9 ವಿಭಾಗಕ್ಕೆ ತಲಾ 45 ಹೊಸ ಬಸ್‌


Team Udayavani, Dec 29, 2019, 3:38 PM IST

uk-tdy-1

ಶಿರಸಿ: ಒಂಬತ್ತು ವಿಭಾಗಗಳನ್ನು ಒಳಗೊಂಡವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ತಲಾ 45 ಹೊಸ ಬಸ್‌ಗಳನ್ನು ಮಾರ್ಚ್‌ ಒಳಗೆ ಒದಗಿಸಲಾಗುತ್ತದೆ ಎಂದು ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್‌. ಪಾಟೀಲ ತಿಳಿಸಿದರು. ಅವರು ನಗರದ ಹಳೆ ಬಸ್‌ ನಿಲ್ದಾಣದಲ್ಲಿ ಶನಿವಾರ ಶಿರಸಿಯಿಂದ ಹುಬ್ಬಳ್ಳಿಗೆ ಸಂಚರಿಸಲು ಎರಡು ಹೊಸ ಬಸ್ಸನ್ನು ಸೇವೆಗೆ ಒದಗಿಸಿ ಮಾತನಾಡಿದರು.

ಎಂಟು ಲಕ್ಷ ಕಿಮೀ ಓಡಿದ ಬಸ್‌ಗಳು ಸಾಕಷ್ಟಿವೆ. ಅವುಗಳೆಲ್ಲವನ್ನೂ ಏಕಕಾಲಕ್ಕೆ ಬದಲಿಸಲು ಆಗುತ್ತಿಲ್ಲ. ಆದರೂ ಹೊಸ ಬಸ್‌ ಗಳು ಹಾಗೂ ಹೊಸ ಹೊಸ ಮಾರ್ಗಗಳಲ್ಲಿ ಓಡಿಸುವುದು ನಮ್ಮ ಆಶಯವಾಗಿದೆ. ಹತ್ತು ಲಕ್ಷ ಕಿಮೀ ಓಡಿದ ಬಸ್‌ಗಳನ್ನು ಬದಲಿಸಲಾಗುತ್ತದೆ. 36 ಶಾಸಕರು ವಾಯವ್ಯ ಸಂಸ್ಥೆ ವ್ಯಾಪ್ತಿಯಲ್ಲಿದ್ದು, ಅವರೊಂದಿಗೆ ಸಹ ಬರುವ ಬಜೆಟ್‌ನಲ್ಲಿ ಸಂಸ್ಥೆಗೆ ಹೆಚ್ಚಿನ ಅನುದಾನ ಒದಗಿಸಲು ಮನವಿ ಮಾಡಿದ್ದೇವೆ. ಮುಖ್ಯಮಂತ್ರಿಗಳ ಬಳಿಯೂ ವಿನಂತಿಸಿಕೊಂಡಿದ್ದೇವೆ ಎಂದರು.

ಶಿರಸಿ ಹಳೆಯ ಬಸ್‌ ನಿಲ್ದಾಣದಲ್ಲಿ ಹೊಸ ಕಟ್ಟಡ ನಿರ್ಮಿಸಲಾಗುವುದು. ಆದರೆ, ಹಳೆ ನೀಲನಕ್ಷೆ ಈಗಿದ್ದ ಕಟ್ಟಡದಲ್ಲೇ ಇತ್ತು. ಆದರೆ, ಇದನ್ನು ಬದಲಿಸಿ ಹೆಚ್ಚಿನ ಬಸ್‌ ಸಂಚರಿಸಲು ಅನುಕೂಲ ಆಗುವಂತೆ ಎಲ್‌ ಆಕಾರದಲ್ಲಿ ಬಳಸಲಾಗುತ್ತದೆ.ಪಕ್ಕದ ಸ್ಥಳವನ್ನೂ ಪಡೆದುಕೊಳ್ಳಲು ಸರಕಾರದ ಮುಂದೆ ಪ್ರಸ್ತಾಪಿಸಲಾಗುತ್ತದೆ. ಶೀಘ್ರ ನೂತನ ಬಸ್‌ ನಿಲ್ದಾಣವನ್ನೂ ನಿರ್ಮಿಸಲಾಗುತ್ತದೆ ಎಂದ ಪಾಟೀಲ, ನೂತನ ಬಸ್‌ ನಿಲ್ದಾಣ ಕಟ್ಟಲು ಹಳೆ ಬಸ್‌ ನಿಲ್ದಾಣ ಕೆಡವಬೇಕಿತ್ತು. ಆದರೆ, ಟೆಂಡರ್‌ ಕರೆದರೂ ಬಂದಿಲ್ಲ. ಈಗ ಸಂಸ್ಥೆಯವರೇ ಅದನ್ನುಕೆಡವುತ್ತಿದ್ದಾರೆ. ಜಾತ್ರೆ ಬಳಿಕ ಈ ಕಾರ್ಯ ನಡೆಯಲಿದೆ ಎಂದರು.

24 ಗಂಟೆ ಬಸ್‌ ನಿಲ್ದಾಣದ ಕ್ಯಾಂಟೀನ್‌ ತೆರೆದಿಡುವಂತೆ ಕ್ರಮ ವಹಿಸಲಾಗುವುದು. ಮಾರಿಕಾಂಬಾ ದೇವಿ ಜಾತ್ರಾಗೆ ಲಕ್ಷಾಂತರ ಭಕ್ತರು ಬರುವ ಕಾರಣ ಅವರಿಗೆ ಅನುಕೂಲ ಆಗುವಂತೆ ಇನ್ನೊಮ್ಮೆ ಪರಿಶೀಲನೆ ಮಾಡುತ್ತೇವೆ. ಐದು ಕತ್ರಿಯ ಬಳಿ ಒತ್ತಡ ಕೂಡ ಕಡಿಮೆ ಆಗವಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದ ಪಾಟೀಲ, ಬಸ್‌ ನಿಲ್ದಾಣದಲ್ಲಿ ಸಿಸಿಕ್ಯಾಮರಾ ಅಳವಡಿಸಲು ಗುತ್ತಿಗೆ ಕರೆದರೂ ಯಾರೂ ಬಂದಿಲ್ಲ. ನಿಯಮ ಸರಳೀಕರಿಸಿ ಗುತ್ತಿಗೆ ಕರೆಯುವಂತೆ ಸೂಚಿಸಲಾಗಿದೆ. ನಗರಸಭೆ, ತಾಪಂ, ಶಾಸಕರು ಕೂಡ ಸಿಸಿಟಿವಿ ಅಳವಡಿಸುವದಿದ್ದರೆ ಅವಕಾಶ ಕೊಡುವುದಾಗಿ ಹೇಳಿದರು. ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕ

ಹೆಗಡೆ, ಪ್ರವೀಣ, ರವಿ ಹಳದೋಟ, ವೀಣಾ ಶೆಟ್ಟಿ, ಆರ್‌.ವಿ. ಹೆಗಡೆ, ಶ್ರೀರಾಮ ನಾಯ್ಕ ಇತರರು ಇದ್ದರು.

ಗಮನ ಸೆಳೆದ ಚಾಲನೆ: ನೂತನ ಬಸ್‌ಗಳಿಗೆ ಪೂಜೆ ಸಲ್ಲಿಸಿದ ಸಂಸ್ಥೆ ಅಧ್ಯಕ್ಷ ವಿ.ಎಸ್‌. ಪಾಟೀಲ ಸ್ಪಲ್ವ ದೂರ ಓಡಿಸಿಯೂ ಗಮನ ಸೆಳೆದರು. ಬಿಎಸ್‌4 ವಾಹನ ಇದಾಗಿದ್ದು, ಮುಂದೆ ಬಿಎಸ್‌ 6 ಬಸ್‌ಗಳೂ ಬರಲಿವೆ. ಹಾಲಿ ಹುಬ್ಬಳ್ಳಿಗೆ ಇಲ್ಲಿಂದ ಈ ಹೊಸ ಬಸ್‌ಗಳು ಓಡಲಿವೆ ಎಂದೂ ಹೇಳಿದರು.

ಟಾಪ್ ನ್ಯೂಸ್

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.