ಪ್ರವಾಸೋದ್ಯಮ ಚಿವುಟುತ್ತಿರುವ ನೌಕರಶಾಹಿ
ಮದುವೆಯ ಮೊದಲಿನ ಚಿತ್ರೀಕರಣಕ್ಕೂ ಸರ್ಕಾರದ ನಿರ್ಬಂಧ
Team Udayavani, Apr 21, 2022, 9:44 AM IST
ಹೊನ್ನಾವರ: ನೆರೆಯ ಕೇರಳ, ಗೋವಾಗಳಲ್ಲಿ ಮಾತ್ರವಲ್ಲ ದಕ್ಷಿಣಕನ್ನಡದಲ್ಲೂ ಪ್ರವಾಸೋದ್ಯಮ ಅಪೂರ್ವ ಬೆಳವಣಿಗೆ ಕಂಡಿರುವಾಗ ಜಿಲ್ಲೆಯಲ್ಲಿ ಇತ್ತೀಚಿನ ವರ್ಷ ಚಿಗುರುತ್ತಿರುವ ಪ್ರವಾಸೋದ್ಯಮವನ್ನು ಚಿವುಟುವ ಕೆಲಸ ನೌಕರಶಾಹಿಯಿಂದ ನಡೆಯುತ್ತಿದೆ.
25 ಇಲಾಖೆಗಳ ಎನ್ಒಸಿ ನೆಪವೊಡ್ಡಲಾಗುತ್ತಿದೆ. ಜಲಸಾಹಸ ಕ್ರೀಡೆಯಲ್ಲಿ ಒಂದು ಅಪಘಾತ ನಡೆದರೆ ಆ ಕ್ರೀಡೆಯನ್ನೇ ನಿಷೇಧಿಸುವ ಕೆಲಸ ಕಾಳಿದಂಡೆಯಲ್ಲಿ ನಡೆದಿದೆ. ತಪ್ಪಿದ್ದರೆ ತಿದ್ದಿ, ದಂಡ ಹಾಕಿ, ನೂರಾರು ಜನರ ಜೀವನಾಧಾರ ಆಗುವ ಪ್ರವಾಸೋದ್ಯಮದ ಚಿಗುರನ್ನು ಚಿವುಟುವುದನ್ನು ನೋಡುತ್ತ ಕುಳಿತುಕೊಂಡಿರುವ ಜನಪ್ರತಿನಿಧಿಗಳು ಎಚ್ಚರಾಗಿ ಎಂದು ಹೇಳಬೇಕಾಗಿದೆ.
ಮೊಸಳೆ ಪಾರ್ಕ್ನಿಂದ ಒಂದು ಮೊಸಳೆ ನಗರಕ್ಕೆ ಬಂದರೆ ಪಾರ್ಕ್ನ ಅಗತ್ಯವನ್ನೇ ಪ್ರಶ್ನಿಸುವುದು ಸರಿಯಲ್ಲ. ಮುರ್ಡೇಶ್ವರದಲ್ಲಿ ಸ್ಕೂಬಾ ಡೈವಿಂಗ್ ನಡೆದಿದೆ. ಜಲಸಾಹಸ ಕ್ರೀಡೆಗಳು ಎಷ್ಟೇ ಸುರಕ್ಷಿತ ಕ್ರಮಕೈಗೊಂಡರೂ ಅಪಾಯದ ಸಾಧ್ಯತೆ ಇದ್ದೇ ಇರುತ್ತದೆ. ಇದು ಗೊತ್ತಿದ್ದೇ ಪ್ರವಾಸಿ ಯುವಕರು ಸಾಹಸಕ್ಕಿಳಿಯುತ್ತಾರೆ.
ದಾಂಡೇಲಿ ಘಟನೆ ನಂತರ ಶರಾವತಿಯಲ್ಲಿ ನಡೆಯುವ ಮದುವೆಯ ಮೊದಲಿನ ಚಿತ್ರೀಕರಣಕ್ಕೂ ನಿರ್ಬಂಧ ವಿಧಿಸಲಾಗಿದೆ. ನೆರೆ ಬಂದ ಕಾಲದಲ್ಲೂ ಯಾರ ಜೀವಕ್ಕೂ ಅಪಾಯ ಮಾಡದ ಶರಾವತಿ ಈಗ ಪ್ರಶಾಂತವಾಗಿ ಹರಿಯುತ್ತಿರುವಾಗ ಅಪಾಯ ಮಾಡುವುದು ಸಾಧ್ಯವೇ? ಏಕಾಏಕಿ ಪ್ರಿ ವೆಡ್ಡಿಂಗ್ ಶೂಟಿಂಗ್ನ್ನು ನಿಲ್ಲಿಸಿದ ಕಾರಣ ಉತ್ತಮ ವ್ಯವಹಾರ ನಡೆಸುತ್ತಿದ್ದ ಲಾಡ್ಜ್ಗಳು, ಬೋಟ್ ಮಾಲಕರು ತೊಂದರೆಗೊಳಗಾಗಿದ್ದಾರೆ.
ಪ್ರವಾಸೋದ್ಯಮ ಇಲಾಖೆಯೇ ನಡೆಸುವ ಬ್ಲೂ ಫ್ಲ್ಯಾಗ್ ಕಿರೀಟ ಹೊತ್ತ ಇಕೋಬೀಚ್ ಬಳಿಯ ಕಡಲ ತೀರವೇ ಸುರಕ್ಷತಾ ನಿಯಮ ಪಾಲಿಸದಿರುವಾಗ ಖಾಸಗಿಯವರಿಗೆ ಅಧಿಕಾರಿಗಳು ಅತಿನಿರ್ಬಂಧ ಹೇರುವುದು ಸರಿಯಲ್ಲ. ಏಪ್ರಿಲ್, ಮೇ ತಿಂಗಳಲ್ಲಿ ಹೆದ್ದಾರಿ ಮೇಲೆ ಸಂಚಾರ ಎರಡು ಪಟ್ಟು ಹೆಚ್ಚುತ್ತದೆ. ಅಪಘಾತಗಳೂ ಹೆಚ್ಚುತ್ತವೆ. ಅಂದ ಮಾತ್ರಕ್ಕೆ ಹೆದ್ದಾರಿಯನ್ನೇ ಬಂದ್ ಮಾಡಲು ಸಾಧ್ಯವಿಲ್ಲ.
ಹಾಗೆಯೇ ಸಾಹಸ ಜಲಕ್ರೀಡೆ ನಡೆಯುವ ಸ್ಥಳಗಳಲ್ಲಿ ಮುರ್ಡೇಶ್ವರ, ಧಾರೇಶ್ವರ, ಗೋಕರ್ಣ, ಕಾರವಾರ ಮೊದಲಾದ ಕಡಲತಡಿಗಳಲ್ಲಿ ನದಿ ಒಳನಾಡುಗಳಲ್ಲಿ ಪ್ರವಾಸಿಗರು ಬಹುಸಂಖ್ಯೆಯಲ್ಲಿ ಓಡಾಡುವುದರಿಂದ ಅವರ ಸುರಕ್ಷತೆಗೆ ಕಾವಲುಗಾರರನ್ನು ಪ್ರವಾಸೋದ್ಯಮ ಇಲಾಖೆ ನೇಮಿಸಬೇಕೇ ವಿನಃ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಪ್ರವಾಸೋದ್ಯಮವನ್ನು ಚಿವುಟಿ ಹಾಕುವುದು ಸರಿಯಲ್ಲ. ಎಲ್ಲೂ ಇಲ್ಲದ ನಿರ್ಬಂಧಗಳನ್ನು ಜಿಲ್ಲೆಯಲ್ಲಿ ಹೇರಿದರೆ ಯಾರೂ ಪ್ರವಾಸಕ್ಕೆ ಬರಲಾರರು. ಇಲಾಖೆಗಳು ಗಮನಿಸಲಿ.
-ಜೀಯು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
Kumta: ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕೀಯ ಇರಬಾರದು: ಡಿ.ಕೆ.ಶಿವಕುಮಾರ್
ಪಾದುಕೆ ದರ್ಶನ: ಸಂಭ್ರಮ ಹೆಚ್ಚಿಸಿದ ಮಂತ್ರಾಲಯ ಶ್ರೀಗಳ ಸಂಚಾರ
Karnataka Politics: ಜೆಡಿಎಸ್ ಸರ್ವನಾಶ, ಒಡೆದು ಮನೆಯಂತಾದ ಬಿಜೆಪಿ : ಡಿ.ಕೆ ಶಿವಕುಮಾರ್
Google Map: ಪೂರ್ಣಗೊಳ್ಳದ ಸೇತುವೆ… ಗೂಗಲ್ ಮ್ಯಾಪ್ ನಂಬಿ ಪರದಾಡಿದ ವಾಹನ ಸವಾರರು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ