ಚೆಂದದ ಉಡುಗೆ…ಬಣ್ಣ ಬಣ್ಣದ ಲೇಯರ್ ಕುರ್ತಿ
ಕೆಲವರಿಗೆ ತಿಳಿ ಬಣ್ಣದ ಜತೆ ಗಾಢ ಬಣ್ಣಗಳನ್ನು ಕೂಡ ತೊಡಲು ಇಷ್ಟವಿರುತ್ತದೆ.
Team Udayavani, Dec 11, 2020, 5:05 PM IST
Representative Image
ಮಹಿಳೆಯರಿಗಿಂದು ಚೆಂದದ ಉಡುಗೆಗಳಿಗೇನೂ ಕೊರತೆ ಇಲ್ಲ. ನವನವೀನ ಬಟ್ಟೆಗಳು ಇಂದು ಜನರ ಮನಸೆಳೆಯುತ್ತಿವೆ. ಅದೇ ರೀತಿ ಲೇಯರ್ ಕುರ್ತಿಗಳಿಗೂ ಬೇಡಿಕೆ ಹೆಚ್ಚಿದ್ದು ವಿವಿಧ ಮಾದರಿಯ ದಿರಿಸನ್ನು ಕೊಂಡುಕೊಳ್ಳುತ್ತಿದ್ದಾರೆ.
ಕೆಲವರಿಗೆ ತಿಳಿ ಬಣ್ಣದ ಜತೆ ಗಾಢ ಬಣ್ಣಗಳನ್ನು ಕೂಡ ತೊಡಲು ಇಷ್ಟವಿರುತ್ತದೆ. ಒಂದು ಲೇಯರ್ನಲ್ಲಿ ತಿಳಿ ಬಣ್ಣ ಇನ್ನೊಂದರಲ್ಲಿ ಗಾಢವಾದ ಬಣ್ಣ ಈ ಲೇಯರ್ಡ್ ಕುರ್ತಿಗಳಲ್ಲಿದ್ದು, ಇವುಗಳು ಖಾದಿ, ಹತ್ತಿ, ಉಣ್ಣೆ, ಶಿಫಾನ್, ಸ್ಯಾಟಿನ್ ಮಂತಾದ ಆಯ್ಕೆಗಳಲ್ಲಿ ಮಾರುಕಟ್ಟೆ ಯಲ್ಲಿ ಲಭ್ಯವಿದೆ. ಇದು ಬೇಸಿಗೆ ಕಾಲದಲ್ಲಿ ದೇಹವನ್ನು ತಂಪಾಗಿ, ಚಳಿಗಾಲದಲ್ಲಿ ಬೆಚ್ಚಗೆ ಇರಿಸುತ್ತದೆ. ಅದಲ್ಲದೆ ಇವುಗಳನ್ನು ಮದುವೆ ಸಮಾರಂಭಗಳಿಗೂ ತೊಡಬಹುದು ಜತೆಗೆ ಆಫೀಸ್, ಪಾರ್ಟಿಗಳಿಗೂ ಸೂಕ್ತವಾಗಿದೆ.
ಇದು ಎಲ್ಲಾ ಕಾಲಗಳಿಗೂ ಸೂಕ್ತವಾಗುವಂತೆ ಸ್ಲೀವ್ಲೆಸ್, ಬೇಕಾದಲ್ಲಿ ಉದ್ದ ತೋಳು, ಬೆಲ್ ಬಾಟಮ್ ತೋಳು, ಮುಕ್ಕಾಲು ತೋಳು, ಫುಶ್ ಅಪ್ ತೋಳು, ಹಾಫ್ಸ್ಲೀವ್ ತೋಳು, ಬಟನ್ಗಳಿರುವ ತೋಳು ಹೀಗೆ ಹಲವು ವಿಧದ ತೋಳುಗಳು ಲಭ್ಯವಿದೆ. ಇವುಗಳಿಗೆ ವಿಶೇಷವಾಗಿ ಕಾಲರ್ ಲಭ್ಯವಿದ್ದು, ಚೂಡಿದಾರ್ ಟಾಪ್ನಂತೆ ಬಗೆಬಗೆಯ ಕತ್ತಿನ ವಿನ್ಯಾಸಗಳೂ ಲಭ್ಯ. ಕ್ಯಾಶುಲ್ ಉಡುಗೆ ಆಗಿರಲಿ, ಸಾಂಪ್ರದಾಯಿಕವಾಗಿರಲು ಎಲ್ಲ ತರಹದ ಬಟ್ಟೆಗಳಿಗೂ ಕೂಡ ಸೈ ಎನಿಸುಕೊಳ್ಳುತ್ತದೆ ಈ ಡಬಲ್ ಲೇಯರ್ ಕುರ್ತಿ.
ಕಲರ್ ಆಯ್ಕೆಯಲ್ಲಿಇರಲಿ ಜಾಗ್ರತೆ
ಕೆಲವೊಮ್ಮೆ ಇಂತಹ ಲೇಯರ್ ಕುರ್ತಿಗಳನ್ನು ತೆಗೆದುಕೊಳ್ಳುವಾಗ ನಾವು ಬಣ್ಣವನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಎಡವುತ್ತೇವೆ ಅದಕ್ಕಾಗಿ ಮೊದಲು ಯಾವ ಬಣ್ಣ ನಮಗೆ ಹೊಂದಿಕೆಯಾಗುತ್ತದೆ ಎಂದು ತಿಳಿದು ಅನಂತರ ಆಯ್ದುಕೊಳ್ಳಬೇಕು. ಕೆಲವರಿಗೆ ತಿಳಿ ಬಣ್ಣದ ಬಟ್ಟೆಗಳು ಒಪ್ಪಿಗೆಯಾದರೆ, ಇನ್ನು ಕೆಲವರಿಗೆ ಗಾಢ ಬಣ್ಣ ಹೊಂದಿಕೆಯಾಗುತ್ತದೆ. ಆದ್ದರಿಂದ ಬಣ್ಣಗಳನ್ನು ಆಯ್ದುಕೊಳ್ಳುವಾಗ ಸ್ವಲ್ಪ ಗಮನವಿರಲಿ. ಕೆಲವು ಕಡಿಮೆ ದರದಲ್ಲಿ ಸಿಗುವ ಲೇಯರ್ ಕುರ್ತಿಗಳು ಕಲರ್ ಹೋಗುವ ಸಂಭವಿರುತ್ತದೆ ಆದ್ದರಿಂದ ಬಟ್ಟೆಯನ್ನು ಆಯ್ದುಕೊಳ್ಳುವಾಗ ಬಟ್ಟೆಯ ಕ್ವಾಲಿಟಿ ನೋಡಿ ಚೆನ್ನಾಗಿದೆಯೋ ಇಲ್ಲವೋ ಎಂಬುದನ್ನು ನೋಡಿ ಖರೀದಿಸಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ
ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು
ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’
ಫ್ಯಾಶನ್ ಶೋ ‘ಮೆಟ್ ಗಾಲಾ’ದಲ್ಲಿ ಗಣೇಶ ವಿಗ್ರಹ ಜೊತೆ ಕಾಣಿಸಿಕೊಂಡ ಸುಧಾ ರೆಡ್ಡಿ
ಗೋದಾವರಿ ನದಿ ತೀರದಲ್ಲಿ ಬೃಹತ್ ಗಾತ್ರದ ಬಸವನ ಹುಳು ಪತ್ತೆ, ಇದರ ಬೆಲೆ ಎಷ್ಟು ಗೊತ್ತಾ?
MUST WATCH
ಹೊಸ ಸೇರ್ಪಡೆ
Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!
IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?
Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ
B. Y. Raghavendra: “ಕಾಂಗ್ರೆಸ್ ನಾಯಕರ ಮನಸ್ಥಿತಿಗೆ ತಕ್ಕಂತೆ “ಚೊಂಬು’ ಜಾಹೀರಾತು’
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?