ರಂಜಾನ್ ವಿನಾಯಿತಿ ಕೇಳಬೇಡಿ ಎಂದಿದ್ದೇನೆ
Team Udayavani, Apr 24, 2020, 3:41 PM IST
ಭಟ್ಕಳ: ರಂಜಾನ್ ತಿಂಗಳಿನಲ್ಲಿ ಕನಿಷ್ಟ ಒಂದು ಗಂಟೆಯ ವಿನಾಯಿತಿ ಕೊಡುವಂತೆ ತಂಜೀಂ ಸಂಸ್ಥೆಯವರು ಕೇಳಿದ್ದು, ಯಾವುದೇ ಕಾರಣಕ್ಕೂ ವಿನಾಯಿತಿ ಕೇಳಬೇಡಿ ಎಂದಿದ್ದೇನೆ ಎಂದು ಸಚಿವ ಶಿವರಾಮ ಹೆಬ್ಟಾರ ಹೇಳಿದರು.
ತಾಲೂಕಾಸ್ಪತ್ರೆಗೆ ಭೇಟಿ ನೀಡಿ ಕೋವಿಡ್-19 ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಮರಳುತ್ತಿರುವವರನ್ನು ಸತ್ಕರಿಸಿ, ಅಧಿಕಾರಿಗಳ ಸಭೆ ನಡೆಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಭಗವಂತ ಈ ಬಾರಿಯ ರಂಜಾನ್ ಆಚರಣೆ ಇದೇ ರೀತಿಯಾಗಿ ಆಗಬೇಕು ಎಂದು ತೀರ್ಮಾನಿಸಿದ್ದರೆ ಅದಕ್ಕೆ ಏನೂ ಮಾಡಲಾಗದು. ನೀವು ಮನೆಯಲ್ಲಿಯೇ ಆಚರಣೆ ಮಾಡಿ ಎಂದು ಹೇಳಿದ್ದೇನೆ. ಅಲ್ಲದೇ ಯಾವುದೇ ಧಾರ್ಮಿಕ ಆಚರಣೆಯನ್ನು ಸಾರ್ವಜನಿಕವಾಗಿ ಮಾಡಲು ಅವಕಾಶವಿಲ್ಲ. ಇದು ರಾಜ್ಯದಲ್ಲಿಯೇ ಜಾರಿಯಲ್ಲಿರುವುದರಿಂದ ಎಲ್ಲಿಯೂ ಇದಕ್ಕೆ ರಿಯಾಯಿತಿ ನೀಡುವ ಪ್ರಶ್ನೆಯೇ ಇಲ್ಲ ಎಂದರು.
ಮೇ ಕೊನೆಯ ತನಕ ಯಾವುದೇ ಗಡಿ ತೆರೆಯುವುದಿಲ್ಲ, ಹೊರಗಡೆ ಇರುವವರನ್ನು ಕರೆ ತರುವುದಕ್ಕೆ ಯಾವುದೇ ಪ್ರಯತ್ನ ಬೇಡ. ಇತ್ತೀಚೆಗೆ ಗಾಳಿ, ಮಳೆಯಿಂದ ಹೊನ್ನಾವರ ಭಾಗದಲ್ಲಿ ಆಗಿರುವ ಹಾನಿಗೆ ಸೂಕ್ತ ಪರಿಹಾರ ನೀಡಲು ಸೂಚಿಸಿದ್ದೇನೆ ಎಂದೂ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ
Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್
Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ
Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ