ಕೈ-ಕಾಲಿನ ಉಗುರುಗಳ ಸೌಂದರ್ಯ ಕಾಪಾಡಿಕೊಳ್ಳಿ!
Team Udayavani, Oct 29, 2020, 5:10 PM IST
ಕೈಗಳ ಅಂದ ಹೆಚ್ಚಿಸುವುದರಲ್ಲಿ ಉಗುರುಗಳಿಗೆ ಮಹತ್ವದ ಸ್ಥಾನ. ಕೈ-ಕಾಲಿನ ಉಗುರುಗಳ ಸೌಂದರ್ಯ ಕಾಪಾಡಲು ಮ್ಯಾನಿಕ್ಯೂರ್, ಪೆಡಿಕ್ಯೂರ್ನಂಥ ಹಲವು ವಿಧಾನಗಳಿವೆ. ಆದರೆ ಉಗುರು ಸದೃಢವಾಗಿ, ಆರೋಗ್ಯವಾಗಿ ಬೆಳೆದರೆ ಮಾತ್ರ ಸುಂದರವಾಗಿ ಕಾಣಲು ಸಾಧ್ಯ. ಬ್ಯೂಟಿ ಪಾರ್ಲರ್, ನೇಲ್ಪಾಲಿಶ್, ನೇಲ್ ಆರ್ಟ್ ಎಂದು ಹಣ ಖರ್ಚು ಮಾಡುವ ಮುನ್ನ, ಈ ಕೆಳಗಿನ ಅಂಶಗಳಿಗೆ ಗಮನ ಕೊಡಿ.
* ಉಗುರುಗಳು ಅಕಾಲಿಕವಾಗಿ ಕೆತ್ತಿ ಹೋಗುವುದನ್ನು ತಡೆಯಲು ಬಯೋಟಿನ್ ಅಂಶ ಮತ್ತು ಉಗುರುಗಳ ಹೊರ ಪೊರೆಯ ಆರೋಗ್ಯಕ್ಕೆ ವಿಟಮಿನ್ “ಇ’ ಅಂಶ ಅತಿ ಅವಶ್ಯ. ಈ ಪೋಷಕಾಂಶಯುಕ್ತ ಆಹಾರಗಳ ಸೇವನೆಯಿಂದ ಉಗುರು ಶುಷ್ಕವಾಗದೆ, ಜೀವಂತಿಕೆಯಿಂದ ಬೆಳೆಯುತ್ತವೆ.
* ಉಗುರು ಸರಿಯಾಗಿ ಬೆಳೆಯುವ ಮುನ್ನ ಕತ್ತರಿಸುತ್ತಾ ಇರಬೇಡಿ. ಉಗುರುಗಳು ಬೆರಳಿನ ಹೊರ ಪೊರೆಗೆ ಹತ್ತಿರವಾಗಿದ್ದರೆ, ಬ್ಯಾಕ್ಟೀರಿಯಾ ಅಥವಾ ಶಿಲೀಂದ್ರಗಳ ಸೋಂಕಿಗೆ ತುತ್ತಾಗುವ ಅಪಾಯವಿರುತ್ತದೆ.
* ಉಗುರು ಕತ್ತರಿಸಲು ನೇಲ್ ಕಟರ್ ಅನ್ನೇ ಬಳಸಿ. ಹಲ್ಲು, ಬ್ಲೇಡ್ ಬಳಸಿ ಉಗುರು ಕತ್ತರಿಸುವುದು ಸರಿಯಾದ ವಿಧಾನವಲ್ಲ.
*ಮನೆಕೆಲಸ ಮಾಡುವಾಗ ಉಗುರುಗಳಿಗೆ ಹಾನಿಯಾಗದಂತೆ ಗ್ಲೌಸ್ ಧರಿಸಬಹುದು.
* ರಾತ್ರಿ ಮಲಗುವ ಮೊದಲು, ಬೆಚ್ಚಗಿನ ನೀರಿನಲ್ಲಿ ಕೈ ತೊಳೆದು, ಉಗುರುಗಳ ಸುತ್ತ ಆಲಿವ್ಎಣ್ಣೆ ಮತ್ತು ವಿಟಮಿನ್ “ಇ’ ಸೇರಿಸಿ ಹಚ್ಚಿಕೊಳ್ಳಿ.
* ಉಗುರುಗಳು ಆರೋಗ್ಯಕ್ಕೆ ಪ್ರೊಟೀ, ಕ್ಯಾಲಿÒಯಂ ಅತ್ಯಗತ್ಯ. ಕ್ಯಾಲ್ಸಿಯಂ ಕೊರತೆಯಿಂದ ಉಗುರಿನ ಮೇಲೆ ಗೆರೆಗಳ ಗುರುತು ಮೂಡುತ್ತದೆ. ಆದ್ದರಿಂದ, ಸಾಕಷ್ಟು ಹಣ್ಣು, ಹಸಿರು ತರಕಾರಿ, ಹಾಲು, ಪನ್ನೀರ್, ಸೋಯಾ ಸೇವಿಸಿ.
* ಯಾವಾಗಲೂ ಉಗುರುಗಳಿಗೆ ನೇಲ್ ಪಾಲಿಶ್ ಹಚ್ಚಬೇಡಿ. ಉಗುರುಗಳು ಗಾಳಿ ಸೇವಿಸಬೇಕು.
*ನೇಲ್ ಪಾಲಿಶ್ನಲ್ಲಿರುವ ಅಸಿಟೋನ್ ಎಂಬ ರಾಸಾಯನಿಕ, ಉಗುರಿನ ತೇವಾಂಶವನ್ನು ಒಣಗಿಸುತ್ತದೆ. ಹಾಗಾಗಿ, ಕಡಿಮೆ ಅಸಿಟೋನ್ ಅಂಶವಿರುವ ಉಗುರು ಉತ್ಪನ್ನಗಳಿಗೆ ಆದ್ಯತೆ ಕೊಡಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ
ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು
ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’
ಫ್ಯಾಶನ್ ಶೋ ‘ಮೆಟ್ ಗಾಲಾ’ದಲ್ಲಿ ಗಣೇಶ ವಿಗ್ರಹ ಜೊತೆ ಕಾಣಿಸಿಕೊಂಡ ಸುಧಾ ರೆಡ್ಡಿ
ಗೋದಾವರಿ ನದಿ ತೀರದಲ್ಲಿ ಬೃಹತ್ ಗಾತ್ರದ ಬಸವನ ಹುಳು ಪತ್ತೆ, ಇದರ ಬೆಲೆ ಎಷ್ಟು ಗೊತ್ತಾ?
MUST WATCH
ಹೊಸ ಸೇರ್ಪಡೆ
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು