ಶಿರಸಿ: ಕರಡಿ ದಾಳಿಗೆ ವ್ಯಕ್ತಿ ಬಲಿ
Team Udayavani, Aug 10, 2022, 7:30 PM IST
ಶಿರಸಿ: ಉಪ್ಪಾಗೆ ಹಣ್ಣು ಕೋಯ್ಯಲು ಕಾಡಿಗೆ ಹೋಗಿದ್ದ ವ್ಯಕ್ತಿಯ ಮೇಲೆ ಕರಡಿ ದಾಳಿ ನಡೆಸಿದ ಪರಿಣಾಮ ವ್ಯಕ್ತಿ ಮೃತಪಟ್ಟ ದಾರುಣ ಘಟನೆ ತಾಲೂಕಿನ ದೇವನಳ್ಳಿ ಸಮೀಪ ಸರಗುಪ್ಪ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಸುಂಡಳ್ಳಿ ಗ್ರಾಮದ ಓಂಕಾರ್ ಪದ್ಮಯ್ಯ ಗೌಡ (55) ಮೃತ ವ್ಯಕ್ತಿ.
ಕಾಡಿಗೆ ಹೋದ ಓಂಕಾರ್ ಮನೆಗೆ ವಾಪಸ್ ಬಾರದೆ ಇದ್ದಾಗ ಕುಟುಂಬದವರು ಆತಂಕಗೊಂಡು ಕಾಡಿಗೆ ತೆರಳಿದಾಗ ಈ ಘಟನೆ ಗಮನಕ್ಕೆ ಬಂದಿದೆ. ಗ್ರಾಮೀಣ ಪೊಲೀಸರು,ಅರಣ್ಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ತೆರಳಿದ್ದಾರೆ.