ಯಾದಗಿರಿ ಮತ್ತೆ ಎಂಟು ಮಂದಿಗೆ ಸೋಂಕು
Team Udayavani, Jul 2, 2020, 10:46 AM IST
ಯಾದಗಿರಿ: ಇಷ್ಟು ದಿನಗಳಿಂದ ಜಿಲ್ಲೆಯಲ್ಲಿ ಮಹಾರಾಷ್ಟ್ರದ ನಂಟು ಹೊಂದಿರುವ ಸೋಂಕಿತರೇ ಹೆಚ್ಚಾಗಿ ಪತ್ತೆಯಾಗಿ ಸಾಕಷ್ಟು ಆತಂಕ ಸೃಷ್ಟಿಸಿದ್ದರು. ಇದೀಗ ಸೋಂಕಿನ ಸಂಪರ್ಕರಕ್ಕೆ ಬರದ ಜನರು ಮತ್ತು ಸೋಂಕಿತರ ಸಂಪರ್ಕದಿಂದಲೇ ಸಮುದಾಯಕ್ಕೆ ಸೋಂಕು ಹರಡುತ್ತಿರುವುದು ಕಂಡು ಬರುತ್ತಿದೆ.
ಬುಧವಾರ ಮತ್ತೆ 8 ಜನರಲ್ಲಿ ಸೋಂಕು ದೃಢವಾಗಿದ್ದು ಇವರಲ್ಲಿ ಸುರಪುರ ಸಾರಿಗೆ ಘಟಕದ ಚಾಲಕ (ಪಿ-8228)ನ ಸಂಪರ್ಕದಿಂದ ಮತ್ತೆ ಇಬ್ಬರಿಗೆ ಸೋಂಕು ತಗುಲಿದೆ. ಹುಣಸಗಿ ತಾಲೂಕಿನ ಯಣ್ಣಿವಡಗೇರಾದ 38 ವರ್ಷದ ಪುರುಷ (ಪಿ-15475), ಸುರಪುರ ತಾಲೂಕಿನ ಚಿಂಚೋಡಿಯ 34 ವರ್ಷದ ಪುರುಷ (ಪಿ-15476)ಗೆ ಸೋಂಕು ತಗುಲಿದೆ.
ಇನ್ನು ಸಂಪರ್ಕವೇ ಪತ್ತೆಯಾಗದ 3 ಜನ ಗುರುಮಠಕಲ್ ತಾಲೂಕಿನ ಬದ್ದೇಪಲ್ಲಿಯ 30 ವರ್ಷದ ಮಹಿಳೆ (ಪಿ-15480), ಯಾದಗಿರಿಯ ಮುಸ್ಲಿಮ್ಪುರ ಗಾಂಧಿ ಚೌಕ್ನ 28 ವರ್ಷದ ಮಹಿಳೆ (ಪಿ-15481) ಹಾಗೂ ಹೊನಗೇರಾದ 28 ವರ್ಷದ ಪುರುಷ (ಪಿ-15482)ಗೆ ಸೋಂಕು ವಕ್ಕರಿಸಿದೆ. ಮಹಾರಾಷ್ಟ್ರದ ನಂಟು ಇರುವ ಮೂವರಲ್ಲಿ ಶಹಾಪುರ ತಾಲೂಕಿನ ಉರ್ಸ್ಗುಂಡಗಿಯ ಇಬ್ಬರು 35 ವರ್ಷದ ಮಹಿಳೆ (ಪಿ-15477), 20 ವರ್ಷದ ಮಹಿಳೆ (ಪಿ-15478) ಹಾಗೂ ಗೋಗಿಪೇಠದ 28 ವರ್ಷದ ಪುರುಷ (ಪಿ-15479) ಸೋಂಕಿಗೆ ಗುರಿಯಾಗಿದ್ದಾರೆ. ಬುಧವಾರ 132 ಜನರ ಮಾದರಿ ಸಂಗ್ರಹಿಸಲಾಗಿದ್ದು, 998 ಜನರ ವರದಿ ಬರಬೇಕಿದೆ. ಇಂದು 275 ವರದಿ ನೆಗೆಟಿವ್ ಸೇರಿ ಈವರೆಗೆ 24097 ಜನರ ವರದಿ ನೆಗೆಟಿವ್ ಬಂದಿದೆ. ಹೊಸದಾಗಿ ಒಂದು ಕಂಟೈನ್ಮೆಂಟ್ ಝೋನ್ ರಚಿಸಲಾಗಿದ್ದು ಅವುಗಳ ಸಂಖ್ಯೆ 81ಕ್ಕೆ ಏರಿಕೆಯಾಗಿದೆ. ಈವರೆಗೆ 949 ಸೋಂಕಿತರಲ್ಲಿ 837 ಜನರು ಗುಣಮುಖವಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್ ನಿವಾಸಕ್ಕೆ ಬಂದ ಜಾಧವ್!
Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
Tragedy: ಹೋಳಿ ಆಚರಣೆ ಬಳಿಕ ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ಹೋದ ಯುವಕ ನೀರು ಪಾಲು
Yadagiri; ಒಂದೇ ಕೇಂದ್ರದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ತಾಯಿ-ಮಗ