Congress’s; ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಡಾ.ಅಂಜಲಿ ನಿಂಬಾಳಕರ್ ಕಣಕ್ಕೆ ?
ಚರ್ಚೆ ನಡೆದಿದೆ... ಯಾರೇ ನಿಂತರೂ ಕಾಂಗ್ರೆಸ್ ಗೆಲುವು: ಮಂಕಾಳು ವೈದ್ಯ
Team Udayavani, Nov 1, 2023, 7:59 PM IST
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ನಿಂದ ಯಾರೇ ನಿಂತರೂ ಗೆಲ್ತಾರೆ ಎಂದು ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ’ಜಿಲ್ಲೆಯಲ್ಲಿ ಲೋಕಸಭೆಯ ಅಭ್ಯರ್ಥಿ ಯಾರಾಗ ಬೇಕೆಂದು ಚರ್ಚೆ ನಡೆದಿದೆ.ನನಗೆ ಯಾರೂ ಈತನಕ ಅರ್ಜಿ ಕೊಟ್ಟಿಲ್ಲ. ರವೀಂದ್ರನಾಥ್ ನಾಯ್ಕ ಸಹ ಅಭ್ಯರ್ಥಿ ಆಗುವ ಬಗ್ಗೆ ಕೇಳಿಲ್ಲ ಎಂದರು. ಹೊಸ ಮುಖಕ್ಕೆ ಟಿಕೆಟ್ ಕೊಡ್ತಿರಾ ಎಂಬ ಪ್ರಶ್ನೆಗೆ, ‘ಆಗಬಹುದು. ಆದರೆ ಹೈಕಮಾಂಡ್ ನಿರ್ಣಯ ಅಂತಿಮ. ದೇಶಪಾಂಡೆ ಹಿರಿಯರು, ಅವರು ನಿಂತರೆ ಗೆಲುವು ಖಚಿತ ಎಂದರು . ಕಾಂಗ್ರೆಸ್ ಈ ಸಲ ಗೆಲ್ಲಲಿದೆ. ಯಾರೇ ನಿಂತರೂ ಗೆಲ್ತಾರೆ’ ಎಂದರು.
‘ಶಾಸಕ ಶಿವರಾಮ ಹೆಬ್ಬಾರ್ ಸ್ನೇಹಿತ. ಅವರ ತವರು ಮನೆ ಕಾಂಗ್ರೆಸ್. ಹಾಗಾಗಿ ನಮ್ಮ ಜತೆ ಹತ್ತಿರ ಇರ್ತಾರೆ. ಅವರು ಯಾವಾಗಲೂ ನಮ್ಮ ಪಕ್ಷಕ್ಕೆ ಬರಬಹುದು. ಆದರೆ ಈ ಬಗ್ಗೆ ನಮ್ಮ ಜತೆ ಚರ್ಚೆ ಮಾಡಿಲ್ಲ’ ಎಂದರು.
ಕಿತ್ತೂರು, ಖಾನಾಪುರ ಕ್ಷೇತ್ರಗಳಲ್ಲಿ 4 ಲಕ್ಷ ಮತಗಳಿವೆ . ಉತ್ತರ ಕನ್ನಡದಲ್ಲಿ 11 ಲಕ್ಷ ಮತಗಳಿವೆ. ಹಾಗಾಗಿ ಈ ಸಲ ಕಿತ್ತೂರು ಖಾನಾಪುರ ಕಡೆ ಟಿಕೆಟ್ ಹೋಗುವ ಸುಳಿವನ್ನು ಪರೋಕ್ಷವಾಗಿ ವೈದ್ಯ ನೀಡಿದರು. ಇದು ನಿಜವಾದಲ್ಲಿ ಡಾ.ಅಂಜಲಿ ನಿಂಬಾಳಕರ್ ಕಾಂಗ್ರೆಸ್ ಅಭ್ಯರ್ಥಿಯಾಗುವ ಸಾಧ್ಯತೆ ಇದೆ.
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಲೆಯ ಹೊರತಾಗಿಯೂ ಅಂಜಲಿ ನಿಂಬಾಳಕರ್ ಅವರು ಖಾನಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿಟ್ಠಲ್ ಸೋಮಣ್ಣ ಹಲಗೆಕರ ವಿರುದ್ಧ ಸೋಲು ಅನುಭವಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ
MUST WATCH
ಹೊಸ ಸೇರ್ಪಡೆ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ