ವಿದ್ಯುತ್ ಸಮಸ್ಯೆ ಸುಳಿಯಲ್ಲಿ ಗುರುಮಠಕಲ್
Team Udayavani, Apr 27, 2022, 12:45 PM IST
ಗುರುಮಠಕಲ್: ತಾಲೂಕಿನಾದ್ಯಂತ ವಿದ್ಯುತ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಮಸ್ಯೆಗೆ ಪರಿಹಾರವೇ ಇಲ್ಲವೇನೋ ಎಂಬಂತೆ ಜನರು ವಿದ್ಯುತ್ ಪೂರೈಕೆಯಲ್ಲಿ ಪದೇ ಪದೆ ಆಗುತ್ತಿರುವ ವ್ಯತ್ಯಯದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಜೋರಾಗಿ ಗಾಳಿ ಬಂದರೆ, ಬಿಸಿಲು ಇದ್ದರೂ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಇನ್ನು ಮಳೆ, ಗುಡುಗು ಸಿಡಿಲು ಬಂದರಂತೂ ಕೇಳುವುದೇ ಬೇಡ. ದಿನಪೂರ್ತಿ ವಿದ್ಯುತ್ ಸರಬರಾಜು ಇರುವುದಿಲ್ಲ. ದಿನಕ್ಕೆ ಹತ್ತಾರು ಬಾರಿ ಆಗಾಗ ವಿದ್ಯುತ್ ಕೈ ಕೊಡುವುದು ಬೇರೆ. ಇದು ಗುರುಮಠಕಲ್ ಜನರು ನಿತ್ಯ ಅನುಭವಿಸುತ್ತಿರುವ ಬವಣೆ.
ಬಿಲ್ ಮಾತ್ರ ಸರಿಯಾಗಿ ತೆಗೆದುಕೊಳ್ಳುತ್ತಾರೆ. ಕೆಲವೆಡೆ ಒಂದು ಸಾವಿರ ಬರುವಲ್ಲಿ ಎರಡು ಸಾವಿರ ರೂ. ಬಿಲ್ ಬರುತ್ತಿದೆ. ಆದರೆ ಕರೆಂಟ್ ಮಾತ್ರ ಸರಿಯಾಗಿ ಕೊಡುತ್ತಿಲ್ಲ. ಕೇಳಿದರೆ ಸರಿಯಾಗಿ ಉತ್ತರವನ್ನೂ ನೀಡುವುದಿಲ್ಲ ಎಂದು ಸುತ್ತಲಿನ ಗ್ರಾಮಸ್ಥರು ಆರೋಪಿಸುತ್ತಾರೆ.
ಮಳೆ ಬರುವುದಕ್ಕೆ ಮೊದಲೇ ಜೇಸ್ಕಾಂನವರು ವಿದ್ಯುತ್ ತೆಗೆಯುತ್ತಾರೆ. ಯಾವುದೋ ಕಟ್ಟಡಕ್ಕೆ ವಿದ್ಯುತ್ ಲೈನ್ ಎಳೆಯುವುದಕ್ಕೆ ಇಡೀ ಕಾಲೊನಿಯಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸುವುದು ಯಾಕೆ? ಹೇಳುವವರು, ಕೇಳುವವರು ಇಲ್ಲದಿರುವುದರಿಂದಲೇ ಇಲ್ಲಿನ ಜೆಸ್ಕಾಂ ನಿರ್ಲಕ್ಷ್ಯದಿಂದ ಕಾರ್ಯ ನಿರ್ವಹಿಸುತ್ತಿದೆ ಎಂದು ಸ್ಥಳೀಯರಾದ ಜ್ಞಾನೇಶ್ವರರೆಡ್ಡಿ ದಂತಾಪುರ ಆಕ್ರೋಶ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್ ನಿವಾಸಕ್ಕೆ ಬಂದ ಜಾಧವ್!
Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
Tragedy: ಹೋಳಿ ಆಚರಣೆ ಬಳಿಕ ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ಹೋದ ಯುವಕ ನೀರು ಪಾಲು
Yadagiri; ಒಂದೇ ಕೇಂದ್ರದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ತಾಯಿ-ಮಗ