ನಾಲ್ಕುವರೆ ಕ್ವಿಂಟಾಲ್ ಭಾರ ಹೊತ್ತು 17 ಕಿ.ಮೀ. ಎತ್ತಿನಬಂಡಿ ಎಳೆದ ಯುವಕರು!
Team Udayavani, Jul 25, 2020, 1:16 PM IST
ಯಾದಗಿರಿ: ನಾಗರ ಪಂಚಮಿ ಬಂತೆಂದರೆ ಸಾಕು, ಇಲ್ಲಿನ ಗ್ರಾಮೀಣ ಭಾಗದಲ್ಲಿ ಸಾಹಸಗಳು ಮರೆಯುವ ಜಿದ್ದು ಕಟ್ಟಿ ಯುವಕರನ್ನು ಪ್ರೋತ್ಸಾಹಿಸುವ ಕೆಲಸಗಳು ಸಾಮಾನ್ಯ.
ಜಿಲ್ಲೆಯ ಶಹಾಪುರ ತಾಲೂಕಿನ ಬಲಕಲ್ ಗ್ರಾಮದಿಂದ 17 ಕಿ.ಮೀ ದೂರದ ಯಾದಗಿರಿ ಜಿಲ್ಲಾ ಕೇಂದ್ರದ ಬಸ್ ನಿಲ್ದಾಣಕ್ಕೆ ನಾಲ್ಕುವರೆ ಕ್ವಿಂಟಾಲ್ ಜೋಳ ಹೊತ್ತ ಎತ್ತಿನ ಗಾಡಿಯನ್ನು ಕೈಗಳು ಮೂಲಕ ನಾಲ್ಕುವರೆ ತಾಸಿಯಲ್ಲಿ ಎಳೆಯುವ ಪಂದ್ಯ ಆಯೋಜಿಸಲಾಗಿತ್ತು.
ಪಂದ್ಯದಲ್ಲಿ ಗೆದ್ದರೆ ಸ್ಥಳದಲ್ಲಿಯೇ 15 ಸಾವಿರ ರೂಪಾಯಿ ನಗದು ಬಹುಮಾನವನ್ನು ಸಹ ನೀಡುವ ಮಾತಾಗಿತ್ತು.
ಸಾಹಸದ ಕಾರ್ಯಕ್ಕೆ ಗ್ರಾಮದ ರಮೇಶ ನಿಂಗಪ್ಪ ಕಂದಳ್ಳಿ ಮತ್ತು ರಮೇಶ ಧರ್ಮಣ್ಣ ಪೂಜಾರಿ ಎನ್ನುವ ಯುವಕರು, ನಾಲ್ಕುವರೆ ಕ್ವಿಂಟಾಲ ಜೋಳ ಹೊತ್ತ ಎತ್ತಿನ ಬಂಡಿಯನ್ನು ಕೇವಲ ಎರಡು ಗಂಟೆ ನಲವತ್ತು ನಿಮಿಷದಲ್ಲಿ 17 ಕಿ.ಮೀ ಎಳೆದು ತರುವಲ್ಲಿ ಯಶಸ್ವಿಯಾಗಿದ್ದು, ಯುವಕರ ಸಾಧನೆಗೆ ಗ್ರಾಮದ ಜನರು ಪ್ರಶಂಸೆ ವ್ಯಕ್ತಪಡಿದ್ದಾರೆ.
ಯುವಕರು ಸಾಹಸ ಮಾಡಿದ್ದು ಎಲ್ಲಿಯೂ ನಿಲ್ಲದೇ ಎರಡುವರೆ ಗಂಟೆಯಲ್ಲಿ ಗುರಿಯನ್ನು ತಲುಪಿದ್ದು ಇದು ಮಾಮೂಲಿ ಮಾತಲ್ಲ ಎಂದು ಗ್ರಾಮದ ಹಿರಿಯರು ಯುವಕರಿಗೆ ಅಭಿನಂದಿಸಿದ್ದಾರೆ.
ಪಂದ್ಯ ಗೆದ್ದ ಯುವಕರಿಗೆ ಸ್ಥಳದಲ್ಲಿಯೇ 15 ಸಾವಿರ ಬಹುಮಾನವನ್ನು ವಿತರಿಸಿ, ಶಾಂತಗೌಡ ಕುರಕುಂದಿ, ಬಸವರಾಜಪ್ಪ ಗೌಡ ಬೀರಾದರ, ದೇವಪ್ಪ ಜಿಂಗಿ, ಸಾಬಣ್ಣ, ಹುಲಿಯಪ್ಪ, ರಮೇಶ, ನಿಂಗಪ್ಪ ವಿಜೇತ ಯುವಕರನ್ನು ಸನ್ಮಾನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hindu ಯುವಕ-ಯುವತಿಯರಿಗೆ ರಾಜ್ಯದಲ್ಲಿ ರಕ್ಷಣೆಯಿಲ್ಲ: ಅಮೀನರೆಡ್ಡಿ ಯಾಳಗಿ
Yadagiri; ರೊಟ್ಟಿ ಕೇಳಿದಕ್ಕೆ ಅನ್ಯಕೋಮಿನ ಯುವಕನಿಂದ ದಲಿತ ಯುವಕನ ಕೊಲೆ
NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್ ನಿವಾಸಕ್ಕೆ ಬಂದ ಜಾಧವ್!
Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ