G-20 ಸಾಂಸ್ಕೃತಿಕ ಸಭೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಚಾಲನೆ
Team Udayavani, Jul 10, 2023, 12:07 PM IST
ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯಲ್ಲಿ ನಡೆಯುವ ಜಿ- 20 ಸಾಂಸ್ಕೃತಿಕ ಸಭೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಜು.10ರ ಸೋಮವಾರ ಚಾಲನೆ ನೀಡಿದರು.
ಹಂಪಿಯ ಇವಾಲ್ಯೂ ಬ್ಯಾಕ್ ಹೊಟೇಲ್ ನಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಸಭೆಯ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿದರು.
ಸಾಂಸ್ಕೃತಿಕ ಸಭೆ ಬಳಿಕ ಎರಡು ಸಭೆಗಳನ್ನು ನಡೆಸಲಿದ್ದಾರೆ. 4 ಗಂಟೆಯವರೆಗೆ ಸಭೆ ನಡೆಸಿ ಬಳಿಕ ಹಂಪಿಗೆ ಆಗಮಿಸಿ ವಿವಿಧ ರಾಷ್ಟ್ರಗಳ ಪ್ರತಿನಿಧಿಗಳೊಂದಿಗೆ ಬಸವಣ್ಣ ಮಂಟಪದ ಬಳಿ ಸಂಜೆ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ವೀಕ್ಷಣೆ ಮಾಡಲಿದ್ದಾರೆ.