ಶಿರಸಿ: ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ನಾಲ್ವರು ಕಳ್ಳರ ಬಂಧನ
Team Udayavani, Sep 26, 2022, 9:44 PM IST
ಶಿರಸಿ: ಮನೆಯಲ್ಲಿ ಯಾರೂ ಇಲ್ಲದ ಹೊತ್ತು ನೋಡಿ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ ನಾಲ್ವರು ಖದೀಮರನ್ನು ಬನವಾಸಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಈ ಕೃತ್ಯದಲ್ಲಿ ಶಾಮೀಲಾದ ನಾಲ್ವರೂ ಬನವಾಸಿಯವರೇ ಆಗಿದ್ದಾರೆ. ಜನತಾ ಕಾಲೋನಿಯ ಕೂಲಿ ಕೆಲಸ ಮಾಡುತ್ತಿದ್ದ ಮಹಮ್ಮದ್ ಕೈಫ್ ಶಿರಗೋಡ, (19), ವಿದ್ಯಾರ್ಥಿಯಾದ ವಿಶ್ವ ಮಹೇಶ ಪಾವಸ್ಕರ, (21) ಯಾಸೀನ್ ಬಾಷಾಸಾಬ್ ( 18 ),ಕೃಷಿ ಕೆಲಸ ಮಾಡುವ ರಿಯಾಜ್ ಇಕ್ಬಾಲ್ ಚೌಧರಿ, (19) ಬಂಧಿತರಾಗಿದ್ದಾರೆ.
ಇರವರು ಸೆ.7 ರಂದು ಬನವಾಸಿಯ ಖಲೀಲ ಅಬ್ದುಲ್ ಅಜೀಂ ಶೇಖ್ ಅವರ ಮನೆಯಲ್ಲಿ ಕಳ್ಳತನ ನಡೆಸಿದ್ದರು. ಮನೆಯಲ್ಲಿಟ್ಟಿದ್ದ ಸುಮಾರು 2.5 ಲಕ್ಷ ರೂ. ನಗದು ಹಣ ಹಾಗೂ 4 ಗ್ರಾಂ ತೂಕದ ಬಂಗಾರದ ಉಂಗುರ ಕದ್ದಿದ್ದರು.
ಆರೋಪಿಗಳ ಪೈಕಿ ಮಹಮ್ಮದ್ ಕೈಫ್ ಬನವಾಸಿಯ ಸುವರ್ಣಾ ಮಾಲತೇಶ ಅವರ ಮನೆಯಲ್ಲಿಯು ಸಹ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ಎಸ್ಪಿ ಸುಮನ ,ಡಿಎಸ್ಪಿ ರವಿ ಡಿ ನಾಯ್ಕ, ಸಿಪಿಐ ರಾಮಚಂದ್ರ ನಾಯಕ ಸಿಪಿಐ ಶಿರಸಿ ವೃತ್ತ ಅವರ ನೇತೃತ್ವ ದಲ್ಲಿ ಪಿಎಸ್ಐ ಹಣಮಂತ ಬಿರಾದಾರ ಹಾಗೂ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ
Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್
Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ
Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ