ಕೇಳುವವರೇ ಇಲ್ಲದ ಕಲ್ಲಂಗಡಿ ಹಣ್ಣಿಗೆ ಮುಂಗಡ ಬುಕ್ಕಿಂಗ್
ಉದಯವಾಣಿ ರೈತ ಸೇತು
Team Udayavani, Apr 13, 2020, 1:42 PM IST
ಕೋಟ/ಬೈಂದೂರು: ವಾರದ ಹಿಂದೆ ಲಾಕ್ಡೌನ್ ಸಮಸ್ಯೆಯಿಂದಾಗಿ ಕೇಳುವವರಿಲ್ಲದೆ ಗದ್ದೆಯಲ್ಲಿ ಹಾಳಾಗುವ ಪರಿಸ್ಥಿತಿಯಲ್ಲಿದ್ದ ಟನ್ಗಟ್ಟಲೆ ಕಲ್ಲಂಗಡಿ ಹಣ್ಣಿಗೆ ಇದೀಗ ಮುಂಗಡ ಬುಕ್ಕಿಂಗ್ ಆರಂಭವಾಗಿದೆ.
ಉದಯವಾಣಿ ರೈತಸೇತು ಅಂಕಣದ ಫಲವಾಗಿ, ಪತ್ರಿಕೆಯಲ್ಲಿ ಪ್ರಕಟವಾದ ವಿವರದಿಂದ ಹಲವು ಮಂದಿಯ ಟನ್ಗಟ್ಟಲೆ ಕಲ್ಲಂಗಡಿಗೆ ಈಗ ಬೇಡಿಕೆ ಬಂದಿದೆ. ಲಾಕ್ಡೌನ್ ಕಾರಣದಿಂದ ಬೆಳೆಗಾರರು ತಮ್ಮ ಬೆಳೆ ಕುರಿತು ಯಾರೊಂದಿಗೂ ಹೇಳಿಕೊಳ್ಳಲು ಅವಕಾಶವಿರಲಿಲ್ಲ. ಈಗ ರೈತ ಸೇತು ಬೆಳೆಗಾರರ ಮಾಹಿತಿಯನ್ನು ಕೊಳ್ಳುವ ಗ್ರಾಹಕರಿಗೆ ರವಾನಿಸುತ್ತಿದೆ.
ಸಾಸ್ತಾನ ಪಾಂಡೇಶ್ವರದ ಸದಾಶಿವ ಪೂಜಾರಿಯವರು ಪ್ರಥಮ ಹಂತದಲ್ಲಿ ಬೆಳೆದ ಕಲ್ಲಂಗಡಿಯನ್ನು ಸಾಮಾಜಿಕ ಜಾಲತಾಣದ ಸಹಾಯದಿಂದ ಮಾರಿದ್ದು, ಅನಂತರ ಎ. 8ರಂದು ತಮ್ಮ ಎರಡನೇ ಹಂತದಲ್ಲಿ ಬೆಳೆದ ಹಣ್ಣಿಗೆ ರೈತಸೇತುವಿನಲ್ಲಿ ಮಾಹಿತಿ ಪ್ರಕಟಿಸಿದ್ದರು. ಇದನ್ನು ಕಂಡ 20ಕ್ಕೂ ಹೆಚ್ಚು ಮಂದಿ ಕರೆ ಮಾಡಿ ಕಲ್ಲಂಗಡಿಗೆ ಬೇಡಿಕೆ ಸಲ್ಲಿಸಿದ್ದಾರೆ.
ಇದೇ ಅನುಭವ ಕೋಡಿತಲೆಯ ಕೊರಗ ಪೂಜಾರಿಯವರದ್ದು. ಕಲ್ಲಂಗಡಿ ಕಟಾವಿಗೆ ಬಂದಿರುವ ಹಿನ್ನೆಲೆಯಲ್ಲಿ ಎ.10ರಂದು ಪತ್ರಿಕೆಯಲ್ಲಿ ವಿವರ ಪ್ರಕಟಿಸಿದ್ದರು. ಅವರಿಗೂ ಸುಮಾರು 15ಕ್ಕೂ ಹೆಚ್ಚು ಮಂದಿ ಕರೆ ಮಾಡಿ ವಿಚಾರಿಸಿದ್ದು, ಮುಂಗಡ ಬುಕ್ಕಿಂಗ್ ಮಾಡಿಕೊಳ್ಳುತ್ತಿದ್ದಾರೆ.
ರೈತಸೇತು ಅಂಕಣದಿಂದ ಅನುಕೂಲವಾಗಿದೆ
ಪತ್ರಿಕೆಯಲ್ಲಿ ಪ್ರಕಟವಾದ ವಿವರವನ್ನು ನೋಡಿ ಸಾಕಷ್ಟು ಮಂದಿ ಕಲ್ಲಂಗಡಿಗೆ ಬೇಡಿಕೆ ಸಲ್ಲಿಸಿದ್ದಾರೆ. ಹೀಗಾಗಿ ದ್ವಿತೀಯ ಹಂತದ ಕಟಾವಿಗೆ ಮುಂಗಡ ಪಡೆದು ನೀಡುತ್ತಿದ್ದೇನೆ. ರೈತಸೇತು ಅಂಕಣದಿಂದ ಅನುಕೂಲವಾಗಿದೆ.
– ಸದಾಶಿವ ಪೂಜಾರಿ, ಬೆಳೆಗಾರರು
ಹೊಸ ಖರೀದಿದಾರರ ಪರಿಚಯದಿಂದ ಅನುಕೂಲ
ಇಷ್ಟು ವರ್ಷ ಸ್ಥಳೀಯ ಕೆಲವರಲ್ಲೇ ಹಣ್ಣನ್ನು ಮಾರಬೇಕಿತ್ತು. ರೈತಸೇತು ಅಂಕಣದಿಂದ ಹೆಚ್ಚು ಮಂದಿ ಖರೀದಿದಾರರ ಪರಿಚಯವಾಗಿದ್ದು, ನಮಗೂ ಅನುಕೂಲವಾಗಲಿದೆ. ಮುಂಗಡ ಬುಕ್ಕಿಂಗ್ ಮಾಡಿಕೊಳ್ಳಲು ಸಹಾಯವಾಗಿದೆ.
– ಕೊರಗ ಪೂಜಾರಿ, ಬೆಳೆಗಾರರು
***
ದೊಂಬೆ ಕೃಷಿಕರ ಕಲ್ಲಂಗಡಿಗೆ ಬಂತು ಬೇಡಿಕೆ
ಬೈಂದೂರು: ಶಿರೂರು ಸಮೀಪದ ದೊಂಬೆಯ ಜನಾರ್ದನ ಬಿಲ್ಲವ ಹಾಗೂ ಪರಮೇಶ್ವರ ಪೂಜಾರಿ ಅವರ ಕಲ್ಲಂಗಡಿಗೂ ಅಧಿಕ ಬೇಡಿಕೆ ಬಂದಿದೆ.
ಸುಮಾರು ಮೂರು ಎಕರೆಗೂ ಹೆಚ್ಚು ಪ್ರದೇಶದಲ್ಲಿ ಕಲ್ಲಂಗಡಿ ಬೆಳೆದಿದ್ದರು. ಮಾರ್ಚ್ ಕೊನೆಯ ವಾರದಲ್ಲಿ ಕಟಾವಿಗೆ ಸಿದ್ಧವಾಗಿತ್ತು. ಆದರೆ ಅದೇ ಸಂದರ್ಭದಲ್ಲಿ ಲಾಕ್ಡೌನ್ ಘೋಷಣೆಯಾದ ಕಾರಣ ಇಡೀ ಮಾರುಕಟ್ಟೆಯೇ ಕುಸಿಯಿತು.
ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ಕಂಗಾಗಲಾಗಿದ್ದರು. ಈ ಹೊತ್ತಿನಲ್ಲೇ ಉದಯವಾಣಿಯ ರೈತ ಸೇತುವಿನ ಮೂಲಕ ಬೆಳೆಯ ವಿವರ ನೀಡಿದ ಬಳಿಕ ಅನೇಕ ಕರೆಗಳು ಬಂದವು. ಮಾತ್ರವಲ್ಲದೆ 20 ರಿಂದ 25 ಟನ್ ಕಲ್ಲಂಗಡಿ ಹಣ್ಣು ಉತ್ತಮ ಧಾರಣೆಗೆ ಮಾರಾಟವಾಗಿದೆ.
ನಿರೀಕ್ಷಿಸಿರಲಿಲ್ಲ
ಈ ಬಾರಿ ಕಲ್ಲಂಗಡಿಗೆ ಉತ್ತಮ ಮಾರುಕಟ್ಟೆ ಹಾಗೂ ದರ ದೊರೆಯುವ ಸಾಧ್ಯತೆಯಿತ್ತು.ಕೋವಿಡ್ ಹಿನ್ನೆಲೆಯಲ್ಲಿ ಕಟಾವಿಗೆ ಬಂದ ಹಣ್ಣುಗಳನ್ನು ಮಾರುಕಟ್ಟೆಯಿಲ್ಲದೇ ಏನು ಮಾಡುವುದು ಎಂಬ ಆತಂಕದಲ್ಲಿದ್ದೆವು. ದಿಕ್ಕು ತೋಚದಂತಾಗಿತ್ತು.
ಈ ಸಂದರ್ಭದಲ್ಲಿ ಉದಯವಾಣಿಯ ರೈತಸೇತುವಿನಲ್ಲಿ ವಿವರ ಕಳಿಸಿದ್ದೆವು, ಹೆಚ್ಚು ನಿರೀಕ್ಷಿಸಿರಲಿಲ್ಲ. ಆದರೆ ಅನೇಕ ದೂರವಾಣಿ ಕರೆಗಳು ಬಂದಲ್ಲವಲ್ಲದೇ, ಸಮಾಧಾನಕರವಾದ ದರದಲ್ಲಿ ರಖಂ ಮಾರಾಟವಾಗಿದೆ.ಇದರಿಂದಾಗಿ ಬೆಳೆದ ಹಣ್ಣುಗಳು ಗದ್ದೆಯಲ್ಲಿ ಕೊಳೆಯುವ ಸ್ಥಿತಿ ತಪ್ಪಿದೆ ಎನ್ನುತ್ತಾರೆ ಜನಾರ್ದನ ಬಿಲ್ಲವ ಬೇಲೆಮನೆ ಮತ್ತು ಪರಮೇಶ್ವರ ಪೂಜಾರಿ.
ನಿಮ್ಮ ಬೆಳೆ ಮಾಹಿತಿ ನೀಡಿ
ಲಾಕ್ಡೌನ್ ಹಿನ್ನೆಲೆಯಲ್ಲಿ ಸಾವಿರಾರು ರೈತರು ತಾವು ಬೆಳೆದ ತರಕಾರಿ, ಹಣ್ಣು ಹಾಗೂ ಆಹಾರ ಬೆಳೆಗಳನ್ನು ಮಾರಲಾಗದೆ ಸಂಕಷ್ಟದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಉದಯವಾಣಿಯು ಗ್ರಾಹಕರೊಂದಿಗೆ ಸಂಪರ್ಕ ಕಲ್ಪಿಸಲು ಮುಂದಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ರೈತರು, ತರಕಾರಿ ಬೆಳೆಗಾರರು ಈ ಅಂಕಣದ ಪ್ರಯೋಜನ ಪಡೆಯಬಹುದು. ತಮ್ಮ ಬೆಳೆ ಹಾಗೂ ಸಂಪರ್ಕ ಸಂಖ್ಯೆಯನ್ನು ನಮ್ಮ ವಾಟ್ಸÕಪ್ಗೆ ಕಳಿಸಿದರೆ ಪ್ರಕಟಿಸಲಾಗುವುದು. ನೀಡಬೇಕಾದ ಮಾಹಿತಿ: ಹೆಸರು, ಉತ್ಪನ್ನದ ಹೆಸರು, ಲಭ್ಯವಿರುವ ಬೆಳೆ ಪ್ರಮಾಣ, ಊರಿನ ಹೆಸರು, ಸಂಪರ್ಕ ಸಂಖ್ಯೆ, ಉತ್ಪನ್ನದ ಬೆಲೆ.
ವಾಟ್ಸಪ್ ಸಂಖ್ಯೆ ; 76187 74529
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ
MUST WATCH
ಹೊಸ ಸೇರ್ಪಡೆ
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!