ಮೀನುಗಾರರ ರಕ್ಷಣೆಗಾಗಿ ಕೋಸ್ಟ್‌ ಗಾರ್ಡ್‌

ಮೀನುಗಾರರು ಬಯಸಿದರೆ ಕಾರವಾರದಲ್ಲಿ ಹೊವರ್‌ ಕ್ರಾಫ್ಟ್‌

Team Udayavani, Oct 30, 2022, 7:39 PM IST

13

ಲಂಗರು: ಮನೋಜ್‌ ಬಾಡಕರ್‌ ಕಾರವಾರ: ಮೀನುಗಾರರು ಬಯಸಿದರೆ ಕಾರವಾರ ಕಡಲತೀರದಲ್ಲಿ ಹೊವರ್‌ ಕ್ರಾಫ್ಟ್‌ ಲಂಗರು ಹಾಕಲಿದೆ ಎಂದು ಪಶ್ಚಿಮ ವಲಯದ ಕೋಸ್ಟ್‌ ಗಾರ್ಡ್‌ ಕಮಾಂಡೆಂಟ್‌ ಮನೋಜ್‌ ಬಾಡಕರ್‌ ಹೇಳಿದರು.

ಕಾರವಾರದಲ್ಲಿ ಮೀನುಗಾರರ ಸಂಘಟನೆಗಳ ಜತೆ ಮಾತುಕತೆ ನಡೆಸಿದ ನಂತರ ಅರ್ಗಾದಲ್ಲಿನ ಕೋಸ್ಟ್‌ ಗಾರ್ಡ್‌ ಕಚೇರಿ ಆವರಣದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕೋಸ್ಟ್‌ಗಾರ್ಡ್‌ ಇರುವುದೇ ಮೀನುಗಾರರ ರಕ್ಷಣೆಗೆ ಹಾಗೂ ದೇಶದ ಸಾಗರದ ಗಡಿ ಕಾಯಲು ಎಂದರು. ಮೀನುಗಾರರು ಸಮುದ್ರದ ಕಣ್ಣು, ಕಿವಿ ಇದ್ದ ಹಾಗೆ. ಅವರಿಗೆ ಇರುವ ಸಮುದ್ರದ ಜ್ಞಾನವನ್ನು ಕೋಸ್ಟ್‌ಗಾರ್ಡ್‌ ವಿನಯದಿಂದ ಸ್ವೀಕಾರ ಮಾಡುತ್ತದೆ ಎಂದರು.

ಜಿಲ್ಲಾಡಳಿತ ದಿವೇಕರ್‌ ಕಾಲೇಜು ಪಕ್ಕ ನಮಗೆ 23 ಎಕರೆ ಜಾಗ ಕೊಟ್ಟಿತ್ತು. ಆದರೆ ಅಲ್ಲಿ ಕೆಲ ಹಿತಾಸಕ್ತಿಗಳ ಕಾರಣ ಹಾಗೂ ತಪ್ಪು ತಿಳಿವಳಿಕೆಯಿಂದ ನಮ್ಮ ಕಚೇರಿ ಬರದಂತೆ ತಡೆಯಲಾಯಿತು. ಕಚೇರಿ ಕಟ್ಟಡ ಬೇಡ ಎಂದು ಚಳವಳಿ ಆಯಿತು. ಆದರೆ ನಾವು ದೇಶದ ರಕ್ಷಣೆ ದೃಷ್ಟಿಯಿಂದ ಕೋಸ್ಟ್‌ಗಾರ್ಡ್‌ ಅವಶ್ಯಕತೆಯನ್ನು ಕೋರ್ಟ್‌ಗೆ ಮನವರಿಕೆ ಮಾಡಿ ಕೇಸ್‌ ಗೆದ್ದಿದ್ದವು. ಆದರೂ ಕಟ್ಟಡ ಮಾಡಲಿಲ್ಲ. ನಂತರ ಜಿಲ್ಲಾಡಳಿತ ನಮಗೆ ನೀಡಿದ ಲ್ಯಾಂಡ್‌ ವಾಪಸ್‌ ಪಡೆದಿದೆ. ಈಗ ಅಲ್ಲಿ ಹೋವರ್‌ ಕ್ರಾಫ್ಟ್‌ ಇಡಲು ಯೋಚನೆ ಇದೆ. ಅಲ್ಲಿ ನಾವು ಶಾಶ್ವತ ಕಟ್ಟಡ ಕಟ್ಟಲ್ಲ. ಜನರಿಗೆ ಓಡಾಡಲು ನಿರ್ಬಂಧ ಹೇರಲ್ಲ. ಕಾರವಾರ ಮೂಲದವನಾಗಿ ಇಷ್ಟು ಆಶ್ವಾಸನೆ ಕೊಡಬಲ್ಲೆ ಎಂದರು.

ಈಗ ಬೀಚ್‌ನಲ್ಲಿರುವ ಹೋಟೆಲ್‌, ಗಾರ್ಡನ್‌, ಕಚೇರಿ, ಕಾಲೇಜು ಕಟ್ಟಡದಂತೆ ನಮ್ಮ ಕೋಸ್‌ rಗಾರ್ಡ್‌ ಚಟುವಟಿಕೆಗಳು ಸಹ ಇರುತ್ತವೆ. ಸಮುದ್ರದ ಅವಘಡ, ಪ್ರವಾಹ ಮುಂತಾದ ಸಂದರ್ಭಗಳಲ್ಲಿ ಹೋವರ್‌ ಕ್ರಾಫ್ಟ್‌ ಮಂಗಳೂರಿನಿಂದ ಬರಲು ಸಮಯ ಬೇಕು. ಇದರಿಂದ ಸಂಕಷ್ಟದಲ್ಲಿರುವ ಜೀವಗಳು ನಷ್ಟವಾಗುತ್ತವೆ ಎಂದರು. ಇದನ್ನು ತಪ್ಪಿಸಲು ಹೋವರ್‌ ಕ್ರಾಫ್ಟ್‌ (ನೀರು ಮತ್ತು ನೆಲದ ಮೇಲೆ ಚಲಿಸುವ ಅತ್ಯಾಧುನಿಕ ಹಡಗು) ಕಾರವಾರ ರವೀಂದ್ರನಾಥ ಟಾಗೋರ್‌ ಬೀಚ್‌ ನಲ್ಲಿಡುವುದು ಅವಶ್ಯ ಎಂದರು.

ಎರಡು ವರ್ಷದಲ್ಲಿ ಸ್ವಂತ ಕಚೇರಿ: ಕಾರವಾರದ ಅಮದಳ್ಳಿಯಲ್ಲಿ ಕೋಸ್ಟ್‌ ಕಚೇರಿಗೆ 23 ಎಕರೆ ಜಾಗ ಖರಿದೀಸಿದ್ದು, ಕಟ್ಟಡ ನಿರ್ಮಾಣ ಪ್ರಾರಂಭವಾಗಿದೆ. ಎರಡು ವರ್ಷಗಳಲ್ಲಿ ಕೋಸ್ಟ್‌ಗಾರ್ಡ್‌ ಸ್ವಂತ ಕಚೇರಿ ಹೊಂದಲಿದೆ ಎಂದು ಹೇಳಿದರು. ಕಾರವಾರ ಬಂದರು ಬ್ರೆಕ್‌ ವಾಟರ್‌ ಆಚೆ ಗಂಗೆಕೊಳ್ಳದ ಕಡೆಗೆ ಬರ್ತ (ಹಡಗು ನಿಲ್ದಾಣ ಧಕ್ಕೆ) ನಿರ್ಮಿಸಲು ಜಾಗವನ್ನು ಬಂದರು ಇಲಾಖೆ ಬಳಿ ಕೇಳಿದ್ದೇವೆ. ಅವರು ಒಪ್ಪಿಗೆ ನೀಡಿದ್ದಾರೆ. ಮುಂದೆ ಅಲ್ಲಿ ಕೋಸ್‌ rಗಾರ್ಡ್‌ ಹಡಗು ಧಕ್ಕೆ 80 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದೆ ಎಂದು ಅವರು ಹೇಳಿದರು.

ಡ್ರಗ್ಸ್‌ ಅಕ್ರಮ ಹಿಡಿಯುವಲ್ಲಿ ಮುಂದೆ: ಡ್ರಗ್ಸ್‌ ಸಾಗಾಣಿಕೆ ಹಿಡಿಯುವಲ್ಲಿ ಕೋಸ್ಟ್‌ಗಾರ್ಡ್‌ ಮುಂದಿದೆ. ಈಚೆಗೆ ಗುಜರಾತ್‌ ಸಮುದ್ರದಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ಬರುತ್ತಿದ್ದ ಸಾವಿರ ಕೋಟಿ ಮೊತ್ತದ ಡ್ರಗ್ಸ್‌ ಕೋಕೆನ್‌ನನ್ನು ಹಿಡಿಯಲಾಗಿದೆ ಎಂದರು.

ಸೆಟಸೈಟ್‌ ಫೋನ್‌ ಭಾರತದಲ್ಲಿ ನಿಷೇಧವಿದೆ. ಪಕ್ಕದ ದೇಶಗಳಲ್ಲಿ ಸೆಟಲೈಟ್‌ ಫೋನ್‌ ಬಳಕೆ ಇದೆ. ನಮ್ಮ ದೇಶದ ಮಾರ್ಗವಾಗಿ ಹಡಗಿನಲ್ಲಿ ಹಾದು ಹೋಗುವವರು ಬಳಸಿರುವ ಸಾಧ್ಯತೆ ಇದೆ. ಆದರೂ ನಾವು ನಮ್ಮ ಸಮುದ್ರ ತೀರದಲ್ಲಿ ಸೆಟಲೈಟ್‌ ಫೋನ್‌ ಬಳಸದಂತೆ ಎಚ್ಚರಿಕೆ ನೀಡುತ್ತೇವೆ. ಒಳನಾಡಿನಲ್ಲಿ ಇಂಥ ಪ್ರಕರಣ ನಡೆದರೆ ಅದು ಕೋಸ್ಟ್‌ಗಾರ್ಡ್‌ ವ್ಯಾಪ್ತಿಗೆ ಬರುವುದಿಲ್ಲ ಎಂದು ಕೋಸ್ಟ್‌ಗಾರ್ಡ್‌ ಕಮಾಂಡೆಂಟ್‌ ನುಡಿದರು.

ಕಾರವಾರಿಗರು ಆಸೆಬುರಕರಲ್ಲ, ಮಹಾತ್ವಾಕಾಂಕ್ಷಿಗಳು: ಕಾರವಾರಿಗರು ಆಸೆಬುರಕರಲ್ಲ, ಮಹಾತ್ವಾಕಾಂಕ್ಷಿಗಳು ಎಂದು ಕೋಸ್ಟ್‌ಗಾರ್ಡ್‌ ಪಶ್ಚಿಮ ವಲಯದ ಕಮಾಂಡೆಂಟ್‌ ಮನೋಜ್‌ ಬಾಡಕರ್‌ ನುಡಿದರು.

ಕಾರವಾರದವರು 6 ಸಾವಿರ ವೇತನಕ್ಕೆ ಇಲ್ಲಿರುತ್ತಾರೆ. ಮುಂಬಯಿನಲ್ಲಿ 45 ಸಾವಿರ ವೇತನ ಪಡೆಯುವ ಕಾರವಾರಿಗ ಮರಳಿ ಕಾರವಾರಕ್ಕೆ ಬರಲು ತುದಿಗಾಲಲ್ಲಿ ನಿಂತಿರುತ್ತಾನೆ. ಕಾರವಾರದಲ್ಲಿ ಕೈಗಾರಿಕೆಗಳು ಆಗಬೇಕು. ಆಗ ಇಲ್ಲಿನ ಪರಿಸ್ಥಿತಿ ಬದಲಾಗಲು ಸಾಧ್ಯ ಎಂದರು.

ಯುವಕರು ಮಹಾತ್ವಾಕಾಂಕ್ಷಿಗಳಾಗಬೇಕು ಎಂದು ಅಭಿಪ್ರಾಯಪಟ್ಟರು. ಯೋಜನೆ ಜಾರಿಯಲ್ಲಿ ಗೋವಾ ಮಾದರಿಯನ್ನು ನಾವು ಅನುಸರಿಸಬೇಕು ಎಂದರು. ಕಾರವಾರದ ಕೋಸ್ಟ್‌ಗಾರ್ಡ್‌ ಅಧಿಕಾರಿ ಸುರೇಶ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

ಟಾಪ್ ನ್ಯೂಸ್

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

1-weqwwqe

Joida Tragedy: ನದಿಗಿಳಿದ ಒಂದೇ ಕುಟುಂಬದ 6 ಮಂದಿ ಮೃತ್ಯು!

shiv Hebbar

BJP ಪರ ಪ್ರಚಾರಕ್ಕೆ ಹೋಗಲ್ಲ: ಶಾಸಕ ಶಿವರಾಮ್‌ ಹೆಬ್ಬಾರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qwewweq

K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ 

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

1-BVR-1

Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.