ಕೆಡಿಸಿಸಿ ಬ್ಯಾಂಕ್‌ಗೆ 7.72 ಕೋಟಿ ಲಾಭ


Team Udayavani, Dec 19, 2020, 4:42 PM IST

ಕೆಡಿಸಿಸಿ ಬ್ಯಾಂಕ್‌ಗೆ 7.72 ಕೋಟಿ ಲಾಭ

ಶಿರಸಿ: ನೂರು ವರ್ಷ ಪೂರ್ಣಗೊಳಿಸಿ ನೂರೊಂದನೇ ವರ್ಷದ ಸಂಭ್ರಮದಲ್ಲಿರುವ ಇಲ್ಲಿನ ಜಿಲ್ಲಾ ಮಧ್ಯವರ್ತಿ ಬ್ಯಾಂಕ್‌ ಪ್ರಸಕ್ತ ಸಾಲಿನಲ್ಲಿ 7.72 ಕೋ. ರೂ. ನಿವ್ವಳ ಲಾಭ ಗಳಿಸಿದೆ. ರೈತಪರವಾಗಿ ಅನೇಕಕಾರ್ಯ ಚಟುವಟಿಕೆಗಳ ಜೊತೆಗೆ ಅನ್ನದಾತರಹೆಗಲಿಗೆ ಹೆಗಲು ನೀಡಿದೆ ಎಂದು ಸಚಿವ, ಕೆಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಶಿವರಾಮ ಹೆಬ್ಟಾರ್‌ ಹೇಳಿದರು.

ಅವರು ಕೆಡಿಸಿಸಿ ಬ್ಯಾಂಕ್‌ ಪ್ರಧಾನ ಕಚೇರಿಯಲ್ಲಿ ಸಂಘದ ವಾರ್ಷಿಕ ವರದಿ ವಿವರ ನೀಡಿ, ಪ್ರತೀ ಎಕರೆಗೆ ಒಂದೂವರೆ ಲಕ್ಷ ರೂ. ಮಣ್ಣಿನ ಬದುಕುಹಾಗೂ ಹೊಸ ತೋಟ ನಿರ್ಮಾಣಕ್ಕೆ ಹೆಚ್ಚುವರಸಾಲವನ್ನು ಶೂನ್ಯ ಬಡ್ಡಿಯಲ್ಲಿ ನೀಡಲೂ ಯೋಜಿಸಿ ಅನುಷ್ಠಾನಕ್ಕೆ ಬಂದಿದ್ದೇವೆ. ರಾಜ್ಯದಲ್ಲೇ ಅತಿ ಹೆಚ್ಚು ಬೆಳೆ ಸಾಲ ವಿತರಿಸುವ ಬ್ಯಾಂಕ್‌ ಆದ ಕೆಡಿಸಿಸಿ ಈ ಬಾರಿ ಸರಕಾರದಿಂದ ಸಿಗಬೇಕಿದ್ದ ಬೆಳೆಸಾಲ ಮನ್ನಾ ಬಾಪ್ತನ್ನೂ ಅಧಿಕಗೊಳಿಸಿ ಕೊಡುವಲ್ಲಿ ಮುಂದಿದೆ. ನಬಾರ್ಡ್‌ಸೂಚನೆಯಂತೆ ಬ್ಯಾಂಕ್‌ ಕಾರ್ಯ ಮಾಡುತ್ತಿದ್ದು, ರೈತರಿಗೆ, ಠೇವಣಿ ಇಟ್ಟವರಿಗೆ ಹಿತ ಕಾಯುವ ಕಾರ್ಯ ಮಾಡುತ್ತಿದೆ ಎಂದು ಪ್ರತಿಪಾದಿಸಿದರು.

ಶೇರು ಬಂಡವಾಳ 69.87 ಕೋ.ರೂ ದಿಂದ 74.92 ಕೋ.ರೂಗೆ ಏರಿಕೆಯಾಗಿ ಶೇ.7.23ರಷ್ಟು ಏರಿಕೆಯಾಗಿದೆ. ನಿಧಿಗಳು 122.06 ಕೊ.ರೂ.ದಿಂದ137.19 ಕೋ.ರೂ.ಗೆ ಏರಿಕೆಯಾಗಿ ಶೇ.12.40 ರಷ್ಟು ವೃದ್ಧಿಯಾಗಿದೆ. ಠೇವುಗಳು 2021.41 ಕೋ.ರೂ. ದಿಂದ 2336.66 ಕೋ.ರೂ.ಗೆ ಏರಿಕೆಯಾಗಿಶೇ.15.60 ದಷ್ಟು ಅಭಿವೃದ್ಧಿಯಾಗಿದೆ. ಇದೇಜಿಲ್ಲಿಗರಿಗೆ ಬ್ಯಾಂಕಿನ ಮೇಲೆ ಇರುವ ವಿಶ್ವಾಸತೋರಿಸುತ್ತದೆ. ಈ ವಿಶ್ವಾಸ ಉಳಿಸಿಕೊಂಡು ಬ್ಯಾಂಕ್‌ ಹೋಗಲಿದೆ ಎಂದರು.

ಬ್ಯಾಂಕಿನ ಒಟ್ಟೂ ಆದಾಯ 228.28 ಕೋ. ರೂ. ಆಗಿದೆ. ಸಾಲ ಬಾಕಿ 1784.46 ಕೋ.ರೂ.ಇದ್ದು, ದುಡಿಯುವ ಬಂಡವಾಳ 3128.15 ಕೋ.ರೂ. ಆಗಿದೆ. 53 ಶಾಖೆಗಳ ಮೂಲಕ ಕಾರ್ಯಮಾಡುತ್ತಿರುವ ಬ್ಯಾಂಕ್‌ ಈ ವರ್ಷದಿಂದ ನಾಲ್ಕುಗಾಲಿ ವಾಹನ ಪಡೆಯುವವರಿಗ 24 ಗಂಟೆಯೊಳಗೆಸಾಲ ನೀಡಲೂ ಯೋಜನೆ ರೂಪಿಸಿದೆ. ಶಾಖಾ ವ್ಯವಸ್ಥಾಪಕರಿಗೆ ಮಂಜೂರಾತಿ ಜವಾಬ್ದಾರಿ ಕೂಡ ನೀಡಲಾಗಿದೆ. ಬೆಳೆ ಸಾಲದ ನೀಡಿಕೆ ಮಿತಿಯನ್ನೂ ಏರಿಕೆ ಮಾಡಲಾಗಿದೆ ಎಂದ ಹೆಬ್ಟಾರ್‌, ರಾಜ್ಯ ಕೇಂದ್ರ ಸರಕಾರದ ರಿಯಾಯತಿ ಬಾಬತ್ತಿನಲ್ಲಿ 54 ಕೋ.ರೂ.ಹಣ ಬಿಡುಗಡೆ ಆಗಬೇಕಿದ್ದು, ಈ ಪೈಕಿ ಕೆಲ ಮೊತ್ತ ಗುರುವಾರ ಬಿಡುಗಡೆ ಆಗಿದೆ ಎಂದೂ ತಿಳಿಸಿದರು.

ಕಳೆದ ಜೂನ್‌ 30ಕ್ಕೆ ಹೋಲಿಸಿದರೆ ವ್ಯವಸಾಯ ಸಾಲ ವಸೂಲಿ ಪ್ರಮಾಣ ಶೇ.97.73ರಷ್ಟಿದ್ದು, ಬೆಳೆವಿಮೆ ಭಾಗವಾಗಿ ಫಸಲ ಭೀಮಾ, ಹವಾಮಾನಆಧರಿತ ಬೆಳೆವಿಮೆ ಕೂಡ ಮಾಡಲಾಗುತ್ತಿದೆ. ಹಣ ಸೊಸೈಟಿಗಳ ಮೂಲಕ ಬ್ಯಾಂಕ್‌ ಕಟ್ಟಿಸಿಕೊಂಡು ವಿಮಾ ಕಂಪನಿಗೆ ಪಾವತಿಸಿದ ಬಳಿಕ ಬ್ಯಾಂಕ್‌ ಗೆ ವಿಮಾ ಪರಿಹಾರ ಕೊಡುವಾಗ ಯಾವುದೇ ಮಾಹಿತಿ ಇರುವುದಿಲ್ಲ. ಈ ಬಗ್ಗೆ ಒಬ್ಬ ನೋಡೆಲ್‌ ಅಧಿಕಾರಿ ಅಗತ್ಯ ಎಂಬ ಬೇಡಿಕೆ ಈಡೇರಿಸಲು ಪ್ರಯತ್ನಿಸುತ್ತಿದ್ದೇವೆ ಎಂದ ಹೆಬ್ಟಾರ್‌, ಪ್ರಧಾನ ಮಂತ್ರಿ ಫಸಲ್‌ ಭೀಮಾ ಯೋಜನೆಯಲ್ಲಿ 57186 ರೈತರು, ಹವಾಮಾನ ಆಧರಿತದಲ್ಲಿ 37221 ರೈತರು ಕಂತ ಕಟ್ಟಿದ್ದಾರೆ ಎಂದೂ ತಿಳಿಸಿದರು.

ಬ್ಯಾಂಕ್‌ ಇದ್ದ ಹಣವನ್ನು ದುಡಿಸಲು ಕೇವಲರೈತರಿಗೆ ಸಾಲ ಕೊಟ್ಟರೆ ಆಗದು. ಔದ್ಯೋಗಿಕವಾಗಿಕೂಡ ನೀಡಲೇಬೇಕು. ಈ ಕಾರಣದಿಂದ 24 ಹೊಸ ಘಟಕಗಳಿಗೆ 1122.92 ಲ.ರೂ ನೀಡಲಾಗಿದೆ. ಮನೆನಿರ್ಮಾಣಕ್ಕೂ ಕ್ರಿಯಾ ಯೋಜನೆಯ ಶೇ.75ರಷ್ಟು ಹಾಗೂ 30 ಲ.ರೂ. ತನಕದ ಸಾಲ ನೀಡಲಾಗುತ್ತಿದೆ. 80 ಜನರಿಗೆ 1262 ಲ.ರೂ. ಸಾಲ ಕೊಡಲಾಗಿದೆ.ಫಾರ್ಮ್ ಹೌಸ್‌ಗೆ 27 ಜನರಿಗೆ ಗರಿಷ್ಠ 20 ಲ.ರೂ.ತನಕ 296 ಲ.ರೂ. ನೀಡಲಾಗಿದೆ. ಹೊಸತಾದ 210 ಸ್ವ ಸಹಾಯ ಸಂಘಗಳೂ ಸೇರಿ 5277 ಸಂಘಗಳಿವೆ. 61017 ಜನರು ಸದಸ್ಯರಿದ್ದಾರೆ. ಬ್ಯಾಂಕ್‌ ಈವರ್ಷವೂ ಅ ವರ್ಗದ ಅಡಿಟ್‌ನಲ್ಲಿದೆ ಎಂದರು.

ಉಪಾಧ್ಯಕ್ಷ ಮೋಹನದಾಸ್‌ ನಾಯಕ,ನಿರ್ದೇಶಕರಾದ ಶ್ರೀಕಾಂತ ಘೋಕ್ಲೃಕರ್‌, ಜಿ.ಆರ್‌.ಹೆಗಡೆ ಸೋಂದಾ, ರಾಮಕೃಷ್ಣ ಹೆಗಡೆ ಕಡವೆ,ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಎಲ್‌.ಟಿ.ಪಾಟೀಲ,ಗಜು ಕತಗಾಲ, ವ್ಯವಸ್ಥಾಪಕ ಎಸ್‌.ಪಿ. ಚೌಹಾಣ ಸೇರಿದಂತೆ ಇತರರು ಇದ್ದರು.

ಆಸಾಮಿ ಖಾತೆ ಸಾಲ ಮನ್ನಾಕ್ಕೆ ಸಾಕಷ್ಟುಸಲ ಪ್ರಯತ್ನಿಸಿದರೂ ತಾಂತ್ರಿಕವಾಗಿಕೂಡ ಇದು ಸಾಧುವಾಗುತ್ತಿಲ್ಲ. ಬಹುತೇಕಶೇ.55 ರಷ್ಟು ಈ ಸಾಲ ಬಾಧೆಯಿಂದ ಹೊರಗೆಬಂದಿದ್ದಾರೆ. ಕೃಷಿ ಸಾಲಗಳ ಮೂಲಕವೇ ರೈತರ ಅಭಿವೃದ್ಧಿಗೆ ನೆರವಾಗುತ್ತಿದ್ದೇವೆ. ಶಿವರಾಮ ಹೆಬ್ಟಾರ್‌, ಸಚಿವ, ಅಧ್ಯಕ್ಷ

ಟಾಪ್ ನ್ಯೂಸ್

ಜಮೀನು,ಚಿನ್ನ,ಟ್ರ್ಯಾಕ್ಟರ್‌, ವಾಹನ.. ತಂಗಿ ಮದುವೆಗೆ 8ಕೋಟಿ ರೂ. ವರದಕ್ಷಿಣೆ ನೀಡಿದ ಸಹೋದರರು

ಜಮೀನು,ಚಿನ್ನ,ಟ್ರ್ಯಾಕ್ಟರ್‌, ವಾಹನ.. ತಂಗಿ ಮದುವೆಗೆ 8ಕೋಟಿ ರೂ. ವರದಕ್ಷಿಣೆ ನೀಡಿದ ಸಹೋದರರು

1-wwqewqewqewqe

ಬಳ್ಳಾರಿ ಪಾಲಿಕೆ ಮೇಯರ್ ಆಗಿ ಕಾಂಗ್ರೆಸ್ ನ ತ್ರಿವೇಣಿ ಆಯ್ಕೆ,ಜಾನಕಿ ಉಪಮೇಯರ್

KAGODU

ಅಳಿಯನೇ ಪಕ್ಷದ ಅಭ್ಯರ್ಥಿಯಾಗಿರುವಾಗ ಭಿನ್ನಮತದ ಮಾತೆಲ್ಲಿ: ಕಾಗೋಡು ಪ್ರಶ್ನೆ

anjanadri

ಕಿಷ್ಕಿಂಧಾ ಅಂಜನಾದ್ರಿ ಹುಂಡಿ ಎಣಿಕೆ: 10.65 ಲಕ್ಷ ರೂ.ಸಂಗ್ರಹ

1-sadsadadas

ಆಮೆ ಮತ್ತು ಮೊಲದ ಓಟ : ಅತೀ ಉತ್ಸಾಹವೇ ಈತನಿಗೆ ಮುಳುವಾಯ್ತು!!

KAGERI BANNER

ಸಾಹೇಬ್ರು ಹೋದ ಮೇಲೆ ಬಂತು ಬ್ಯಾನರ್!

mahes

ಸಂವಿಧಾನ ಶಿಲ್ಪಿಗೆ ಕಾಂಗ್ರೆಸ್‌ನಿಂದ ಅಪಮಾನ: ಶಾಸಕ ಎನ್.ಮಹೇಶ್



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

KAGERI BANNER

ಸಾಹೇಬ್ರು ಹೋದ ಮೇಲೆ ಬಂತು ಬ್ಯಾನರ್!

ಕೆಎಚ್‌ಬಿ ಕಾಲೋನಿಯನ್ನು ಮಿನಿ ಸಿಟಿ ಮಾದರಿಯಲ್ಲಿ ಅಭಿವೃದ್ಧಿ: ಶಾಸಕಿ ರೂಪಾಲಿ ನಾಯ್ಕ

ಕೆಎಚ್‌ಬಿ ಕಾಲೋನಿಯನ್ನು ಮಿನಿ ಸಿಟಿ ಮಾದರಿಯಲ್ಲಿ ಅಭಿವೃದ್ಧಿ: ಶಾಸಕಿ ರೂಪಾಲಿ ನಾಯ್ಕ

ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಅಡಿಕೆ ತೋಟ ಬೆಂಕಿಗಾಹುತಿ

ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಅರ್ಧ ಎಕರೆಗೂ ಅಧಿಕ ಅಡಿಕೆ ತೋಟ ಬೆಂಕಿಗಾಹುತಿ

ಪಿಎಸ್‌ಐ ಅಕ್ರಮ: ವಿಚಾರಣೆ ಎದುರಿಸಿದ್ದ ಜಿ.ಬಿ.ಭಟ್ಟ ಆತ್ಮಹತ್ಯೆ

ಪಿಎಸ್‌ಐ ಅಕ್ರಮ: ವಿಚಾರಣೆ ಎದುರಿಸಿದ್ದ ಜಿ.ಬಿ.ಭಟ್ಟ ಆತ್ಮಹತ್ಯೆ

4-sirsi

ಕಗ್ಗದ ಮೇಲೆ ಸ್ವರ್ಣವಲ್ಲೀ ಶ್ರೀ ಪ್ರವಚನ; ಇಂದಿನಿಂದ ಶಿರಸಿ ಯೋಗ ಮಂದಿರದಲ್ಲಿ!

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

ಜಮೀನು,ಚಿನ್ನ,ಟ್ರ್ಯಾಕ್ಟರ್‌, ವಾಹನ.. ತಂಗಿ ಮದುವೆಗೆ 8ಕೋಟಿ ರೂ. ವರದಕ್ಷಿಣೆ ನೀಡಿದ ಸಹೋದರರು

ಜಮೀನು,ಚಿನ್ನ,ಟ್ರ್ಯಾಕ್ಟರ್‌, ವಾಹನ.. ತಂಗಿ ಮದುವೆಗೆ 8ಕೋಟಿ ರೂ. ವರದಕ್ಷಿಣೆ ನೀಡಿದ ಸಹೋದರರು

1-wwqewqewqewqe

ಬಳ್ಳಾರಿ ಪಾಲಿಕೆ ಮೇಯರ್ ಆಗಿ ಕಾಂಗ್ರೆಸ್ ನ ತ್ರಿವೇಣಿ ಆಯ್ಕೆ,ಜಾನಕಿ ಉಪಮೇಯರ್

KAGODU

ಅಳಿಯನೇ ಪಕ್ಷದ ಅಭ್ಯರ್ಥಿಯಾಗಿರುವಾಗ ಭಿನ್ನಮತದ ಮಾತೆಲ್ಲಿ: ಕಾಗೋಡು ಪ್ರಶ್ನೆ

anjanadri

ಕಿಷ್ಕಿಂಧಾ ಅಂಜನಾದ್ರಿ ಹುಂಡಿ ಎಣಿಕೆ: 10.65 ಲಕ್ಷ ರೂ.ಸಂಗ್ರಹ

1-sadsadadas

ಆಮೆ ಮತ್ತು ಮೊಲದ ಓಟ : ಅತೀ ಉತ್ಸಾಹವೇ ಈತನಿಗೆ ಮುಳುವಾಯ್ತು!!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.