ಜಲಜಾಗೃತಿ ಈಗಲ್ಲದಿದ್ದರೆ ಮುಂದಾದರೂ ಅನಿವಾರ್ಯ- ಶ್ರೀ ಈಶಪ್ರಿಯತೀರ್ಥ ಶ್ರೀಪಾದರು


Team Udayavani, Jan 24, 2020, 7:00 AM IST

kaa-50

ಶ್ರೀಕೃಷ್ಣ ಮಠದಲ್ಲಿ ಪೂಜಾಧಿಕಾರ ಹಸ್ತಾಂತರದ ಗಡಿಬಿಡಿ ಮುಗಿದಿದೆ. ಹೊಸ ವ್ಯವಸ್ಥೆಯೊಂದಿಗೆ ಪರ್ಯಾಯ ಪೀಠಸ್ಥ ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಶ್ರೀ ಕೃಷ್ಣನ ಸೇವೆಯಲ್ಲಿ ತೊಡಗಿದ್ದಾರೆ. ಇದರೊಂದಿಗೆ ಸ್ವಾಮೀಜಿಯವರು ಹಲವು ಸಮಾಜಮುಖಿ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲಿದ್ದು ಅದರಲ್ಲಿ ಒಂದಾಗಿರುವ ನೀರು ಇಂಗಿಸುವಿಕೆ ಯೋಜನೆ ಕುರಿತಾಗಿ “ಉದಯವಾಣಿ’ ಜತೆ ನಡೆಸಿದ ಮಾತುಕತೆ ಇಂತಿದೆ:

– ನೀರಿಂಗಿಸುವಿಕೆ ಕುರಿತ ಯೋಜನೆ ಕುರಿತು ತಿಳಿಸುತ್ತೀರಾ?
ಕೊಯಮತ್ತೂರು ಸಮೀಪದ ಸಿರತುಲಿಯಲ್ಲಿ ನೀರು ಇಂಗಿಸುವಿಕೆ ಮಾಡಿದ್ದನ್ನು ನೋಡಿ ಬಂದಿದ್ದೇವೆ. ಅಲ್ಲಿ ನೀರಿಂಗಿಸಿ ಕೆರೆಕಟ್ಟಗಳಲ್ಲಿ ನೀರಿನ ಮಟ್ಟ ಹೆಚ್ಚಿಸಿಕೊಂಡಿದ್ದಾರೆ. ನಾವೂ ಒಂದು ತಂಡವನ್ನು ರಚಿಸಿ ನೀರು ಇಂಗಿಸುವ ಕೆಲಸವನ್ನು ಶ್ರೀಕೃಷ್ಣ ಮಠದ ಪರಿಸರದಲ್ಲಿ ಮಾಡಬೇಕಾಗಿದೆ. ಇದರ ಬಗ್ಗೆ ಹಿಂದಿನ ಎಸ್‌ಪಿ ಅಣ್ಣಾಮಲೈಯವರ ಜತೆ ಮಾತುಕತೆ ನಡೆಸಿದ್ದೇನೆ. ವೈಜ್ಞಾನಿಕ ಅಧ್ಯಯನ ನಡೆಯಬೇಕಾಗಿದೆ.

– ಯಾವ ರೀತಿಯಲ್ಲಿ ನೀರಿಂಗಿಸುವಿಕೆ ಮಾಡುತ್ತೀರಿ?
ಒಂದು ಮರವನ್ನೇ ಕಿತ್ತು ಇನ್ನೊಂದು ಕಡೆ ನೆಡುವಾಗ ಇದಾಗದು ಎಂದು ಹೇಳುವಂತಿಲ್ಲ. ಮೊದಲು ಜನರಿಗೆ ಇಚ್ಛಾಶಕ್ತಿ ಬೇಕು. ತಜ್ಞರ ಅಭಿಪ್ರಾಯದಂತೆ ಮುಂದಿನ ಕ್ರಮ ತೆಗೆದುಕೊಳ್ಳಬೇಕು. ನಮಗೆ ಎಲ್ಲವನ್ನೂ ಮಾಡಲು ಆಗುವುದಿಲ್ಲ, ನಮಗೆ ಒಂದು ಮಿತಿ ಇದೆ. ಉಡುಪಿಯ ಜನರು ಬುದ್ಧಿವಂತರಿದ್ದಾರೆ. ಒಳ್ಳೆಯ ಸಂಕಲ್ಪ ಶಕ್ತಿ ಯಿಂದ ಪ್ರಯತ್ನಿಸಬೇಕಾಗಿದೆ. ನಾವು ಮಾಡದೆ ಇದ್ದರೆ ಇನ್ನೊಂದು ದಿನ ಮಾಡಲೇ ಬೇಕಾಗುತ್ತದೆ. ನೀರು ಎಲ್ಲರಿಗೂ ಬೇಕಲ್ಲ?

– ನೀರಿಂಗಿಸುವಿಕೆ ರೀತಿಯಲ್ಲಿ ಬೇರೆ ಯೋಜನೆಗಳಿವೆಯೆ?
ನಾವು ಯಾವುದನ್ನೂ ಮಾಡುತ್ತೇ ವೆಂದು ಹೇಳುವುದಿಲ್ಲ. ಪ್ರಯತ್ನಿಸುತ್ತೇವೆಂದು ಮಾತ್ರ ಹೇಳುತ್ತೇವೆ. ಆಯಾ ಸಂದರ್ಭದಲ್ಲಿ ಆಗಬೇಕಾದ ಕೆಲಸಗಳನ್ನು ಮಾಡುತ್ತೇವೆ. ಒಳ್ಳೆಯ ವಿಷಯದಲ್ಲಿ ಪ್ರಯತ್ನಶೀಲರಾಗೋಣ ಎಂದಷ್ಟೇ ತಿಳಿಸುತ್ತೇವೆ.

– ಪರ್ಯಾಯ ಯಶಸ್ಸಿನ ಕುರಿತು?
ಇಡೀ ಉತ್ಸವ ಯಶಸ್ವಿಯಾಗಲು ನಗರಸಭೆ, ಜಿಲ್ಲಾಡಳಿತ, ಪೊಲೀಸ್‌ ಇಲಾಖೆ ಹೀಗೆ ಎಲ್ಲ ಸರಕಾರಿ ಆಡಳಿತಗಳು ಉತ್ತಮ ರೀತಿಯಲ್ಲಿ ಸ್ಪಂದಿಸಿವೆ. ಶ್ರೀಕೃಷ್ಣ ಸೇವಾ ಬಳಗದ ಕಾರ್ಯಕರ್ತರು ಹಗಲಿರುಳೂ ಶ್ರಮಿಸಿದ್ದಾರೆ.

ಸ್ವಾಮೀಜಿಯವರ ದಿನಚರಿ
ಪರ್ಯಾಯ ಪೀಠಸ್ಥ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿಯವರ ದಿನಚರಿ ಹೀಗಿದೆ. ಇದು ಹಿಂದೆಯೂ ಇದೇ ರೀತಿ ಇತ್ತು. ಪ್ರತಿನಿತ್ಯ ಬೆಳಗ್ಗೆ ಸುಮಾರು 3.30 ಗಂಟೆಗೆ ಏಳುತ್ತಾರೆ. ಪರ್ಯಾಯ ಉತ್ಸವ ದಿನಗಳಲ್ಲಿ ರಾತ್ರಿ ವಿಶ್ರಾಂತಿ ತೆಗೆದುಕೊಳ್ಳುವುದು ತಡವಾದ ಕಾರಣ ಬೆಳಗ್ಗೆ 4.10- 4.30ಕ್ಕೆ ಎದ್ದಿದ್ದಾರೆ. ಬೆಳಗ್ಗಿನ ಜಪಾದಿಗಳು 6 ಗಂಟೆಗೆ ಮುಗಿಯುತ್ತವೆ. 7.30ರ ವರೆಗೆ ಅಧ್ಯಯನ, ಅಷ್ಟರೊಳಗೆ ಬೆಳಗ್ಗೆ 4.30ರಿಂದ ಸುಮಾರು 8.45ರ ಅವಧಿಯಲ್ಲಿ ಅಲಂಕಾರ ಪೂಜೆಗಳು ಮುಗಿದಿರುತ್ತವೆ. ಸುಮಾರು 9.10 ಗಂಟೆಗೆ ಮಹಾಪೂಜೆ ಆರಂಭಿಸುತ್ತಾರೆ. ಮಧ್ಯಾಹ್ನ 12.15ರ ಒಳಗೆ ಮಹಾಪೂಜೆ ಮುಗಿಯುತ್ತದೆ.

2 ಗಂಟೆ ವರೆಗೆ ಭಕ್ತರಿಗೆ ಪ್ರಸಾದ ವಿತರಣೆ, ಸುಮಾರು 2.45ರಿಂದ 5 ಗಂಟೆಯ ವರೆಗೆ ಪಲಿಮಾರು ಸ್ವಾಮೀಜಿಯವರಿಂದ ಪಾಠ. 5 ಗಂಟೆಗೆ ಶ್ರೀಕೃಷ್ಣ ಮಠದ ಚಂದ್ರಶಾಲೆಯಲ್ಲಿ ನಡೆಯುವ ಪುರಾಣ ಪೂಜೆ, ಬಳಿಕ ರಾಜಾಂಗಣದಲ್ಲಿ ನಡೆಯುವ ಪ್ರವಚನದಲ್ಲಿ ಪಾಲ್ಗೊಳ್ಳುತ್ತಾರೆ. ರಾತ್ರಿ 7 ಗಂಟೆಗೆ ರಾತ್ರಿ ಪೂಜೆ, ಮುಗಿಯುವಾಗ ಸುಮಾರು 10 ಗಂಟೆ ಆಗುತ್ತದೆ.

ಈ ಸಮಯಗಳು ಏಕಾದಶಿ, ದ್ವಾದಶಿ, ಪರ್ವದಿನಗಳು, ಆಯಾ ದಿನ ಪೂಜೆಗೆ ಬರುವ ಸ್ವಾಮೀಜಿಯವರನ್ನು ಅವಲಂಬಿಸಿಕೊಂಡು ಬದಲಾವಣೆ ಆಗುತ್ತದೆ. ದ್ವಾದಶಿಯಂದು ಹರಿವಾಸರ ಇಲ್ಲದಿದ್ದರೆ ಸೂರ್ಯೋದಯದೊಳಗೆ ಮಹಾಪೂಜೆಗಳು ಮುಗಿಯಬೇಕಾಗಿರುವುದರಿಂದ ಏಕಾದಶಿ ಮಧ್ಯರಾತ್ರಿ ಬಳಿಕ 1.30ಕ್ಕೆ ಏಳಬೇಕಾಗುತ್ತದೆ. ಹರಿವಾಸರ ಇದ್ದಲ್ಲಿ 2.30ಕ್ಕೆ ಏಳಬೇಕಾಗುತ್ತದೆ.
ಶ್ರೀ ವಿಶ್ವಪ್ರಿಯತೀರ್ಥರು ಬೆಳಗ್ಗೆ 2.55ಕ್ಕೆ ಎದ್ದು 3.15ಕ್ಕೆ ಶ್ರೀಕೃಷ್ಣ ಮಠಕ್ಕೆ ಬರುತ್ತಾರೆ. 7.30ರ ವರೆಗೆ ಪೂಜೆ, ಜಪಾದಿಗಳನ್ನು ನಡೆಸುತ್ತಾರೆ. ಅದಮಾರು ಮಠಕ್ಕೆ ಹೋಗಿ ಮತ್ತೆ ಮುಕ್ಕಾಲು ಗಂಟೆ ಜಪಾದಿಗಳನ್ನು ನಡೆಸಿ ಮುಂದಿನ ಕೆಲಸದಲ್ಲಿ ತೊಡಗುತ್ತಾರೆ.

ಟಾಪ್ ನ್ಯೂಸ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು

Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು

Udupi; ಎ. 24ರ ಬಳಿಕ ಹೊರಗಿನವರು ಕ್ಷೇತ್ರದಲ್ಲಿರುವಂತಿಲ್ಲ: ಜಿಲ್ಲಾಧಿಕಾರಿ

Udupi; ಎ. 24ರ ಬಳಿಕ ಹೊರಗಿನವರು ಕ್ಷೇತ್ರದಲ್ಲಿರುವಂತಿಲ್ಲ: ಜಿಲ್ಲಾಧಿಕಾರಿ

Kota Srinivas Poojary; ಮೀನುಗಾರರ ಸಮಸ್ಯೆ, ಬೇಡಿಕೆಗಳಿಗೆ ಧ್ವನಿಯಾಗುವೆ

Kota Srinivas Poojary; ಮೀನುಗಾರರ ಸಮಸ್ಯೆ, ಬೇಡಿಕೆಗಳಿಗೆ ಧ್ವನಿಯಾಗುವೆ

Veerappa Moily; ದೇಶಕ್ಕೆ ಕ್ರಿಕೆಟ್‌ ಕಾಮೆಂಟ್ರಿಯನ್‌ ಬೇಕಿಲ್ಲ

Veerappa Moily; ದೇಶಕ್ಕೆ ಕ್ರಿಕೆಟ್‌ ಕಾಮೆಂಟ್ರಿಯನ್‌ ಬೇಕಿಲ್ಲ

Manipal; ಟ್ಯಾಪ್ಮಿ 38ನೇ ಘಟಿಕೋತ್ಸವ: 510 ಎಂಬಿಎ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

Manipal; ಟ್ಯಾಪ್ಮಿ 38ನೇ ಘಟಿಕೋತ್ಸವ: 510 ಎಂಬಿಎ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.