
ಗ್ರಾಪಂ ಚುನಾವಣೆ: ಶಾಂತಿಯುತ ಮತದಾನ
Team Udayavani, Dec 23, 2020, 7:14 PM IST

ಯಾದಗಿರಿ: ಜಿಲ್ಲೆಯ ಶಹಾಪುರ, ಸುರಪುರ ಹಾಗೂ ಹುಣಸಗಿ ತಾಲೂಕಿನ ಗ್ರಾಪಂಗಳಿಗೆ ಮಂಗಳವಾರ ಮೊದಲಹಂತದ ಚುನಾವಣಾ ಮತದಾನವು ಶಾಂತಿಯುತವಾಗಿ ನಡೆಯಿತು.
ಶಹಾಪುರ ತಾಲೂಕಿನ 22 , ಸುರಪುರ ತಾಲೂಕಿನ 20 ಹಾಗೂ ಹುಣಸಗಿ 17 ಗ್ರಾಪಂಗಳ ವ್ಯಾಪ್ತಿಯಲ್ಲಿ ನಡೆದಮತದಾನದಲ್ಲಿ ಗ್ರಾಮಸ್ಥರು ತಮ್ಮ ಹಕ್ಕುನ್ನು ಚಲಾಯಿಸಿದರು. ಸುಮಾರು 73.85 ರಷ್ಟು ಮತದಾನವಾಗಿದೆ. ಕೋವಿಡ್ ಹಿನ್ನೆಲೆ ಮತದಾರರಿಗೆ ಥರ್ಮಲ್ ಸ್ಕ್ರೀನಿಂಗ್, ಮಾಸ್ಕ್, ಸ್ಯಾಮಿಟೈಸರ್ ಬಳಸಿ ಸಾಮಾಜಿಕ ಅಂತರದೊಂದಿಗೆ ಮತದಾನ ನಡೆಯಿತು.
ಬೆಳಗ್ಗೆ ಮಂದಗತಿಯಲ್ಲಿ ಸಾಗಿತ ಮತದಾನ ಸಮಯ ಏರುತ್ತಲೇ ಶೇಕಡಾವಾರು ಮತದಾನವೂ ಹೆಚ್ಚಾಳವಾಗುತ್ತಿರುವುದು ಕಂಡು ಬಂತು. ಬೆಳಗ್ಗೆ 7ರಿಂದ 9ರವರೆಗೆ ಸುರಪುರ ತಾಲೂಕು-ಶೇ.10.1, ಶಹಾಪುರತಾಲೂಕು-ಶೇ.8.92 ಹಾಗೂ ಹುಣಸಗಿ ತಾಲೂಕಿನಲ್ಲಿ ಶೇ.9.6 ದಾಖಲಾಗಿತ್ತು.
ಬೆಳಗ್ಗೆ 11 ಗಂಟೆಯ ವೇಳೆಗೆ ಸುರಪುರ-ಶೇ.29.35, ಶಹಾಪುರ-ಶೇ.27.3 ಹಾಗೂ ಹುಣಸಗಿ ತಾಲೂಕು ವ್ಯಾಪ್ತಿಯಲ್ಲಿ ಶೇ.23.06 ಹಕ್ಕು ಚಲಾವಣೆಗೊಂಡು ಮೂರು ತಾಲೂಕುಗಳ ಗ್ರಾಪಂಗಳ ವ್ಯಾಪ್ತಿಯಲ್ಲಿ ಶೇ. 26.57 ಮತದಾನವಾಗಿತ್ತು.
ಇನ್ನು ಮಧ್ಯಾಹ್ನ 1 ಗಂಟೆಯ ಹೊತ್ತಿಗೆ ಸುರಪುರ-ಶೇ.49.87, ಶಹಾಪುರ-ಶೇ.47.08 ಹಾಗೂಹುಣಸಗಿ ತಾಲೂಕಿನಲ್ಲಿ ಶೇ.28.28 ಸೇರಿದಂತೆ ಒಟ್ಟಾರೆ ಮೂರು ತಾಲೂಕುಗಳ ಗ್ರಾಪಂಗಳ ವ್ಯಾಪ್ತಿಯಲ್ಲಿ ಶೇ. 41.75 ಮತದಾನವಾಗಿತ್ತು. ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಸುರಪುರ ಶೇ.58.91, ಶಹಾಪುರ ಶೇ.44.19 ಹಾಗೂಹುಣಸಗಿ ತಾಲೂಕು – ಶೇ.61.37 ಒಟ್ಟಾರೆ ಮೂರುತಾಲೂಕುಗಳ ಗ್ರಾಪಂಗಳ ವ್ಯಾಪ್ತಿಯಲ್ಲಿ 54.83 ರಷ್ಟು ಮತದಾನವಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆ 1 ಸಾವಿರ ಸ್ಥಾನಗಳಿಗೆ 2444 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದರು.
ಮತಗಟ್ಟೆ ಕೇಂದ್ರಕ್ಕೆ ಡಿಸಿ ಭೇಟಿ: ಶಹಾಪುರ ತಾಲೂಕಿನ ಮದ್ದರಕಿ, ಮೂಡಬುಳ ಗ್ರಾಪಂಯಲ್ಲಿ ಸ್ಥಾಪಿಸಲಾಗಿರುವ ಮತಗಟ್ಟೆಗಳಿಗೆ ಡಿಸಿ ಡಾ.ರಾಗಪ್ರಿಯ ಭೇಟಿ ನೀಡಿ ಮತದಾನದ ಪ್ರಕ್ರಿಯೆ ಪರಿಶೀಲಿಸಿದರು. ಶಹಾಪುರ ತಹಶೀಲ್ದಾರ ಮಹಿಬೂಬಿ, ನೋಡಲ್ ಅಧಿಕಾರಿ ರಾಜು ಸೇರಿದಂತೆ ಹಲವರಿದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Yadagiri; ಟೆಂಡರ್ ವಿಳಂಬ ಸಲ್ಲದು: ಅಧಿಕಾರಿಗಳಿಗೆ ಸಚಿವ ದರ್ಶನಾಪುರ ಎಚ್ಚರಿಕೆ

Yadgir ; 150 ಕೆಜಿ ಶ್ರೀಗಂಧ ಸಹಿತ ಆರೋಪಿ ಬಂಧನ: ಓರ್ವ ಆರೋಪಿ ಪರಾರಿ

ISIS ಉಗ್ರನಿಗೆ ಯಾದಗಿರಿ ನಂಟು..? ಉಗ್ರ ಸಂಘಟನೆಯೊಂದಿಗೆ ಶಹಾಪುರ ಯುವಕನ ಸಂಪರ್ಕ

Brutal; 5 ತಿಂಗಳ ಹಸುಗೂಸಿಗೆ ಹಾಲಿನಲ್ಲಿ ವಿಷ ಬೆರೆಸಿ ಕೊಂದ ಮಲತಾಯಿ!

Chandrayaan 3 :ನವಜಾತ ಶಿಶುಗಳಿಗೆ ವಿಕ್ರಂ, ಪ್ರಗ್ಯಾನ್ ಹೆಸರು!
MUST WATCH
ಹೊಸ ಸೇರ್ಪಡೆ

Kashmir Files, ಕೇರಳ ಸ್ಟೋರಿಯಂತಹ ಸಿನಿಮಾಗಳನ್ನು ನಾನು ನೋಡಲ್ಲ: ಖ್ಯಾತ ನಿರ್ದೇಶಕ ವಿಶಾಲ್

JDS ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡರೆ ಉಡ ಹೊಕ್ಕ ಮನೆಯಂತೆ… : ವೀರಪ್ಪ ಮೊಯ್ಲಿ

BJP-JDS ಮೈತ್ರಿ ಯಾರ “ಸಂತೋಷ”ಕ್ಕೆ?: ವಾಗ್ದಾಳಿ ವಿಡಿಯೋ ಹಂಚಿ ಕಾಂಗ್ರೆಸ್ ಟಾಂಗ್

BJP-JDS ಮೈತ್ರಿ ಬಗ್ಗೆ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಹೇಳಿದ್ದೇನು?

Cauvery ವಿಚಾರದಲ್ಲಿ ರಾಜ್ಯ ಸರಕಾರ ತಲೆ ಕೆಡಿಸಿಕೊಂಡಿರದಿರುವುದು ಅಕ್ಷಮ್ಯ:ವಿಜಯೇಂದ್ರ