ಸಾವಯವ ಔಷಧೀಯ ಸಸ್ಯ ಕೃಷಿ


Team Udayavani, May 14, 2019, 3:55 PM IST

nc-2

ಕುಮಟಾ: ಪರಿಸರ ಸಂರಕ್ಷಿಸಿ, ಗಿಡ ಬೆಳೆಸಿ, ಪರಿಸರ ಉಳಿಸಿ ಹೀಗೆ ಎಲ್ಲರೂ ಉಪದೇಶ ಮಾಡುವವರ ಸಂಖ್ಯೆ ಅಧಿಕವಾಗಿದೆ. ಆದರೆ ಉಪದೇಶ ಮಾಡುವವರೆಲ್ಲ ಗಿಡ ನೆಡುವುದೂ ಇಲ್ಲ, ಅರಣ್ಯ ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದೂ ಇಲ್ಲ. ಎಲ್ಲೋ ಕೆಲವರು ತಮ್ಮ ಮಾತಿನಂತೆ ಕೃತಿಗಿಳಿಯುತ್ತಾರೆ. ಅಂತವರು ಸಮಾಜಕ್ಕೆ ತಮ್ಮ ಸಾಧನೆಗಳ ಮೂಲಕವೇ ಆದರ್ಶರಾಗುತ್ತಾರೆ. ಅಂತವರಲ್ಲಿ ತಾಲೂಕಿನ ಕಲ್ಲಬ್ಬೆಯ ರಾಮಚಂದ್ರ ಭಟ್ಟ ಹೆಬ್ಳೇಕೇರಿ ಒಬ್ಬರು.

ಇಂದಿನ ದಿನಗಳಲ್ಲಿ ಹಲವು ಔಷಧೀಯ ಗಿಡ, ಮರಗಳು ಅವನತಿಯಲ್ಲಿವೆ. ಇನ್ನು ಕೆಲವು ಸಸ್ಯಗಳ ಉಪಯೋಗವೇ ಇಂದಿನ ಕೆಲವರಿಗೆ ಗೊತ್ತಿಲ್ಲ. ಅಂತಹ ಔಷಧೀಯ ಗಿಡ ಮರಗಳ ಜೊತೆಗೆ ಹಲವು ಅಮೂಲ್ಯವಾದ ಸಸ್ಯ ಸಂಪತ್ತನ್ನು ತಮ್ಮ 2.3 ಎಕರೆ ಜಮೀನಿನಲ್ಲಿ ಬೆಳೆಸಿ, ಅವುಗಳನ್ನು ಮುಂದಿನ ಪೀಳಿಗೆಗೆ ಕಾದಿಡುವ ಉದ್ದೇಶದಿಂದ ಅವರು ಕಾರ್ಯಪ್ರವ್ರತ್ತರಾಗಿದ್ದಾರೆ.

ಅರಣ್ಯ ಇಲಾಖೆ ಸಹಯೋಗದಲ್ಲಿ ಔಷಧಿ ಗಿಡಗಳನ್ನು ಹಾಗೂ ಅರಣ್ಯದಲ್ಲಿ ಬೆಳೆಯುವ ಗಿಡಗಳನ್ನು ತಂದು ಸತತ 6-7 ವರ್ಷದ ಪರಿಶ್ರಮದಿಂದ ತಮ್ಮ ಜಾಗದಲ್ಲಿ ಬೆಳೆಸುತ್ತಿದ್ದಾರೆ. ರಾಸಾಯನಿಕ ಗೊಬ್ಬರಗಳನ್ನು ಬಳಸದೇ ಕೇವಲ ಸಗಣಿಗೊಬ್ಬರವನ್ನು ಹಾಕಲಾಗಿದೆ. ಸಾವಯವ ಗೊಬ್ಬರಗಳನ್ನು ಬಳಸುವುದರಿಂದ ಗಿಡಗಳಿಗೆ ರೋಗಗಳ ಭೀತಿ ಎದುರಾಗುವುದಿಲ್ಲ. ವರ್ಷಕ್ಕೆ ಒಂದು ಸಲ ಗೊಬ್ಬರ ಹಾಕಿ ಗಿಡಗಳ ಬುಡಕ್ಕೆ ಮಣ್ಣು ಹಾಕಿದರೆ ತಾನಾಗಿಯೇ ಬೆಳೆಯುತ್ತದೆ. ರೈತರು ಮತ್ಯಾವುದೇ ಹಣ ವ್ಯಯಸುವ ಅವಶ್ಯಕತೆ ಇಲ್ಲವೆನ್ನುತ್ತಾರೆ ರಾಮಚಂದ್ರ ಭಟ್ಟ. ಬೇಸಿಗೆಯಲ್ಲಿ ಮೂರು ವರ್ಷಗಳವರೆಗೆ ಗಿಡಗಳಿಗೆ ನೀರು ಕೊಡಬೇಕಾಗುತ್ತದೆ. 3 ವರ್ಷ ಕಳೆದ ನಂತರ ನೀರು ಕೊಡುವ ಅವಶ್ಯಕತೆಯಿಲ್ಲ.

ಎರಡುಕಾಲು ಎಕರೆ ಜಮೀನಿನಲ್ಲಿ ಅರಣ್ಯದಲ್ಲಿ ಬೆಳೆಯುವ ಮುರುಗಲು, ಮುತ್ತುಗಲ, ಅಂಡಮುರುಗಲು, ಸಿವಣೆ, ಸಾಗವಾನಿ, ಚರಣಿಗೆ, ನಂದಿ, ಹೆಬ್ಬಲಸು ವಾಣೆ, ಮತ್ತಿ, ಬೀಟೆ, ಕೆಂದಾಳ, ಬೆನ್ನುಹೊನ್ನೆ, ಸುರಹೊನ್ನೆ, ಹೊಳೆಮತ್ತಿ, ನೇರಲು, ಗುಳಮಾವು, ಕಾಸಗ, ಸಪ್ಪುಗೊದ್ದಲು, ಹೊಳೆಪಂಸ, ಬಿಲ್ಲಕಂಬಿ, ಬಿಲ್ಲ ಹ್ಯಾಗ ಹಾಗೂ ಔಷಧಿ ಸಸ್ಯಗಳಾದ ಅಂಕೋಲೆ, ಮಾಪ, ಏಕನಾಯಕ, ಅಶೋಕಾ ರಕ್ತಚಂದನ, ಆಪತ್ತಿ ಹಾಗೂ ಸ್ವತಃ ಕಸಿ ಮಾಡಿ ಬೆಳೆಸಿದ ಚಿಕ್ಕು, ಮಾವು ಗೇರು ಸಸಿಗಳನ್ನು ಬೆಳೆಸಲಾಗಿದ್ದು ಕೆಲವು ಹಣ್ಣಿನ ಗಿಡಗಳು ಫಲ ನೀಡುತ್ತಿವೆ.

ನಾವು ಗಿಡ ನೆಟ್ಟು ಬೆಳೆಸಿದರೆ ಮುಂದೆ ಅದೇ ಗಿಡಗಳು ನಮ್ಮನ್ನು ಪೊರೆಯುತ್ತವೆ. ಸಿಗುವ ಹಣ್ಣು ಹಂಪಲುಗಳು ಆರ್ಥಿಕತೆಗೆ ಶಕ್ತಿ ನೀಡುತ್ತವೆ. ಜೊತೆಗೆ ಬೇಸಿಗೆಯಲ್ಲಿ ಸಿಗುವ ದೆರಕೆಲೆಗಳು ತೋಟಕ್ಕೆ ಗೊಬ್ಬರವಾಗುತ್ತದೆ. ಪ್ರತೀದಿನ 2 ತಾಸುಗಳನ್ನು ಈ ಗುಡ್ಡದಂತಹ ಸ್ಥಳದಲ್ಲಿ ಗಿಡಗಳ ಆರೈಕೆಗೆಯಲ್ಲಿ ಕಳೆಯುವದರಿಂದ ಮನಸ್ಸಿಗೆ ನೆಮ್ಮದಿ ಮತ್ತು ಆರೋಗ್ಯವೂ ದೊರೆಯುತ್ತಿದೆ ಎಂದು ನುಡಿಯುವ ರಾಮಚಂದ್ರ ಭಟ್ಟರು ಸೆಲ್ಕೋ ಸೋಲಾರ್‌ ಕಂಪನಿಯಲ್ಲಿ ಇನ್ನುಳಿದ ಸಮಯದಲ್ಲಿ ಉದ್ಯೋಗವನ್ನೂ ಮಾಡುತ್ತಾರೆ.

ಅರಣ್ಯ ಇಲಾಖೆ ಗಿಡಗಳನ್ನು ಒದಗಿಸುವ ಜೊತೆಗೆ ಮೂರು ವರ್ಷಗಳವರೆಗೆ ಗಿಡ ಬೆಳೆಸಲು ಸ್ವಲ್ಪಮಟ್ಟಿನ ಅನುದಾನವನ್ನೂ ನೀಡುತ್ತದೆ. ಹೀಗೆ ಪ್ರತಿಯೊಬ್ಬ ರೈತರು ತಮ್ಮ ಜಮೀನಿನಲ್ಲಿ ಈ ರೀತಿಯ ಸಸಿಗಳನ್ನು ಬೆಳೆಸುವುದರ ಮೂಲಕ ಮುಂದಿನ ಪೀಳಿಗೆಗೆ ಕಾಡಿನಲ್ಲಿ ಬೆಳೆಯುವ ಮರಗಳ ಹಾಗೂ ದಿನನಿತ್ಯ ಬೇಕಾಗುವ ಔಷಧಿ ಸಸ್ಯಗಳನ್ನು ಕಾಯ್ದಿರಿಸುವಿಕೆಯಿಂದ ಆರ್ಥಿಕ ಸದೃಢತೆ ಪಡೆಯುವದರ ಜೊತೆಗೆ ಮುಂದಿನ ಸಮಾಜಕ್ಕೆ ನಮ್ಮ ಕೊಡುಗೆಯನ್ನೂ ನೀಡಿದಂತಾಗುತ್ತದೆ.

ಮುಂದಿನ ಪೀಳಿಗೆಗೆ ಹಲವು ಔಷಧ ಸಸ್ಯಗಳು ಮತ್ತು ಕೆಲವು ವಿಶೇಷ ಜಾತಿಯ ಮರಗಳು ಕಾಣಲೂ ಸಿಗಲಾರದು. ಅದಕ್ಕಾಗಿ ನಾನು ಹಲವು ವಿಶೇಷ ಗಿಡಗಳನ್ನು ನೆಟ್ಟು ಬೆಳೆಸುವ ಯೋಚನೆ ಮಾಡಿದ್ದೇನೆ. ಹಲವು ಪ್ರಬೇಧದ ಗಿಡಗಳು ಮತ್ತು ಅವುಗಳ ಪ್ರಯೋಜನವನ್ನು ಗೊತ್ತಿಲ್ಲದವರಿಗೆ ತಿಳಿಸುವ ಉದ್ದೇಶದಿಂದ ನನ್ನ ಮಾಲಕಿ ಜಮೀನಿನಲ್ಲಿಯೇ ಅರಣ್ಯ ಬೆಳೆಸಿದ್ದೇನೆ. ಇದಕ್ಕೆ ಅರಣ್ಯ ಇಲಾಖೆಯೂ ಉತ್ತಮವಾಗಿ ಸ್ಪಂದಿಸಿದೆ.
•ರಾಮಚಂದ್ರ ಭಟ್ಟ, ಹೆಬ್ಳೇಕೇರಿ

•ಕೆ. ದಿನೇಶ ಗಾಂವ್ಕರ್‌

ಟಾಪ್ ನ್ಯೂಸ್

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shirur landslide; Green signal for National highway traffic in three or four days?

Shirur landslide; ರಾ.ಹೆದ್ದಾರಿ ಸಂಚಾರಕ್ಕೆ ಮೂರ್ನಾಲ್ಕು ದಿನಗಳಲ್ಲಿ ಗ್ರೀನ್ ಸಿಗ್ನಲ್ ?

Shirur Landslide; ನದಿಯಾಳದ ಕಾರ್ಯಾಚರಣೆಗೆ ನದಿ ನೀರಿನ ವೇಗ ಅಡ್ಡಿ

Shirur Landslide; ನದಿಯಾಳದ ಕಾರ್ಯಾಚರಣೆಗೆ ನದಿ ನೀರಿನ ವೇಗ ಅಡ್ಡಿ

1-ccc-aa

Shiruru hill collapse; 10 ದಿನದಿಂದ ಇಲ್ಲೇ ಇದ್ದೇನೆ : ಟೀಕೆಗಳಿಗೆ ಶಾಸಕ ಸೈಲ್‌ ಬೇಸರ

1–eewr-aa-aa

Shiruru hill collapse; ಮಣ್ಣು ತೆಗೆಯುವ ಕಾರ್ಯಾಚರಣೆ ವೇಳೆ ಸಿಕ್ಕ ಹೋಟೆಲ್ ಅವಶೇಷಗಳು

1–eewr-aa

Shiruru hill collapse; ನದಿಯ ನಾಲ್ಕು ಕಡೆ ಅವಶೇಷಗಳು ಬೆಳಕಿಗೆ:ಇಂದ್ರಬಾಲನ್‌ ನಂಬಿಯಾರ್

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.