ಹೆತ್ತವರ ಬಳಿ ಮುನಿಸಿಕೊಂಡು ಗದಗದಿಂದ ಉಡುಪಿಗೆ ಬಂದ ಬಾಲಕನನ್ನ ರಕ್ಷಿಸಿದ ಸಮಾಜ ಸೇವಕ
Team Udayavani, Jan 8, 2023, 7:05 AM IST
ಉಡುಪಿ: ಹೆತ್ತವರ ಬಳಿ ಮುನಿಸಿಕೊಂಡು ಗದಗದಿಂದ ಉಡುಪಿಗೆ ಬಂದಿದ್ದ ಅಪ್ರಾಪ್ತ ಬಾಲಕನನ್ನು ಸಮಾಜ ಸೇವಕ ವಿಶು ಶೆಟ್ಟಿ ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದಾರೆ.
ಬಾಲಕ 8ನೇ ತರಗತಿ ವಿದ್ಯಾರ್ಥಿಯಾಗಿದ್ದು, ಶನಿವಾರ ಮುಂಜಾನೆ 3 ಗಂಟೆಗೆ ನಗರದಲ್ಲಿ ಅನುಮಾನಸ್ಪದವಾಗಿ ಓಡಾಡುತ್ತಿದ್ದಾಗ ಪತ್ತೆಯಾಗಿದ್ದು, ಕೆಲಸಕ್ಕಾಗಿ ಉಡುಪಿಗೆ ಬಂದಿರುವುದಾಗಿ ಬಾಲಕ ತಿಳಿಸಿದ್ದಾನೆ. ಅನಂತರ ಹೆತ್ತವರ ಬಳಿ ಮುನಿಸಿಕೊಂಡು ಮನೆ ಬಿಟ್ಟು ಉಡುಪಿಗೆ ಬಂದಿರುವ ವಿಷಯ ಹೇಳಿದ್ದಾನೆ.
ಇದನ್ನೂ ಓದಿ: ಅಂಕೋಲಾ : ಪಾದಚಾರಿ ಯುವತಿಗೆ ಕಾರು ಬಡಿದು ಯುವತಿ ಸ್ಥಳದಲ್ಲೆ ಸಾವು