ಅಡಕೆ-ಕಾಳುಮೆಣಸು ದರ ಹೆಚ್ಚಳ

ತುಂಬುತ್ತಿದೆ ವ್ಯಾಪಾರಿ ಅಂಗಳ­ಕ್ವಿಂಟಾಲ್‌ ಚಾಲಿಗೆ 40,000-ಕೆಂಪಡಕೆಗೆ 40,500 ರೂ.

Team Udayavani, Jun 17, 2021, 6:12 PM IST

j16srs2

ಶಿರಸಿ: ಕೋವಿಡ್‌ ಎರಡನೇ ಅಲೆಯ ನಂತರ ಪುನಃ ಆರಂಭಗೊಂಡ ಅಡಕೆ ಟೆಂಡರ್‌ ಪ್ರಕ್ರಿಯೆಯಲ್ಲಿ ಕಳೆದ ಮೂರು ದಿನಗಳಿಂದ ಚಾಲಿ, ಕೆಂಪಡಕೆ, ಕಾಳು ಮೆಣಸು ಸೇರಿದಂತೆ ಕೃಷಿ ಉತ್ಪನ್ನಗಳ ವಹಿವಾಟು ಏರುಮುಖದಲ್ಲೇ ಶುರುವಾಗಿದೆ.

ಬೆಳಗ್ಗೆ 8ರಿಂದಲೇ ಅಡಕೆ ಅಂಗಳದಲ್ಲಿ ಟೆಂಡರ್‌ ಸಿದ್ಧತೆ ನಡೆಸಿ ಮಧ್ಯಾಹ್ನ ಒಂದರೊಳಗೆ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡು ನಂತರ ಅಡಕೆ ಅಳೆಯುವ ಕಾರ್ಯ ನಡೆಯುತ್ತಿದೆ. ಕೋವಿಡ್‌ ನಿಯಮಾನುಸಾರ ನಡೆಸಲಾಗುತ್ತಿರುವ ಟೆಂಡರ್‌ ಪ್ರಕ್ರಿಯೆ ಬೆಳೆಗಾರರಿಗೆ ಇನ್ನೊಂದು ಭರವಸೆ ಮೂಡಿಸಿದೆ.

ಏರು ಮುಖ: ಧಾರಣೆಯಲ್ಲಿ ಕಳೆದೆರಡು ದಿನಗಳಿಗೆ ಹೋಲಿಸಿದರೆ ಕೊಂಚ ತೇಜಿಯೇ ಕಾಣುತ್ತಿದೆ. ಶಿರಸಿ ಟಿಎಂಎಸ್‌ ಸೊಸೈಟಿಯಲ್ಲಿ ಪ್ರತಿ ಕ್ವಿಂಟಾಲ್‌ ಕೆಂಪಡಕೆಗೆ ಗರಿಷ್ಠ 42599 ರೂ. ತನಕೂ ದಾಖಲಾಗಿದೆ. ಚಾಲಿ ಅಡಕೆ ಕೂಡ ಟಿಎಸ್‌ಎಸ್‌ ಅಂಗಳದಲ್ಲಿ ಪ್ರತಿ ಕ್ವಿಂಟಾಲ್‌ಗೆ 40098 ರೂ. ಕಂಡಿದೆ. ಚಾಲಿಗೆ ಶಿರಸಿ ಮಾರುಕಟ್ಟೆಯಲ್ಲಿ ಸರಾಸರಿ 38700 ರೂ. ದಾಖಲಾಗಿದೆ. ಗುರುವಾರ, ಶುಕ್ರವಾರ ಚಾಲಿಗೆ 41 ಸಾವಿರ ರೂ. ಆಗುವ ಸಾಧ್ಯತೆ ಇದೆ ಎನ್ನುತ್ತಾರೆ ಕೆಲ ವರ್ತಕರು.

ಅಡಕೆ ವಹಿವಾಟಿಗೆ ಬೆಳೆ ವರ್ತಕರ ಕೈಲಿಲ್ಲ. ಲಾಕ್‌ಡೌನ್‌ ಕಾರಣದಿಂದ ಅಡಕೆ ಸಿಕ್ಕಿರಲಿಲ್ಲ ಎಂದು ದರ ಏರಿಸಲಾಗುತ್ತಿದೆ. ಇದೇ ಕಾರಣ ನಿಜವಾದರೆ ಜೂನ್‌ ಕೊನೇ ತನಕ ದರ ನಿಲ್ಲಬಹುದು ಎನ್ನಲಾಗುತ್ತಿದೆ. ನಂತರ ಇಳಿದು ಶ್ರಾವಣದಲ್ಲಿ ಏರಿಕೆ ಆಗಬಹುದು ಎನ್ನುತ್ತಾರೆ ಮಾರುಕಟ್ಟೆ ವಿಶ್ಲೇಷಣಾಕಾರರು. ಈ ದರ ಕೂಡ ತೀರಾ ಕಡಿಮೆ ಅಲ್ಲ ಎನ್ನುತ್ತಾರೆ ಬೆಳೆಗಾರ ವೇಣು ಹೆಗಡೆ.

ಗ್ರಾಮೀಣದಲ್ಲೂ ಪುನರಾರಂಭ: ಗ್ರಾಮೀಣ ಮಾರುಕಟ್ಟೆ ಯಡಹಳ್ಳಿ ಸೇವಾ ಸಹಕಾರಿ ಸಂಘದ ಪ್ರಾಂಗಣದಲ್ಲೂ ಲಾಕ್‌ಡೌನ್‌ ನಂತರ ಅಡಕೆ ವ್ಯಾಪಾರ ಪುನಃ ಆರಂಭವಾಗಿದೆ. ಈವರೆಗೆ ಶಿರಸಿ ಕೇಂದ್ರದಲ್ಲಿ ಮಾತ್ರ ನಡೆಯುತ್ತಿದ್ದ ಅಡಕೆ ಟೆಂಡರ್‌ ವಹಿವಾಟು ಈ ಮೊದಲಿನಂತೆ ಯಡಹಳ್ಳಿಗೂ ಆಗಮಿಸಿ ವರ್ತಕರು ಟೆಂಡರ್‌ ಬರೆಯುತ್ತಿದ್ದಾರೆ. ಕದಂಬ ಮಾರ್ಕೇಟಿಂಗ್‌ನಲ್ಲಿ ಬಾಳೆಗೊನೆ, ಗೇರುಬೀಜ, ಕಾಳು ಮೆಣಸು ಹಾಗೂ ಕೊಕ್ಕೋ ಕೂಡ ಖರೀದಿ ಮಾಡಲಾಗುತ್ತಿದೆ. ಈ ಬಾರಿ ಕೊಕ್ಕೋ ಬೀಜ ಕೇಜಿಗೆ 50 ರೂ. ಇದೆ. ಹತ್ತು ದಿನಗಳ ಹಿಂದೆ 10 ರೂ. ಕಾಣದ ಮೆಟಿÉ ಬಾಳೆಕಾಯಿ ಈಗ ಸರಾಸರಿ 16 ರೂ. ಪ್ರತಿ ಕೇಜಿಗೆ ದಾಖಲಾಗುತ್ತಿದೆ. ಕಳೆದ ಲಾಕ್‌ಡೌನ್‌ ವೇಳೆಯಿಂದಲೂ ಟಿಎಸ್‌ಎಸ್‌ ಕೆಲ ದಿನ ಅಡಕೆ ನೇರ ಖರೀದಿ ಮಾಡಿ ರೈತರಿಗೆ ನೆರವಾಗಿತ್ತು. ಇದು ಬಿಟ್ಟರೆ ಸಹಕಾರಿ ವ್ಯವಸ್ಥೆಯಲ್ಲಿ ಟೆಂಡರ್‌ ನಡೆದಿರಲಿಲ್ಲ. ಕಳೆದ ಮೂರು ದಿನಗಳಿಂದ ವಹಿವಾಟು ಚುರುಕಾಗಿದೆ. ಏರುಮುಖದ ಧಾರಣೆ ಕಂಗಾಲಾಗಿದ್ದ ರೈತರಿಗೆ ಕೊಂಚ ನಿಟ್ಟುಸಿರು ಬಿಡುವಂತೆ ಆಗಿದೆ.

ಕಪ್ಪು ಬಂ ಗಾರವೂ ಏರಿಕೆ: ಇದೇ ರೀತಿ ಕಪ್ಪು ಬಂಗಾರ ಎಂದೇ ಹೆಸರಾದ ಕಾಳು ಮೆಣಸಿಗೂ ಸರಾಸರಿ ಶಿರಸಿ ಟೆಂಡರ್‌ನಲ್ಲಿ 39665 ರೂ. ದಾಖಲಾಗಿದ್ದರೆ, ಗರಿಷ್ಠ ಕ್ವಿಂಟಾಲ್‌ ಕಾಳಿಗೆ 40199 ರೂ. ಲಭಿಸುತ್ತಿದೆ. ಖಾಸಗಿ ವರ್ತಕರು ಕರಿ ಕಾಳನ್ನು 42 ಸಾವಿರ ರೂ.ಗೂ ಪ್ರತಿ ಕ್ವಿಂಟಾಲ್‌ಗೆ ಖರೀದಿಸಿದ್ದೂ ಇದೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.