ಚರಂಡಿಯಲ್ಲಿ ಬಿದ್ದಿದ್ದ ಹೋರಿ ರಕ್ಷಣೆ
Team Udayavani, Sep 23, 2021, 8:14 PM IST
ಶಿರಸಿ: ಇಲ್ಲಿಯ ಹುಲೆಕಲ್ ರಸ್ತೆಯ ಪೊಲೀಸ್ ವಸತಿ ನಿಲಯದ ಹತ್ತಿರ ಚರಂಡಿಯಲ್ಲಿ ಬಿದ್ದಿದ್ದ ಹೋರಿಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತಲಾಯಿತು.
ಚರಂಡಿಯಲ್ಲಿ ಬಿದ್ದು ನರಳುತ್ತಿದ್ದ ಅಜಾನುಬಾಹು ಹೋರಿಯನ್ನು ಜೀವ ಜಲ ಕಾರ್ಯಪಡೆಯ ಗೋರಕ್ಷಕ ತಂಡ ರಕ್ಷಣೆ ಮಾಡಿತು. ಸುಮಾರು ಒಂದು ಗಂಟೆಯ ಕಾಲ ಕಾರ್ಯಾಚರಣೆ ನಡೆಸಿ ಕೊನೆಗೂ ಹಿಟಾಚಿ ಸಹಾಯದಿಂದ ಹೋರಿಯನ್ನು ರೆಯನ್ನು ಮೇಲಕ್ಕೆತ್ತಿ ಚಿಕಿತ್ಸೆ ಕೊಡಿಸಲಾಯಿತು.
ಜೀವ ಜಲಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ನೇತೃತ್ವದ ತಂಡಕ್ಕೆ ಸಾರ್ವಜನಿಕರ ಮೆಚ್ಚುಗೆ ವ್ಯಕ್ತವಾಗಿದೆ.
,