ಮಾಜಾಳಿಯಿಂದ ಗೊರ್ಟೆಯ ರಾಷ್ಟ್ರೀಯ ಹೆದ್ದಾರಿ ಕುರಿತು ಸರಕಾರಕ್ಕೆ ವರದಿ: ಡಿಸಿ
Team Udayavani, Jul 15, 2023, 8:42 PM IST
ಭಟ್ಕಳ: ಕಾರವಾರದ ಮಾಜಾಳಿಯಿಂದ ಭಟ್ಕಳದ ಗೊರ್ಟೆ ತನಕದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ಪರಿಸೀಲಿಸಿದ್ದು ವಿವರವಾದ ವರದಿಯನ್ನು ಸರಕಾರಕ್ಕೆ ಕಳುಹಿಸಲಾಗುವುದು ಎಂದು ಭಟ್ಕಳದಲ್ಲಿ ಉತ್ತರಕನ್ನಡ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಮ್ಮನ್ನು ಭೇಟಿಯಾದ ನಾಗರಿಕರಿಗೆ ತಿಳಿಸಿದರು.
ಬೆಳಗ್ಗೆ ಮಾಜಾಳಿಯಿಂದ ವಿವಿಧ ಇಲಾಖೆಯ ಅಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಐ.ಆರ್.ಬಿ. ಅಧಿಕಾರಿಗಳು, ಲೋಕೋಪಯೋಗಿ ಇಲಾಖೆಯ ಅಭಿಯಂತರರು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡದೊಂದಿಗೆ ಪ್ರವಾಸ ಮಾಡಿದ್ದು ಪ್ರವಾಸದುದ್ದಕ್ಕೂ ಜನರು ಬಂದು ತಮ್ಮ ತಮ್ಮ ಅಹವಾಲುಗಳನ್ನು ಹೇಳಿಕೊಂಡಿದ್ದಾರೆ. ಅವರ ಅಭಿಪ್ರಾಯ, ಅಧಿಕಾರಿಗಳ ಅಭಿಪ್ರಾಯ ಹಾಗೂ ಎನ್.ಎಚ್.ಎ.ಐ. ಮತ್ತು ಐ.ಆರ್.ಬಿ. ಅಧಿಕಾರಿಗಳ ಅಭಿಪ್ರಾಯವನ್ನು ಕ್ರೋಢೀಕರಿಸಿ ವರದಿಯನ್ನು ತಯಾರಿಸಿ ಕಳುಹಿಸುದಾಗಿಯೂ ಜಿಲ್ಲಾಧಿಕಾರಿ ತಿಳಿಸಿದರು.
ಮುಖ್ಯವಾಗಿ ಭಟ್ಕಳದ ಸಮಸ್ಯೆಗಳನ್ನು ನಾಗರೀಕರೊಂದಿಗೆ ಮುಕ್ತವಾಗಿ ಚರ್ಚಿಸಿದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಎಲ್ಲರ ಅಹವಾಲುಗಳನ್ನು ಆಲಿಸಿದರು. ರಾಷ್ಟ್ರೀಯ ಹೆದ್ದಾರಿಯಿಂದ ನಾಗರೀಕರಿಗೆ ತೊಂದರೆಯಾಗಿರುವ ಬಗ್ಗೆ ತಿಳಿದಿದ್ದೇನೆ. ಕಾರವಾರದ ಮಾಜಾಳಿಯಿಂದ ಬೆಳಕೆಯ ತನಕ ಐ.ಆರ್.ಬಿ.ಯವರ ಕಾಮಗಾರಿಯಿಂದ ಎಲ್ಲೆಲ್ಲಿ ಅಪಘಾತಗಳು ಸಂಭವಿಸಿದೆ ಎನ್ನುವುದನ್ನು ಕೂಡಾ ಅರಿತಿದ್ದೇನೆ. ಐ.ಆರ್.ಬಿ.ಯವರು ಹೆದ್ದಾರಿ ಕಾಮಗಾರಿ ಮುಕ್ತಾಯವಾಗಿದ್ದು ಕೇವಲ ೭ ಕಿ.ಮಿ. ರಸ್ತೆ ಮಾಡುವುದು ಬಾಕಿ ಎಂದು ವರದಿ ಕೊಟ್ಟಿದ್ದಾರೆ. ತನ್ನ ಪರಿಶೀಲನೆಯ ವೇಳೆಯಲ್ಲಿ ಅವುಗಳನ್ನು ಕೂಡಾ ಗಣನೆಗೆ ತೆಗೆದುಕೊಂಡಿದ್ದು ಕೇವಲ ರಸ್ತೆ ಮಾಡಿಕೊಟ್ಟರೆ ಅದು ಪೂರ್ಣ ಎಂದು ಹೇಳಲಾಗದು. ಅಗತ್ಯದ ಬೀದಿ ದೀಪ, ರಸ್ತೆಯ ಎರಡೂ ಕಡೆಗಳಲ್ಲಿ ಇರುವ ಸರ್ವಿಸ್ ರಸ್ತೆ, ಚರಂಡಿ ವ್ಯವಸ್ಥೆಯಿದ್ದಲ್ಲಿ ಚರಂಡಿ ಮಾಡಿದ ನಂತರವಷ್ಟೇ ಅದನ್ನು ಪೂರ್ಣ ಎಂದು ಹೇಳಲು ಸಾಧ್ಯ ಎಂದರು. ಅದನ್ನೆಲ್ಲ ಗಣನೆಗೆ ತೆಗೆದುಕೊಂಡಿದ್ದು ವರದಿಯಲ್ಲಿ ಸೇರಿಸುವುದಾಗಿಯೂ ಹೇಳಿದರು. ಹಲವು ಕಡೆಗಳಲ್ಲಿ ಬಸ್ ನಿಲ್ದಾಣಗಳನ್ನು ಎಲ್ಲಿ ಇದೆಯೋ ಅಲ್ಲಿ ಮಾಡಿಲ್ಲ, ಬೇರೆ ಬೇರೆ ಕಡೆಗಳಲ್ಲಿ ಮಾಡಿದ್ದರಿಂದ ಕೂಡಾ ಸಮಸ್ಯೆಯಾಗಿದೆ ಎಂದರು.
ಭಟ್ಕಳ ನಗರದಲ್ಲಿ ಮಳೆಗಾಲದಲ್ಲಿ ತೀವ್ರ ತೊಂದರೆಯಾಗುವುದನ್ನು ಅರಿತಿದ್ದೇನೆ. ಹೆದ್ದಾರಿ ಕಾಮಗಾರಿ ತುಂಬಾ ನಿದಾನಗತಿಯಲ್ಲಿ ಆಗಿದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಅಲ್ಲದೇ ಅನೇಕ ಮನೆಗಳಿಗೆ ನೀರು ನುಗ್ಗಿದ್ದು ಕೂಡಾ ಇದೇ ರಸ್ತೆ ಕಾಮಗಾರಿಯಿಂದ ಎಂದ ಅವರು ಐ,ಆರ್.ಬಿ. ಅಧಿಕಾರಿಗಳಿಗೆ ಶೀಘ್ರ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ತಿಳಿಸಿದರು.
ಭಟ್ಕಳದಲ್ಲಿ ಹೆದ್ದಾರಿಯ ಮೇಲೆ ಇನ್ನು ಮುಂದೆ ನೀರು ನಿಲ್ಲುವುದಕ್ಕೆ ಅವಕಾಶ ಕೊಡಬಾರದು ಎಂದು ಖಡಕ್ ಆಗಿ ಹೇಳಿದ ಅವರು ಸೋಮವಾರವೇ ಪುರಸಭೆಯಲ್ಲಿ ಸ್ಥಳೀಯರು, ಅಧಿಕಾರಿಗಳು, ಐ.ಆರ್.ಬಿ. ಇಂಜಿನಿಯರ್ ಸಭೆ ನಡೆಸಿ ನಗರದಲ್ಲಿ ಚರಂಡಿ ವ್ಯವಸ್ಥೆ ಹೇಗೆ ಆಗಬೇಕು, ಯಾವ ಯಾವ ಕಡೆಗಳಲ್ಲಿ ನೀರು ಹರಿದು ಹೋಗಬೇಕು ಎನ್ನುವುದನ್ನು ನಿರ್ಧರಿಸಿ ಮಾಸ್ಟರ್ ಪ್ಲಾನ್ ತಯಾರಿಸುವಂತೆ ಹೇಳಿದ ಅವರು ಸೋಮವಾರ ಕಾರವಾರದಿಂದ ಕೆ.ಯು.ಡಿ.ಐ.ಸಿ.ಇಂಜಿನಿಯರ್ ಅವರನ್ನು ಕೂಡಾ ಕಳುಹಿಸುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ಸಹಾಯಕ ಆಯುಕ್ತೆ ಡಾ. ನಯನಾ, ರಾ.ಹೆ.ಅಭಿವೃದ್ಧಿ ಪ್ರಾಧಿಕಾರದ ಪ್ರೊಜೆಕ್ಟ್ ಡೈರೆಕ್ಟರ್, ನಾಗರೀಕರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ
MUST WATCH
ಹೊಸ ಸೇರ್ಪಡೆ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ