, 5:07 AM IST

0502TKE1-3

ಕೆದೂರು: ಕುಂದಾಪುರ ತಾಲೂಕಿನ ಗ್ರಾಮೀಣ ಭಾಗದ ಮೂಡು ಕೆದೂರಿನಲ್ಲಿ ಆಟೋ ಚಾಲಕ ವಾಸು ಮೊಗವೀರ ಅವರು ಕೇವಲ 2 ಸಾವಿರ ರೂ. ವೆಚ್ಚದಲ್ಲಿಯೇ ಪ್ಲಾಸ್ಟಿಕ್‌ ಟ್ಯಾಂಕ್‌ (ಬ್ಯಾರಲ್‌)ಬಳಸಿಕೊಂಡು ಗೊಬ್ಬರ ಅನಿಲ ಘಟಕವನ್ನು ಆವಿಷ್ಕರಿಸಿ ಮಾದರಿಯಾಗಿದ್ದಾರೆ.

ತೆರೆಮರೆಯ ಸಾಧಕ
ವಾಸು ಮೊಗವೀರ ಅವರು ಯಾವುದೇ ಪ್ರಚಾರವನ್ನು ಬಯಸದೆ ಪ್ಲಾಸ್ಟಿಕ್‌ ನೀರಿನ ಟ್ಯಾಂಕ್‌(ಬ್ಯಾರಲ್‌), ಪಿವಿಸಿ ಪೈಪ್‌, ಲಾರಿಯ ಟಯರ್‌ನ ಎರಡು ಟ್ಯೂಬ್‌ಗಳು , ಹಾಗೂ ತೆಳ್ಳಗಿನ ಸುಮಾರು 15 ಮೀಟರ್‌ ವಾಟರ್‌ ಪೈಪ್‌ , ಪ್ಲಾಸ್ಟಿಕ್‌ ವಾಲ್‌ , ಹಾಗೂ ಇನ್ನಿತರ ವಸ್ತುಗಳನ್ನು ಬಳಸಿಕೊಂಡು ಅತೀ ಕಡಿಮೆ ವೆಚ್ಚದಲ್ಲಿ ಅತ್ಯಂತ ಸರಳವಾಗಿ ಪರಿಸರ ಸ್ನೇಹಿ ಗೊಬ್ಬರ ಅನಿಲ ಘಟಕವನ್ನು ಸ್ಥಾಪಿಸುವ ಮೂಲಕ ನಿತ್ಯ ಅಡುಗೆಗಾಗಿ ಅನಿಲವನ್ನು ಸದ್ಭಳಕೆ ಮಾಡಿಕೊಳ್ಳುತ್ತಿದ್ದಾರೆ.

ಅನಿಲ ಬಳಕೆ ಹೇಗೆ ?
ವಾಸು ಅವರು ವಾಸವಾಗಿರುವ ಮನೆಯ ಸಮೀಪದಲ್ಲಿಯೇ ಸುಮಾರು ಮೂರು ದನ ಹಾಗೂ ಕರುಗಳನ್ನು ಸಾಕಿ ಸಲಹುತ್ತಿದ್ದಾರೆ. ಹೈನುಗಾರಿಕೆಯಿಂದಾಗಿ ಉಂಟಾಗಬಹುದಾದ ಉಪ ಉತ್ಪಾದನ ಹಸುವಿನ ಸಗಣಿ ಹಾಗೂ ಒಂದು ಬಕೆಟ್‌ ದನದ ಗಂಜಲು (ಗೋ ಮೂತ್ರ)ವನ್ನು ಶೇಖರಿಸಿ ಆವಿಷ್ಕರಿಸಿದ ಟ್ಯಾಂಕ್‌ಗೆ ಮಿಶ್ರಣ ಮಾಡಿ ಹಾಕಲಾಗುವುದು. ಒಂದು ಗಂಟೆಯಲ್ಲಿಯೇ ರಾಸಾಯನಿಕ ಪ್ರಕ್ರಿಯೆ ಪೂರ್ಣಗೊಂಡು ಟ್ಯಾಂಕ್‌ನ ಮೇಲ್ಭಾಗದಲ್ಲಿ ಅಳವಡಿಸಿ ವಾಟರ್‌ ಪೈಪ್‌ಗ್ಳ ಮೂಲಕ ಲಾರಿಯ ಟಯರ್‌ನ ಎರಡು ಟ್ಯೂಬ್‌ನಲ್ಲಿ ಶೇಖರಣೆಯಾಗುವುದು ಮಿತವ್ಯಯದಿಂದ ನಿತ್ಯ ಅಡುಗೆಗೆ ಅನಿಲಗಳು ಉತ್ಪಾದನೆಯಾಗುವುದು. ದಿನಕ್ಕೆ ಎರಡು ಬಾರಿ ಅನಿಲ ಉತ್ಪಾದನೆಯ ಶಕ್ತಿ ಸಾಮರ್ಥ್ಯವನ್ನು ಹೊಂದಿದ್ದು ಹೆಚ್ಚು ಪ್ರಮಾಣದಲ್ಲಿ ಅನಿಲ ಶೇಖರಣೆಯಾಗಬೇಕಾದರೆ ಟ್ಯೂಬ್‌ಗಳನ್ನು ಹೆಚ್ಚಾಗಿ ಅಳವಡಿಸಿಕೊಳ್ಳಬೇಕು.

ವಾಸು ಮೊಗವೀರ ಸದಾ ಕ್ರಿಯಾಶೀಲ ಚಿಂತನೆ ಜತೆಗೆ ಹೈನುಗಾರಿಕೆ ಹಾಗೂ ಕೃಷಿಯಲ್ಲಿ ತೊಡಗಿರುವ ಇವರು ಕಡಿಮೆ ಖರ್ಚಿನಲ್ಲಿಯೇ ನ್ಯಾನೋ ಗೊಬ್ಬರ ಅನಿಲ ಘಟಕವನ್ನು ಸ್ಥಾಪಿಸಬೇಕು ಎನ್ನುವ ಬಹುದಿನದ ಕನಸು ಸಾಕಾರಗೊಂಡಿದೆ.

ಬಹುದಿನದ ಕನಸು ಸಾಕಾರ
ಈ ಮೊದಲು ಬೆಂಗಳೂರು ಮಹಾ ನಗರದಲ್ಲಿ ಹೋಟೆಲ್‌ನಲ್ಲಿ 9 ವರ್ಷ ಉದ್ಯೋಗದಲ್ಲಿದೆ ಆದರೆ ನಗರ ಜೀವನ ಶೈಲಿಗೆ ಒಗ್ಗಿಕೊಳ್ಳಲು ನನ್ನಲ್ಲಿ ಕಷ್ಟಸಾಧ್ಯವಾದ್ದರಿಂದ ನನ್ನೂರಿನಲ್ಲಿ ಗ್ರಾಮೀಣ ಭಾಗದಲ್ಲಿಯೇ ಏನಾದರೂ ಸಾಧನೆ ಮಾಡಬೇಕು ಎನ್ನುವ ಕೃಷಿ ಹಾಗೂ ಹೈನುಗಾರಿಕೆಯಲ್ಲಿಯೇ ಬದುಕು ಕಟ್ಟಿಕೊಳ್ಳಬೇಕು ಎಂದು ಕಳೆದ ನಾಲ್ಕು ವರ್ಷಗಳಿಂದಲೂ ಕೃಷಿ ಚಟುವಟಿಕೆಯ ಹೈನುಗಾರಿಕೆಯಲ್ಲಿ ತನ್ನನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಪತ್ನಿ ರಾಜೇಶ್ವರೀ ಸಾಥ್‌ ನೀಡುತ್ತಿದ್ದಾರೆ . ಎಲ್‌ಪಿಜಿ ಗ್ಯಾಸ್‌ ಬಳಕೆ ಕಷ್ಟಸಾಧ್ಯವಾದ್ದರಿಂದ ಏನಾದರೂ ಮಾಡಿ ಮಿತವ್ಯಯದಲ್ಲಿ ಪರಿಸರ ಸ್ನೇಹಿ ಮಾದರಿ ಅನಿಲ ಉತ್ಪಾದನೆ ಮಾಡಬೇಕು ಎನ್ನುವ ಬಹುದಿನದ ಕನಸು ಸಾಕಾರಗೊಂಡಿದೆ. -ವಾಸು ಮೊಗವೀರ ಜಡ್ಡಿನಮನೆ, ಸಾಧಕ

-ಲೋಕೇಶ್‌ ಆಚಾರ್ಯ ತೆಕ್ಕಟ್ಟೆ

ಟಾಪ್ ನ್ಯೂಸ್

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

Udupi: ನೇಣು ಬಿಗಿದು ಆತ್ಮಹತ್ಯೆ

Udupi: ನೇಣು ಬಿಗಿದು ಆತ್ಮಹತ್ಯೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.