ಗಂಗಾವಳಿ ಪ್ರವಾಹ: ಕೊಚ್ಚಿ ಹೋದ ನೆರೆ ಪೀಡಿತ ಜನರ ಬದುಕು


Team Udayavani, Jul 27, 2021, 9:57 PM IST

ಗಂಗಾವಳಿ ಪ್ರವಾಹ: ಕೊಚ್ಚಿಹೋದ ನೆರೆ ಪೀಡಿತ ಜನರ ಬದುಕು

ಅಂಕೋಲಾ : ತಾಲೂಕಿನಲ್ಲಿ ಅಬ್ಬರಿಸಿದ ಜೀವನದಿ ಗಂಗಾವಳಿಯ ನದಿ ಪ್ರವಾಹ ನದಿ ತಟದ ನಿವಾಸಿಗಳ ಬದುಕನ್ನೇ ಕಿತ್ತುಕೊಂಡಿದೆ.

ನರೆ ಬಂದು ಇಳಿದು ಹೋಗಿದೆ. ಆದರೆ ಹೋಗುವಾಗ ಎಲ್ಲವನ್ನು ತನ್ನೊಡಲಿಗೆ ಸೇರಿಸಿಕೊಂಡು ಹೊಗಿದೆ. ಹೊಲಗದ್ದೆಯಲ್ಲಿನ ಬತ್ತದ ಸಸಿ ಕಾಣುವಲ್ಲಿ ರಾಡಿ ಮಣ್ಣಿನ ರಾಶಿಯೆ ಕಾಣುತ್ತಿದೆ. ಮನೆಯಲ್ಲಿರುವ ಬಟ್ಟೆಗಳು ಮಣ್ಣಿನ ರಾಶಿಯಲ್ಲಿ ಸೇರಿಕೊಂಡಿದೆ. ಮನೆಯಲ್ಲಿಟ್ಟಿದ್ದ ಅಕ್ಕಿ ಬೆಳೆಗಳು ನೀರು ಪಾಲಾಗಿದೆ. ಉಡಲು ಬಟ್ಟೆ ಇಲ್ಲ ತಿನ್ನಲು ಅನ್ನಕ್ಕೆ ತತ್ವಾರ ಎದುರಾಗಿದೆ.

ಕೋವಿಡ್ ನಿಂದಾಗಿ ಕಳೆದ ನಾಲ್ಕು ತಿಂಗಳಿನಿಂದ ಕೆಲಸವು ಇಲ್ಲದೆ ಕೈಯಲ್ಲಿ ಹಣವು ಇಲ್ಲ, ವಸ್ತುಗಳು ಖರೀದಿ ಮಾಡಬೇಕು ಎಂದರೆ ಆಗದಂತಹ ಪರಿಸ್ಥಿತಿ ನೆರೆ ಪೀಡಿತ ಜನರದ್ದಾಗಿದೆ.

ಶಿರೂರು ಗ್ರಾಮದ ಸಂತ್ರಸ್ಥರು ನೀರಿನಲ್ಲಿ ಸಿಲುಕಿ ಮಣ್ಣು ಬಡೆದಿರುವ ಮನೆಯಲ್ಲಿದ್ದ ಬಟ್ಟೆಗಳನ್ನು ಹೊತ್ತು ತಂದು ಹೆದ್ದಾರಿ ಪಕ್ಕದಲ್ಲಿನ ಸಣ್ಣ ಹಳ್ಳದಲ್ಲಿ ತೊಳೆದು ಕಾಮಗಾರಿ ಮುಗಿಯದ ಹೆದ್ದಾರಿಯ ಮೇಲೆ ಬಟ್ಟೆಯನ್ನು ಒಣ ಹಾಕಿರುವುದು ಕಂಡುಬರುತ್ತಿದೆ.

ಸಣ್ಣ ಮಕ್ಕಳಿಂದ ಹಿಡಿದು ಹೀರಿಯರವರೆಗೆ ತಮ್ಮ ಮನೆಯಲ್ಲಿದ್ದ ಎಲ್ಲಾ ಬಟ್ಟೆಗಳನ್ನು ತಂದು ಒಣ ಹಾಕಿ ಗಂಟು ಕಟ್ಟಿಕೊಂಡು ಹೊಗುತ್ತಿರುವುದು ಕಳೆದೆರಡು ದಿನದಿಂದ ಸಾಮಾನ್ಯವಾಗಿ ಕಂಡುಬರುವಂತ್ತಿತ್ತು.

ತಮ್ಮ ಬಡತನದ ನಡುವೆಯೆ ಚಿಕ್ಕ ಸೂರನ್ನು ಕಟ್ಟಿಕೊಂಡ್ಡು ಮನೆಗೆ ಬೇಕಾದ ವಸ್ತುಗಳ ಸಂಗ್ರಹಿಸಿಟ್ಟ ಜನತೆಗೆ ನೆರೆ ಆರ್ಭಟ ನಲುಗಿಸುವಂತೆ ಮಾಡಿದೆ.

ಕೃಷಿಯೆ ಜೀವಾಳ:

ರೈತನಿಗೆ ಕೃಷಿಯೆ ಜೀವಾಳ. ಆದರೆ ಮಳೆಯ ಅಬ್ಬರದಿಂದಾಗಿ ಶ್ರಮ ಪಟ್ಟು ಬಿತ್ತಿದ ಭತ್ತದ ಸಸಿಗಳು ನದಿಯ ಪಾಲಾಗಿದೆ. ಕಬ್ಬು ನೆಲಕ್ಕೆ ಹಾಸಿ ಮಲಗಿದೆ. ಅಡಿಕೆ ಬಾಳೆ ಗಿಡಗಳು ಕೊಚ್ಚಿ ಹೋಗಿದೆ. ಹೀಗೆ ಎಲ್ಲವು ಅನ್ನದಾತನ ಕೈಗೆ ಕೊಡಲಿ ಏಟು ನೀಡಿದ್ದು, ಜೀವನ ನಿರ್ವಹಣೆ ಹೇಗೆ ಎಂಬ ಚಿಂತೆ ಮನೆ ಮಾಡಿದೆ.

ತುತ್ತು ಅನ್ನಕ್ಕೂ ತತ್ವಾರ ;

ತಾಲೂಕಾಡಳಿತ ತೆರೆದಿರುವ ಗಂಜಿ ಕೇಂದ್ರವು, ನೆರೆ ಇಳಿಯವರೆಗೆ ಅನ್ನ, ಆಶ್ರಯ ನೀಡಲಿದೆ. ನೆರೆ ಇಳಿದ ಮೇಲೆ ಸಂತ್ರಸ್ಥರು ತಾವು ಕಟ್ಟಿಕೊಂಡ ಸೂರಿಗೆ ಹೋಗಲೆಬೇಕು. ಆದರೆ ಇರುವ ಸೂರು ಸಹ ಪಾತಾಳಕ್ಕೆ ಮುಖ ಮಾಡಿದಾಗ ಹೋಗುದಾದಾರೆ ಎಲ್ಲಿ ಎಂಬ ಚಿಂತೆ ಸಂತ್ರಸ್ಥರದ್ದಾಗಿದೆ. ಸರಕಾರ ಸಮಿಕ್ಷೆ ನಡೆಸಿ ವರದಿ ನೀಡಿ ಪರಿಹಾರ ನೀಡುವುದು ತಿಂಗಳು ಕಳೆಯುತ್ತದೆ. ಅಲ್ಲಿಯವರೆಗೆ ಸಂತ್ರಸ್ಥರು ಆಶ್ರವಿಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗಬಹುದು. ಇರುವ ಆಹಾರ ಪದಾರ್ಥಗಳು ನೀರಿಗೆ ಕೊಚ್ಚಿ ಹೋಗಿ, ಹೊಟ್ಟೆಯ ಮೇಲೆ ತಣ್ಣೀರು ಪಟ್ಟೆ ಎಂಬ ಗತಿಯಾಗಿದೆ.

ನಮ್ಮ ಮನೆಯಲ್ಲಿಟ್ಟಿದ್ದ ಎಲ್ಲಾ ಸಾಮಾಣುಗಳು ನೀರಿಗೆ ಕೊಚ್ಚಿಕೊಂಡು ಹೋಗಿದೆ. ಅಳಿದು ಉಳಿದ ಬಟ್ಟೆಯನ್ನು ನಾವು ತೊಳೆದು ಒಣಗಿಸುತ್ತಿದ್ದೇವೆ. ಅಕ್ಕಿ ಚಿವು ನೀರಿನಲ್ಲಿ ಹಾಳಾಗಿದೆ. ಮನೆಯಲ್ಲಿ ಯಾವುದೆ ಸಾಮಾನುಗಳಿಲ್ಲಿ. ಕೆಲಸವು ಇಲ್ಲ. ಎನಾದರು ಕರಿದಿಸಬೇಕೆಂದರೆ  ಕೈಯಲ್ಲಿ ಹಣವು ಇಲ್ಲದ ಪರಿಸ್ಥಿತಿ ನಮ್ಮದಾಗಿದೆ.-ಸೋಮಿ ಗೌಡ ,ಶಿರೂರು

 

-ಅರುಣ ಶೆಟ್ಟಿ

 

ಟಾಪ್ ನ್ಯೂಸ್

1-dsad

Odisha ಭೀಕರ ರೈಲು ಅವಘಡ; ಕನಿಷ್ಠ 50 ಮೃತ್ಯು, 350ಕ್ಕೂ ಹೆಚ್ಚು ಮಂದಿಗೆ ಗಾಯ

HDK

ಸಿದ್ದರಾಮಯ್ಯ ಯುವಕರ ಹಣೆಗೆ ತುಪ್ಪ ಸವರಿದ್ದಾರೆ: ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ

1-dsasa

WFI ಬ್ರಿಜ್ ಭೂಷಣ್ ಬಂಧಿಸಲು ಗಡುವು ವಿಧಿಸಿದ ಖಾಪ್ ಮಹಾಪಂಚಾಯತ್

imran-khan

Pakistan ಇಮ್ರಾನ್ ಖಾನ್‌ಗೆ ಭಯೋತ್ಪಾದನಾ ನಿಗ್ರಹ ನ್ಯಾಯಾಲಯದಿಂದ ಜಾಮೀನು

1-SADSAASD

Nithin Gopi: 39 ರ ಹರೆಯದಲ್ಲೇ ನಟ ನಿತಿನ್​ ಗೋಪಿ ವಿಧಿವಶ

1-sdasdasd

Congress Guarantee ನನ್ನ ಹೆಂಡತಿಗೂ ಸಿಗುತ್ತೆ ರೀ; ಸಿದ್ದರಾಮಯ್ಯ ಹಾಸ್ಯ ಚಟಾಕಿ

1-sadasd

Congress Guarantee ”ಅಕ್ಕಿ ನಿಮ್ದು, ಚೀಲ ನಮ್ದು”: ಬಿಜೆಪಿ ತಿರುಗೇಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಾಂಡೇಲಿ: ಸಮಯಕ್ಕೆ ಸರಿಯಾಗಿ ಬಾರದ ಬಸ್… ಪ್ರಯಾಣಿಕರಿಂದ ಆಕ್ರೋಶ

ದಾಂಡೇಲಿ: ಸಮಯಕ್ಕೆ ಸರಿಯಾಗಿ ಬಾರದ ಬಸ್… ಪ್ರಯಾಣಿಕರಿಂದ ಆಕ್ರೋಶ

1-sad-dsa

Bhimanna T Naik ದುಃಖ ತಪ್ತ ಕುಟುಂಬಕ್ಕೆ‌ ಸಕಾಲಿಕ ನೆರವಾದ ಶಾಸಕ

ಯಲ್ಲಾಪುರ:ಉನ್ನತ ಶಿಕ್ಷಣ ಪಡೆದು ವಿದೇಶದಲ್ಲಿ ನೆಲೆಸಬೇಡಿ- ಡಾ| ವಿಜಯ ಸಂಕೇಶ್ವರ

ಯಲ್ಲಾಪುರ:ಉನ್ನತ ಶಿಕ್ಷಣ ಪಡೆದು ವಿದೇಶದಲ್ಲಿ ನೆಲೆಸಬೇಡಿ- ಡಾ| ವಿಜಯ ಸಂಕೇಶ್ವರ

ಶಿರಸಿ: ಅಜಿತ ಮನೋಚೇತನಾದಿಂದ ಸಂಪರ್ಕ ಅಭಿಯಾನ

ಶಿರಸಿ: ಅಜಿತ ಮನೋಚೇತನಾದಿಂದ ಸಂಪರ್ಕ ಅಭಿಯಾನ

Bhatkal: ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಆದೇಶ ನೀಡುವಂತೆ ಮನವಿ

Bhatkal: ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಆದೇಶ ನೀಡುವಂತೆ ಮನವಿ

MUST WATCH

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

ಹೊಸ ಸೇರ್ಪಡೆ

12-sadsad

Davanagere ವೃದ್ಧರೊಬ್ಬನ್ನು ಅಪಹರಿಸಿ ಭಾರಿ ಹಣಕ್ಕೆ ಬೇಡಿಕೆ; ಐವರ ಬಂಧನ

1-sddasd

SNM ಪಾಲಿಟೆಕ್ನಿಕ್ NSS ನವರಿಂದ ಬಡವರ ಮನೆಗಳಿಗೆ ಕಾಯಕಲ್ಪ

1-wewqewq

Amazon ಫ್ಯಾಷನ್‌ನಿಂದ ವಾರ್ಡ್‌ರೋಬ್‌ ರಿಫ್ರೆಶ್‌ ಸೇಲ್‌ ಆರಂಭ

1-dsad

Odisha ಭೀಕರ ರೈಲು ಅವಘಡ; ಕನಿಷ್ಠ 50 ಮೃತ್ಯು, 350ಕ್ಕೂ ಹೆಚ್ಚು ಮಂದಿಗೆ ಗಾಯ

1-qwwqeqwe

Mahalingpur ಗಾಳಿ ಮಳೆಗೆ ವ್ಯಾಪಕ ನಷ್ಟ; ಹಲವು ಮನೆಗಳಿಗೆ ಹಾನಿ, ಪರದಾಟ