ಕಾರವಾರ: ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರ ಬಂಧನ
Team Udayavani, Apr 23, 2022, 9:56 PM IST
ಕಾರವಾರ: ನಗರದ ಬೀಚ್ ನಲ್ಲಿನ ಅಜ್ವಿ ಹೋಟೆಲ್ ಹಿಂಭಾಗದಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಯುವಕರನ್ನು ನಗರಠಾಣೆ ಪಿಎಸ್ ಐ ಸಂತೋಷ ಕುಮಾರ್ .ಎಂ. ಅವರ ತಂಡ ಬಂಧಿಸಿದೆ .
ಶಿರವಾಡದ ಬಂಗಾರಪ್ಪ ನಗರ ನಿವಾಸಿ ರಾಜೇಶ್ .ಆರ್.ವಡ್ಡರ್ (27) , ಜಾಂಬಾ ನಿವಾಸಿ ಮಣಿಕಂಠ ಬಾಬು ರಾಠೋಡ್ (18) ಗಾಂಜಾ ಮಾರಾಟದಲ್ಲಿದ್ದಾಗ ಗಾಂಜಾ ಸಹಿತ ಬಂಧಿಸಲಾಗಿದೆ. ಶನಿವಾರ ಅಪರಾಹ್ನ 3.15 ರ ಸಮಯಕ್ಕೆ ಖಚಿತಮಾಹಿತಿ ಮೇರೆಗೆ ಈ ದಾಳಿ ನಡೆಯಿತು.
ಬಂಧಿತರಿಂದ 210 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ. 10 ಸಾವಿರ ಮೊತ್ತದ ಗಾಂಜಾ ಹಾಗೂ ಯಮಹಾ ಬೈಕ್ ನ್ನು ಪೊಲೀಸರು ವಶಕ್ಕೆ ಪಡೆದು ಎನ್ ಡಿಪಿಎಸ್ ಅಡಿ ಪ್ರಕರಣ ದಾಖಲಿಸಲಾಗಿದೆ. ಎಸ್ಪಿ ಸುಮನ್ ಪನ್ನೇಕರ್, ಅಡಿಶನಲ್ ಎಸ್ಪಿ ಬದರೀನಾಥ, ಡಿವೈಎಸ್ಪಿ ವೆಲೆಂಟೈನ್ ಡಿಸೋಸಾ, ಸಿಪಿಐ ಸಿದ್ದಪ್ಪ ಮಾರ್ಗದರ್ಶನ ನೀಡಿದ್ದರು. ಪೊಲೀಸ್ ಸಿಬ್ಬಂದಿ ರಾಜೇಶ್ , ಮಹೇಶ್ ನಾಯ್ಕ ,ರಾಘವೇಂದ್ರ ನಾಯ್ಕ, ಜಟ್ಟಿ ಎಂ.ನಾಯ್ಕ ,ಪಿಎಸ್ ಐ ಸಂತೋಷ ಅವರ ಜೊತೆ ದಾಳಿಯಲ್ಲಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್
Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ
Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ
Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ
Yallapur: ಸಾತೊಡ್ಡಿ ಜಲಪಾತದಲ್ಲಿ ಪ್ರವಾಸಿಗರ ಮೇಲೆ ಜೇನು ನೊಣಗಳ ದಾಳಿ