ನಾಟಕ ಕಲೆ ಉಳಿಸಿ-ಬೆಳೆಸಿ: ಶಂಕರಗೌಡ
Team Udayavani, Mar 10, 2022, 2:50 PM IST
ಯಾದಗಿರಿ: ಇತ್ತೀಚಿನ ದಿನಮಾನಗಳಲ್ಲಿ ನಾಟಕಗಳು ನೋಡುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ನಾಟಕ ಕಲೆ ಉಳಿಸಿ, ಬೆಳೆಸಬೇಕಾದ ಅಗತ್ಯವಿದೆ ಎಂದು ಅಪರ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ ಹೇಳಿದರು.
ಅಬ್ಬೆತುಮಕೂರಿನಲ್ಲಿ ಶ್ರೀ ವಿಶ್ವಾರಾಧ್ಯರ ಜಾತ್ರಾ ಮಹೋತ್ಸವದ ಎರಡನೇ ದಿನದ ಕಾರ್ಯಕ್ರಮದಲ್ಲಿ ನಾಟಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಸಿನೆಮಾ, ಧಾರವಾಹಿಗಳ ಭರಾಟೆಯಲ್ಲಿ ನಾಟಕಗಳು ಅಳಿವಿನ ಅಂಚಿನಲ್ಲಿವೆ. ಇದು ಜೀವಂತ ಕಲೆಯಾಗಿದ್ದು, ಅದನ್ನು ಪೋಷಿಸಿಕೊಂಡು ಬಂದರೆ ಕಲಾವಿದರ ಬದುಕಿಗೆ ಆಸರೆಯಾಗಿ ನಿಂತಂತಾಗುತ್ತದೆ ಎಂದು ಹೇಳಿದರು.
ಡಾ| ವೀರೇಶ ಜಾಕಾ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಕೋವಿಡ್ ಮಹಾಮಾರಿ ಇಡಿ ಜಗತ್ತನ್ನು ತಲ್ಲಣಗೊಳಿಸಿತು. ಮೊದಲ ಮತ್ತು ಎರಡನೇ ಅಲೆಯಲ್ಲಿ ಅನೇಕ ಜನರು ಜೀವವನ್ನು ಕಳೆದುಕೊಂಡರು. ವಿಶ್ವಾರಾಧ್ಯರ ಕೃಪೆಯಿಂದ ಮೂರನೇ ಅಲೆಯಲ್ಲಿ ಯಾವುದೇ ಹಾನಿಯಾಗದಿರುವುದು ಒಳ್ಳೆಯ ಲಕ್ಷಣವೆಂದು ಹೇಳಿದರು.
ಪೀಠಾಧಿಪತಿಗಳಾದ ಡಾ| ಗಂಗಾಧರ ಸ್ವಾಮಿಗಳು ಮಾತನಾಡಿ, ನಾಟಕಗಳು ಜನತೆಗೆ ಉತ್ತಮ ಸಂದೇಶವನ್ನು ನೀಡಬಲ್ಲ ಪ್ರಬಲ ಮಾಧ್ಯಮವಾಗಿದೆ. ಅದರಲ್ಲಿಯೂ ಪೌರಾಣಿಕ ನಾಟಕಗಳು ಜನತೆಗೆ ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರಣೆ ನೀಡುತ್ತದೆ ಎಂದರು.
ಹಿರಿಯ ನ್ಯಾಯವಾದಿಗಳಾದ ಎಸ್.ಬಿ. ಪಾಟೀಲ, ಗಂಗಾಧರ ಆವಂಟಿ, ನೋಟರಿ ಎಸ್.ಬಿ.ನಾಯಕ, ವೈದ್ಯರಾದ ಡಾ| ಸಿ.ಎಂ. ಪಾಟೀಲ, ಡಾ| ಮಹಾದೇವರೆಡ್ಡಿ ಗೌಡರೆಡ್ಡಿ ಬಿಳ್ಹಾರ, ಡಾ| ಸುಭಾಶ್ಚಂದ್ರ ಕೌಲಗಿ ಇತರರಿದ್ದರು. ಸದ್ಗುರು ಸಮರ್ಥ ಪರಮಾನಂದ ಶಿವಯೋಗಿಗಳ ಮಹಾತ್ಮೆ ನಾಟಕ ಜನಮನ ಸೂರೆಗೊಂಡಿತು.
ಪ್ರತಿಯೊಬ್ಬರೂ ಬದುಕಿನಲ್ಲಿ ಸದಾಚಾರ ಸಂಪನ್ನರಾಗಿ ಬಾಳಬೇಕು. ಯಾವುದೇ ರಾಗ ದ್ವೇಷಗಳಿಗೆ ಈಡಾದರೆ ಬಾಳು ಹಸನಾಗುವುದಿಲ್ಲ. ಸಾತ್ವಿಕತೆಯನ್ನು ಮೈಗೂಡಿಸಿಕೊಳ್ಳಬೇಕಾದರೆ ಒಳ್ಳೆಯ ಆಚಾರಗಳನ್ನು ಅನುಸರಿಸಬೇಕು. ಒಳ್ಳೆಯ ವಿಚಾರಗಳನ್ನು ಅರಿತು ಆಚರಿಸಿದಾಗ ಬಾಳು ಹಸನಾಗುತ್ತದೆ. -ಡಾ| ಗಂಗಾಧರ ಸ್ವಾಮೀಜಿ, ಪೀಠಾಧಿಪತಿ ಶ್ರೀ ವಿಶ್ವರಾಧ್ಯಮಠ ಅಬ್ಬೆತುಮಕೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hindu ಯುವಕ-ಯುವತಿಯರಿಗೆ ರಾಜ್ಯದಲ್ಲಿ ರಕ್ಷಣೆಯಿಲ್ಲ: ಅಮೀನರೆಡ್ಡಿ ಯಾಳಗಿ
Yadagiri; ರೊಟ್ಟಿ ಕೇಳಿದಕ್ಕೆ ಅನ್ಯಕೋಮಿನ ಯುವಕನಿಂದ ದಲಿತ ಯುವಕನ ಕೊಲೆ
NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್ ನಿವಾಸಕ್ಕೆ ಬಂದ ಜಾಧವ್!
Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
MUST WATCH
ಹೊಸ ಸೇರ್ಪಡೆ
Odisha ಕಾಲೇಜಿನ ವಿಡಿಯೋ ಉಡುಪಿಯದ್ದು ಎಂದು ವೈರಲ್: ಕೇಸ್ ದಾಖಲು
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Dr Rajkumar: ಇಂದು ರಾಜ್ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ