
ಪಾರ್ವತಿ ದೇವಸ್ಥಾನ ದುರಸ್ತಿ ಮಾಡಿದರೆ ಮಧುಕೇಶ್ವರ ದೇವಸ್ಥಾನದಲ್ಲಿ ಸೋರುವುದು ನಿಲ್ಲುತ್ತದಾ?
ಪುರಾತತ್ವ ಇಲಾಖೆ ಬರೆದ ಪ್ರತ್ಯುತ್ತರ ನಗೆಪಾಟಲಿಗೆ ಈಡು...!
Team Udayavani, May 26, 2023, 4:05 PM IST

ಶಿರಸಿ: ಕದಂಬರ ರಾಜಧಾನಿ, ಬನವಾಸಿಯ ಪುರಾತನ ಮಧುಕೇಶ್ವರ ದೇವಸ್ಥಾನ ಸೋರುತ್ತಿದೆ ಎಂದು ಭಕ್ತರೋರ್ವರು ಸಾಮಾಜಿಕ ಕಳಕಳಿಯಿಂದ ಧಾರವಾಡದ ಪುರಾತತ್ವ ಇಲಾಖೆಗೆ ಪತ್ರ ಬರೆದು ಮನವಿ ಮಾಡಿದರೆ, ಪಾರ್ವತಿ ದೇವಸ್ಥಾನದ ಸೋರಿಕೆ ದುರಸ್ತಿ ಮಾಡಿದ್ದೇವೆ ಎಂದು ಪ್ರತ್ಯುತ್ತರ ಬರೆದು ನಗೆಪಾಟಲಿಗೆ ಈಡಾದ ಘಟನೆ ನಡೆದಿದೆ.
ಬನವಾಸಿ ಮಧುಕೇಶ್ವರ ದೇವಸ್ಥಾನದ ನಂದಿ ಹಾಗೂ ಆನೆಯ ವಿಗ್ರಹದ ಜತೆಗೆ ಮಳೆಗಾಲದಲ್ಲಿ ಮಧುಕೇಶ್ವರ ದೇವಸ್ಥಾನ ಸೋರುತ್ತಿದೆ ಎಂದೂ, ಅದರ ತುರ್ತು ದುರಸ್ತಿ ಸಲುವಾಗಿ ಶಿರಸಿಯ ಪ್ರಸಿದ್ಧ ವೈದ್ಯ ಡಾ. ರವಿಕಿರಣ ಪಟವರ್ಧನ್ ಧಾರವಾಡದ ಪುರಾತತ್ವ ಇಲಾಖೆಗೆ ಮನವಿ ಮಾಡಿ ಪತ್ರ ಬರೆದಿದ್ದರು.
ಬನವಾಸಿ ಮಧುಕೇಶ್ವರ ದೇವಸ್ಥಾನ ಎಂದರೆ ಅತ್ಯಂತ ಪ್ರಾಚೀನ ಹಾಗೂ ಕದಂಬರ ಕಾಲದ, ರಾಜ್ಯದ, ದೇಶದ ಪ್ರತಿಷ್ಠಿತ ದೇವಸ್ಥಾನಗಳಲ್ಲಿ ಒಂದು. ಅದರ ಸೋರುವಿಕೆ ತಡೆ ಕುರಿತು ಮನವಿಗೆ ಸ್ಪಂದಿಸುವ ಇಲಾಖೆಯ ಜವಬ್ದಾರಿ ಆಗಿತ್ತು. ಆದರೆ, ಅದರ ಬದಲಿಗೆ ಕೇಂದ್ರ ಸರಕಾರದ ಅಧೀನದ ಇಲಾಖೆಯ ಧಾರವಾಡ ವಿಭಾಗದಿಂದ ಬಂದಂತಹ ಉತ್ತರವೇ ವಿಶಿಷ್ಟವಾಗಿದೆ.
2023ರಲ್ಲಿ ಮಧುಕೇಶ್ವರ ದೇವಸ್ಥಾನ ಸೋರುತ್ತಿದೆ ಎಂದರೆ 2017-18 ರಲ್ಲಿ ಪಾರ್ವತಿ ದೇವಸ್ಥಾನ ಸೋರಿಕೆಯನ್ನು ರಿಪೇರಿ ಮಾಡಿದ್ದೇವೆ ಎಂದು ಉತ್ತರ ನೀಡುತ್ತಿದ್ದಾರೆ!. ಈ ಉತ್ತರ ಸಮಾಜಿಕ ಜಾಲ ತಾಣದಲ್ಲೂ ಟ್ರೋಲ್ ಆಗಿದೆ.
ಪಾರ್ವತಿ ದೇವಸ್ಥಾನ ಸೋರಿಕೆ, ರಿಪೇರಿ ಮಾಡಿದರೆ ಮಧುಕೇಶ್ವರ ದೇವಸ್ಥಾನದ ಮಳೆಗಾಲದ ಸೂರಿಕೆ ಹೇಗೆ ನಿಲ್ಲುವುದು ಎಂಬುದು ಯಕ್ಷಪ್ರಶ್ನೆಯಾಗಿ ನನ್ನನ್ನೇ ಕಾಡುತ್ತಿದೆ ಎನ್ನುತ್ತಾರೆ ವೈದ್ಯ ಡಾ. ರವಿಕಿರಣ ಪಟವರ್ಧನ್.ಏಕೆಂದರೆ, ಮಧುಕೇಶ್ವರ ದೇವಸ್ಥಾನದ ಪಕ್ಕದಲ್ಲಿ ಪಾರ್ವತಿ ದೇವಸ್ಥಾನ ಪ್ರತ್ಯೇಕವಾಗಿಯೇ ಇದೆ!.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ
