ಪಶು ಆಹಾರ ದರ ಏರಿಕೆಗೆ ವಿರೋಧ; ಚರ್ಮಗಂಟು ರೋಗದ ಕಾಲದಲ್ಲೂ ಬೇಕಿತ್ತಾ?: ಕೆಶಿನ್ಮನೆ ಪ್ರಶ್ನೆ


Team Udayavani, Oct 23, 2022, 9:58 AM IST

4

ಶಿರಸಿ: ಯಾವುದೇ ಪೂರ್ವ ಸೂಚನೆ ನೀಡದೆ ಏಕಾಏಕಿ ಹೈನುಗಾರರ ಗಾಯದ ಮೇಲೆ ಬರೆ ಎಳೆಯುವಂತೆ ಪಶು ಆಹಾರ ದರದ ಏರಿಕೆ ಮಾಡಿದ ಕರ್ನಾಟಕ ಹಾಲು ಮಹಾ ಮಂಡಳದ ತೀರ್ಮಾನಕ್ಕೆ ಧಾರವಾಡ ಹಾಲು ಒಕ್ಕೂಟದ ನಿರ್ದೇಶಕರಾದ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಶಂಕರ ಹೆಗಡೆ ಖಂಡನೆ ವ್ಯಕ್ತಪಡಿಸಿದ್ದಾರೆ.

ಅತಿಯಾಗಿ ಮಳೆಯಾದ ಕಾರಣದಿಂದ ರೈತರು ಬೆಳೆ ನಷ್ಟದ ಸಂಕಟದಲ್ಲಿದ್ದಾರೆ. ಇತ್ತ ಚರ್ಮಗಂಟು ರೋಗ ಕೂಡ ವ್ಯಾಪಕವಾಗುತ್ತಿದೆ. ಇಂಥ ಸಂದರ್ಭದಲ್ಲಿ ದರ ಏರಿಸಿದ್ದು, ಪಶು ಸಂಗೋಪನೆ ಪ್ರೋತ್ಸಾಹಿಸಬೇಕಾದವರೇ ಹೈನುಗಾರರ ಕತ್ತು ಹಿಸುಕುವಂತೆ ಮಾಡುವುದು ಸರಿಯಲ್ಲ ಎಂದಿದ್ದಾರೆ.

ಮೊದಲೇ ಇಲ್ಲ!:

ಮಲೆನಾಡಿನ, ಕರಾವಳಿಯಲ್ಲಿನ ಹೈನುಗಾರರಿಗೆ ಪಶು ಆಹಾರಕ್ಕೆ ಬಳಸುವ ಬೈ ಹುಲ್ಲು, ಜೋಳ ಕೂಡ ಉತ್ತರ ಕರ್ನಾಟಕದಿಂದ ಬರಬೇಕಿದೆ. ಪಶುಗಳಿಗೆ ಬೇಕಾಗುವ ಹುಲ್ಲು ಇಲ್ಲಿ ಮೊದಲೇ ಇಲ್ಲ. ಇಂಥ ಸಂಕಷ್ಟದಲ್ಲಿ ಇರುವ ರೈತರಿಗೆ ಹಾಲಿನ ದರ ಏರಿಸಿ ಸಮಾಧಾನ ಮಾಡುವ ಬದಲು ಪಶು ಆಹಾರಕ್ಕೆ 132 ರೂಪಾಯಿ ಒಮ್ಮೆಲೆ ಏರಿಸುವ ಮೂಲಕ ಬಡವನ ಮೇಲೆ ಕಾದ ಕಬ್ಬಿಣದ ಸಲಾಕೆ ಇಟ್ಟಂತಾಗಿದೆ ಎಂದೂ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಏರಿಸಿದ್ದು ಒಕ್ಕೂಟವಲ್ಲ:

ಬಹಳ ಮಂದಿ ರೈತರು ಧಾರವಾಡ ಹಾಲು ಒಕ್ಕೂಟ, ಪಶು ಆಹಾರ ಏರಿಸಿದೆ ಎಂದು ನಮ್ಮನ್ನು ಪ್ರಶ್ನಿಸಿ, ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಪಶು ಆಹಾರ ಉತ್ಪಾದನೆ ಹಾಗೂ ವಿತರಣೆ ಮಾಡುವುದು ಕರ್ನಾಟಕ ಹಾಲು ಮಹಾ ಮಂಡಳಿ. ದರ ಏರಿಕೆಗೂ ನಮಗೂ ಯಾವುದೇ ಸಂಬಂಧವೇ ಇಲ್ಲ ಎಂದಿದ್ದಾರೆ.

ಕೆಎಂಎಫ್ ಎಂದರೆ ಧಾರವಾಡದಂತಹ ಹದಿನಾಲ್ಕು ಒಕ್ಕೂಟಗಳಿಗೆ ಮಹಾ ಮಂಡಳಿ ಆಗಿದೆ. ಅವರೇ ಪಶು ಆಹಾರ ಸಿದ್ಧಪಡಿಸಿ ಕಳಿಸುವುದು. ಧಾರವಾಡ ಹಾಲು ಒಕ್ಕೂಟಕ್ಕೂ ಪಶು ಆಹಾರ ದರ ಏರಿಕೆಗೂ ಸಂಬಂಧ ಇಲ್ಲ. ಒಮ್ಮೆಲೆ ದರ ಏರಿಸಿದ ಕೆಎಂಏಫ್ ನಿಲುವನ್ನು ಖಂಡಿಸುತ್ತೇವೆ. ರೈತರ ಪರವಾದ ಧ್ವನಿಯಾಗಿ ನಾವೂ ನಿಂತಿದ್ದೇವೆ ಎಂದೂ ಹೇಳಿದ್ದಾರೆ.

ಕೇಳಿದ್ದು ಹಾಲಿನ ದರ; ಏರಿಸಿದ್ದು‌ ಪಶು ಆಹಾರ!

ಸರಕಾರಕ್ಕೆ ಕಳೆದ ಐದು ತಿಂಗಳುಗಳಿಂದ ಹಾಲಿನ ದರ ಏರಿಕೆಗೆ ಹೇಳುತ್ತಿದ್ದರೂ ರಾಜ್ಯ ಸರಕಾರ ಉದಾಸೀನ ಮಾಡಿದೆ. ಕೊಳ್ಳುವ ಗ್ರಾಹಕನಿಗೆ ದರ ಏರಿಸಿದರೆ ಆ ದರ ರೈತನಿಗೆ ಕೊಡಲು ಸಾಧ್ಯವಿದೆ. ಆದರೆ ಆ ಅವಕಾಶ ಇನ್ನೂ ಕೂಡಿ ಬಂದಿಲ್ಲ.

ಹಾಲಿನ ದರ ಏರಿಸುವುದು ಬಿಡಿ, ಪಶು ಆಹಾರ ದರ ಏರಿಸಿ ರೈತರು ಹೈನುಗಾರಿಕೆಯಿಂದ ವಿಮುಖ ಆಗುವಂತೆ ಸ್ವತಃ ಕೆಎಂಎಫ್ ಮಾಡುತ್ತಿದೆ ಎಂದೂ ಆತಂಕಿಸಿದರು.

೧32 ರೂ. ಏರಿಕೆ!

ಕೆಎಂಎಪ್ ಗೋಲ್ಡ್‌ 50 ಕೇಜಿ ಚೀಲಕ್ಕೆ 132 ಏರಿಸಿ 1092ರೂ. ಇದ್ದ ಬೆಲೆಯನ್ನು 1224ಗೆ ಜಿಗಿಸಿದೆ. ಕೆಎಂಎಫ್ ಬೈಪಾಸ್ 1218 ದಿಂದ 1350 ರೂ.ಗೆ ಏರಿಸಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಪಶು ಆಹಾರವಾಗಿ ಹಿಂಡಿಯೇ ಅಧಿಕ ಬಳಕೆಯಾಗುತ್ತಿದ್ದು, ತಿಂಗಳಿಗೆ ಕೆಎಂಎಫ್ ಒಂದೇ 550 ಟನ್ ಗೂ ಅಧಿಕ ಬೇಡಿಕೆಯಿದೆ. ಹಾಲಿನ ದರಕ್ಕೂ ಪಶು ಆಹಾರದ ದರಕ್ಕೂ ಸಮವಾಗುವಷ್ಟಾಗಿದೆ ಎಂದೂ ವಿಶ್ಲೇಷಿಸಿದ್ದಾರೆ.

ಈಗಾಗಲೇ ಕೆಎಂಎಫ್ ಪಶು ಆಹಾರ ದರ ಏರಿಸಿದ್ದನ್ನು ಒಕ್ಕೂಟದ ಅಧ್ಯಕ್ಷರ ಹಾಗೂ ಸಚಿವ ಶಿವರಾಮ ಹೆಬ್ಬಾರರ ಗಮನಕ್ಕೆ ತರಲಾಗಿದೆ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೂ ಮನವಿ ಮಾಡಿ ದರ ಇಳಿಸಲು ಸೂಚಿಸುವಂತೆ ವಿನಂತಿಸುತ್ತೇವೆ. ಕಷ್ಟದಲ್ಲಿದ್ದ ಹೈನುಗಾರರಿಗೆ ಪಶು ಆಹಾರ ದರ ಇಳಿಸಿ, ಹಾಲಿನ ದರ ಏರಿಸಿ ಕೈ ಹಿಡಿಯಬೇಕಾಗಿದೆ ಎಂದೂ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.

ದೀಪಾವಳಿ ಸಂಭ್ರಮಕ್ಕೆ ಕಾರಣವಾಗಲಿ: ದರ ಏರಿಸಿದ್ದು‌ ಕೆಎಂಎಫ್. ದರ ಏರಿಸುವಾಗ ಒಕ್ಕೂಟಗಳನ್ನು ಕೇಳುವುದೇ ಇಲ್ಲ. ಎಲ್ಲಾ ಜಿಲ್ಲೆಯಲ್ಲೂ ಪಶುಪಾಲನೆ ವೆಚ್ಚ ಒಂದೇ ‌ಮಾದರಿ ಇರುವುದಿಲ್ಲ. ವೈಜ್ಞಾನಿಕ‌ ಮನಸ್ಥಿತಿಯಲ್ಲಿ ಕೆಎಂಎಫ್ ನಡೆದುಕೊಳ್ಳುವುದು ಕಲಿಯಬೇಕು. – ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಒಕ್ಕೂಟ ನಿರ್ದೇಶಕ

ಟಾಪ್ ನ್ಯೂಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.