ಅಂಕೋಲಾ : ಗಂಗಾವಳಿ ಹಳ್ಳದಲ್ಲಿ ಮೀನು ಹಿಡಿಯಲು ಹೊದ ಯುವಕ ನಾಪತ್ತೆ
Team Udayavani, Jan 2, 2023, 7:27 PM IST
ಅಂಕೋಲಾ : ಗಂಗಾವಳಿ ಹಳ್ಳದಲ್ಲಿ ಮೀನು ಹಿಡಿಯಲು ಹೊದ ಯುವಕನೋರ್ವ ನಾಪತ್ತೆಯಾದ ಘಟನೆ ತಾಲೂಕಿನ ಸಗಡಗೇರಿ ಗ್ರಾ.ಪಂ ವ್ಯಾಪ್ತಿಯ ಉಳುವರೆಯಲ್ಲಿ ನಡೆದಿದೆ.
ರಾಮಚಂದ್ರ ಹೊನ್ನಾ ಗೌಡ (30) ಜ 1ರಂದು ತನ್ನ ಮನೆಯ ಬಳಿ ಇರುವ ಗಂಗಾವಳಿ ಹಳ್ಳದಲ್ಲಿ ಗಾಳ ಹಾಕಿ ಮೀನು ಹಿಡಿಯಲು ಹೊದವನು ರಾತ್ರಿಯಾದರು ಬಾರದಿರುವುದನ್ನು ಗಮನಿಸಿ ಊರಿನಲ್ಲಿ ಹುಡುಕಾಟ ನಡೆಸಿದ್ದಾರೆ.
ಬಳಿಕ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಸಹೋದರ ಕಮಲಾಕರ ಗೌಡ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪಿಎಸ್ಐ ಗೀತಾ ಶಿರ್ಶಿಕರ ಸ್ಥಳಕ್ಕೆ ಭೇಟಿ ನೀಡಿ ಗಂಗಾವಳಿ ನದಿಯಲ್ಲಿಯ ದಂಡೆಯ ಮೇಲೆ ಹುಡುಕಾಟ ನಡೆಸಿದ್ದಾರೆ. ಸೋಮವಾರ ಸಂಜೆಯ ತನಕ ಹುಡುಕಾಟ ನಡೆಸಿದರೂ ಕಾಣೆಯದ ಯುವಕ ಪತ್ತೆಯಾಗಿರುವುದಿಲ್ಲ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.